Thursday, January 5, 2017

ಮನದ ಮಾತು-301

ಮನದ ಮಾತು-301

ಬಿದ್ದಾಗ ಪೆಟ್ಟಾಗುತ್ತದೆ ಆದರೆ ನೋವಾಗುವದಿಲ್ಲ, ಯಾರಾದರೂ ಬೈದಾಗ ಬೇಸರವಾಗುತ್ತದೆ ಆದರೆ ಅವಮಾನವಾಗುವದಿಲ್ಲ.
ಕಳೆದುಕೊಂಡಾಗ ಪಡೆದುಕೊಳ್ಳುತ್ತೇನೆ
ಎನಿಸುತ್ತದೆ ಆದರೆ ನಿರಾಶೆಯಾಗುವದಿಲ್ಲ .
ಹಸಿವಾಗುತ್ತದೆ ಆದರೆ ಊಟ ಬೇಕೆನಿಸುವದಿಲ್ಲ.
ನಿದ್ದೆ ಆವರಿಸುತ್ತದೆ ಆದರೆ ಹಾಸಿಗೆಯನೇರುವದಿಲ್ಲ ,
ದೇಹ ಸವಿ ಸಂಪದಗಳು ಕಣ್ಮುಂದೆ ಕಂಗೊಳಿಸುತ್ತವೆ
ಆದರೆ ಮೈಮೇಲೆ ಸುಳಿಯುವದಿಲ್ಲ.
ಹಾಗಾದರೆ ನಿರಾಶಾ ಭಾವವೇ, ನಿರ್ವೀರ್ಯ ಮನೋಭಾವವೇ.
ಒಮ್ಮೊಮ್ಮೆ ಸಹನೆ ಕೂಡ ದೌರ್ಬಲ್ಯದಿ ದೌರ್ಜನ್ಯವಾಗಬಾರದೆಂದುಕೊಳ್ಳುತ್ತಲೇ ಮತ್ತೆ ಮೌನಿಯಾಗಿ ಅಂತರಂಗದ ಅಂತಃಸತ್ವವನರಿಯಲು ಧ್ಯಾನಸ್ಥನಾಗಿದ್ದೇನೆ.
----ಸಿದ್ದು ಯಾಪಲಪರವಿ

No comments:

Post a Comment