Thursday, November 11, 2010

ಒಬಾಮಾಗಳಿಗಾಗಿ ಇಲ್ಲಿ ಹುಡುಕಾಟ

ಮೂರು ದಿನಗಳ ಕಾಲ ಟಿ.ವಿ. ಬಿಟ್ಟು ಕದಲದಂತೆ ಹಿಡಿದು ಹಾಕಿದ ಅಮೇರಿಕಾ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ಮಾಧ್ಯಮಗಳ ಸ್ನೇಹಿಯಾದರು. ಅವರ ಮಾತು ನಡೆ, ವಿವಾದವಿಲ್ಲದ ಹೇಳಿಕೆಗಳು. ಸಕಾರಾತ್ಮಕ ನಿಲುವು ಅಸ್ಖರಿತ ನಿರೂಪಣೆ ಹೀಗೆ ಎಲ್ಲದರಲ್ಲೂ ದೊಡ್ಡಣ್ಣ ಮಿಂಚಿದ.
ಒಂದು ಬೃಹತ್ ರಾಷ್ಟ್ರದ ಅಧ್ಯಕ್ಷರಾಗಿ ರಾಜಕಾರಣದ ನಿಲುವಷ್ಟೇ ಅಲ್ಲದೆ ವಿವಿಧ ವಿಷಯಗಳ ಮೇಲೆ ಹೊಂದಿದ ಪ್ರಭುತ್ವ ಅಚ್ಚರಿ ಮೂಡಿಸಿತು.
ನಾಯಕರುಗಳು ಬೇರೆ ದೇಶಗಳಿಗೆ ಹೋದಾಗ ಸಿದ್ಧ ಭಾಷಣಗಳನ್ನು ಸಮರ್ಥಕವಾಗಿ ಓದಿ ಮೆಚ್ಚುಗೆ ಗಳಿಸುತ್ತಾರೆ. ಆದರೆ ಒಬಾಮಾ ಸಂವಾಹದ ಮೂಲಕ ಜಗತ್ತಿನ ಗಮನ ಸೆಳೆದರು. ಅದು ಅವರಲ್ಲಿದ್ದ ಆತ್ಮವಿಶ್ವಾಸಕ್ಕೆ ಸಾಕ್ಷಿಯಾತು.
ಭಾಷಣಕ್ಕೆ ಪೂರ್ವಸಿದ್ಧತೆ ಇದ್ದರೆ ಸಾಕು. ಆದರೆ ಸಂವಾದಕ್ಕೆ ಖಾಸಗಿ ವೈಯಕ್ತಿಕ ಬಂಡವಾಳ ಬೇಕಾಗುತ್ತದೆ. ಭಾರತೀಯ ಯುವಕರ ಶಕ್ತಿ ಸಾಮರ್ಥ್ಯ ಕೇಳಿ ತಿಳಿದಿದ್ದ ಒಬಾಮಾ, ವಿದ್ಯಾರ್ಥಿಗಳ ಸಂವಾಹದ ಮೂಲಕ ಸ್ವತಃ ಅನುಭವಿಸಿದರು.
ವಯಸ್ಸಿಗೂ ಮೀರಿದ ಪ್ರಭುದ್ಧ ಪ್ರಶ್ನೆಗಳಿಗೆ ವಿಚಲಿತರಾಗದೇ ಶಾಂತವಾಗಿ ತೂಕಬದ್ಧ ಉತ್ತರ ನೀಡಿದರು. ಪಾಕಿಸ್ತಾನದ ವಿಷಯ ಬಂದಾಗ ಮಕ್ಕಳನ್ನು ತೃಪ್ತಿ ಪಡಿಸುವ, ಕೆರಳಿಸುವ ಗೋಜಿಗೆ ಹೋಗಲಿಲ್ಲ. ಮಕ್ಕಳಿಗೆ ಎಷ್ಟು ಬೇಕೋ ಅಷ್ಟೇ ಉತ್ತರಿಸಿದರು.
ಅದೇ ಪಾಕಿಸ್ತಾನದ ವಿಷಯವನ್ನು ಪತ್ರಿಕಾಗ್ಟೋಗಳಲ್ಲಿ, ಸಂಸತ್ತಿನಲ್ಲಿ ಭಿನ್ನವಾಗಿ, ಖಾರವಾಗಿ ಪ್ರತಿಕ್ರಿಸಿದರು. ಈ ರೀತಿಯ ರೆಲೆವೆನ್ಸುಗಳನ್ನು ಬ್ಯಾಲೆನ್ಸ್ ಮಾಡಲು ತುಂಬಾ ಸಹನೆ ಬೇಕಾಗುತ್ತದೆ. ಮೂರು ದಿನಗಳ ಕಾಲ ಮೈ ತುಂಬಾ ಕಣ್ಣು, ಕಿವಿ ಇಟ್ಟುಕೊಂಡೆ ನಡೆದಾಡಿದರು. ಎಲ್ಲಿಯೂ ವಿವಾದಗಳ ಹುತ್ತಿಗೆ ಕೈ ಹಾಕದ ಜವಾಬ್ದಾರಿ ಪ್ರದರ್ಶಿಸಿದರು.
ಅಮೇರಿಕಾದ ವ್ಯಾಪಾರೀಕರಣ, ಜಾಗತೀಕರಣ, ಮಾರುಕಟ್ಟೆಯ ದುರುದ್ದೇಶಗಳನ್ನು ದೂರವಿಟ್ಟು ಆಲೋಚಿಸುವಂತೆ ಮಾಡಿದ ಹೆಗ್ಗಳಿಗೆ ಒಬಾಮಾ ಅವರದು. ಅಮೇರಿಕಾ ಎಂದರೆ ಕುತಂತ್ರ ವ್ಯಾಪಾರ ಎಂಬ ಭಾವ ಜಗತ್ತಿನಲ್ಲಿ ಬೆಳೆದಿತ್ತು. ಅದರ ಬದಲಾವಣೆಗೆ ಹಾಲಿ ಅಧ್ಯಕ್ಷ ಬಯಸುತ್ತಾರೆ ಎಂಬ ಆಶಯ ಗೊತ್ತಾತು. ಜವಾಬ್ದಾರಿ ಸ್ಥಾನದಲ್ಲಿರುವವರ ಹೇಳಿಕೆಗಳು ಅತ್ಯಂತ ಜವಾಬ್ದಾರಿಂದ ಕೂಡಿರಬೇಕು. ಅವರು ಏನಾದರೂ ಹೇಳಿದರೆ ಇಡೀ ದೇಶವೇ ಹೇಳಿದಂತೆ ಎಂದರ್ಥ. ಅಲ್ಲಿ ಮಾತನಾಡುವುದು ಕೇವಲ ಅವರ ನಾಲಿಗೆಯಲ್ಲ. ಅವರ ಜವಾಬ್ದಾರಿಯುತ ಸ್ಥಾನ, ಅಧಿಕಾರ ಈ ಎಚ್ಚರ ಪ್ರಜ್ಞೆ ಒಬಾಮಾರಲ್ಲಿದೆ.
ಎಷ್ಟೇ ತಾಕತ್ತು, ಅಧಿಕಾರ ದೇಶ ನೀಡಿದ್ದರೂ, ಅನಗತ್ಯ ಆಶ್ವಾಸನೆಗೆ ಮುಂದಾಗಲಿಲ್ಲ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ವಿಷಯದಲ್ಲಿಯೂ ಅದೇ ನಿಲುವು. ಚಪ್ಪಾಳೆ ಗಿಟ್ಟಿಸುವ ಧಿವಂತ ಇರಲಿಲ್ಲ.
ನಮ್ಮ ದೇಶದ ಎಷ್ಟು ರಾಜಕೀಯ ನಾಯಕರುಗಳಿಗೆ ಈ ಧೀಮಂತಿಕೆ ಇದೆ ? ಎಂಬುದು ನಮ್ಮನ್ನು ಕಾಡುತ್ತದೆ. ಕೇವಲ ಅಬ್ದುಲ್ ಕಲಾಂ ಮಕ್ಕಳೊಂದಿಗೆ ಮುಕ್ತ ಸಂವಾದ ಮಾಡುವ ಆತ್ಮವಿಶ್ವಾಸ ಹೊಂದಿದ್ದಾರೆ. ಆದರೆ ಅವರು ಅಲಂಕಾರಿಕ ಹುದ್ದೆಯಲ್ಲಿದ್ದು ಆ ಕೆಲಸ ಮಾಡಿದರು. ಆದರೆ ಶಾಸಕಾಂಗದ ಮುಖ್ಯಸ್ಥರಾದ ಪ್ರಧಾನಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಈ ಕಾರ್ಯಕ್ಕೆ ಕೈ ಹಾಕದಿರುವುದಕ್ಕೆ ಅವರ ಆತ್ಮ "ಶ್ವಾಸದ ಕೊರತೆ ಅಲ್ಲವೇ?
ಆರ್ಥಿಕ ತಜ್ಞ, ಹಿರಿಯ ಚಿಂತಕ, ಸ್ನೇಹ ಜೀವಿ, ಪ್ರಾಮಾಣಿಕ ಹೀಗೆ ಹತ್ತು ಹಲವು ಹೆಗ್ಗಳಿಕೆಗಳಿಗೆ ಪಾತ್ರವಾಗಿರುವ ನಮ್ಮ ಸಭ್ಯ ಪ್ರಧಾನಿಗಳಾದ ಮನಮೋಹನ ಸಂಘಜಿ ಕೂಡಾ ಎಲ್ಲೋ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ ಎನಿಸುತ್ತದೆ.
ಅವರು ಕಳೆದುಕೊಂಡಿರುವ ಸ್ವಾತಂತ್ರ್ಯವನ್ನು ೧೦ ಜನಪಥ್ ನಲ್ಲಿ ಯಾರೂ ಹುಡುಕುವ ಸಾಹಸವನ್ನು ಮಾಡುತ್ತಿಲ್ಲ. ಪ್ರಧಾನಿಗಳ ಕುರಿತು ಆಡುವ ಸದಭಿಪ್ರಾಯಗಳು ಎಲ್ಲಿಯೋ ಒಂದು ಕಡೆ ನಿಂತು ಬಿಡುತ್ತವೆ.
ಹೀಗೆ ಒಬಾಮಾ ತರಹ ಮಾತನಾಡುವುದು ಬೇಡ, ಕನಿಷ್ಠ ಆಲೋಚನೆಯನ್ನಾದರೂ ಮಾಡಲಿ ಎಂದು ಮನಸ್ಸು ಬಯಸುವುದೇ ತಪ್ಪೇ ಮಾಡದೆ ನಮ್ಮ ದೇಶದ ದರಿದ್ರ ರಾಜಕಾರಣಿಗಳಿಗೆ ಎಂದು ಬೈಯಬೇಕೆನಿಸಿದರೂ ಮನಸ್ಸು ತಡೆಯುತ್ತದೆ.
ಶಕ್ತಿಶಾಲಿ ಕೇಂದ್ರ ಕ್ಯಾಬಿನೆಟ್ ಸಚಿವರನ್ನು ಒಮ್ಮೆ ನೆನಪಿಸಿಕೊಂಡಾಗ ಹೌದು ಈ ದೇಶದಲ್ಲಿ ಪ್ರಜಾಪ್ರಭುತ್ವ ಎಳೆದಿದೆ ಎಂಬ ಆಶಾಕಿರಣ. ಪಿ.ಚಿದಂಬರಮ್, ಪ್ರಣವ್ ಮುಖರ್ಜಿ, ಕಪಿಲ್ ಸಿಬಾಲ್, ಎ.ಕೆ.ಅಂಟನಿ ಅಂತಹ ಮುತ್ಸದ್ದಿಗಳು ಕಣ್ಮುಂದ ಬಂದಾಗ ಸ್ವಲ್ಪ ಸಮಾಧಾನವಾದರೂ, ಅವರ್‍ಯಾರೂ ಸ್ವತಂತ್ರರಲ್ಲ ಎಂಬ ಕಾಂಗ್ರೆಸ್ ಬಂಧನ ಅಡ್ಡ ಬರುತ್ತದೆ.
ದೇಶದ ಯುವಕರೇ ನಿಜವಾದ ಭರವಸೆ ಎಂಬ ನಂಬಿಕೆ ಇಟ್ಟುಕೊಂಡು, ಅವರ ಖಾತೆಗಳ ಮೇಲೆ ಅಧ್ಯಯನ ಮಾಡಿ ನಾಡಿನ ಜನರೊಂದಿಗೆ ಮುಕ್ತ ಸಂವಾದ ಅನೇಕ ಸತ್ಯ ಸಂಗತಿಗಳನ್ನು ಬಯಲಿಗೆಳೆಯುವವರೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಯುವಕರಲ್ಲಿಯ ಈ ದೇಶದ ಬಗ್ಗೆ ನಂಬಿಕೆ ವಿಶ್ವಾಸ ಹೆಚ್ಚುತ್ತದೆ.
ಹೂರಣವಿಲ್ಲದೆ ಹೋಳಿಗೆ ಮಾಡುವುದನ್ನು ನಮ್ಮ ರಾಜಕಾರಣಿಗಳು ನಿಲ್ಲಿಸಲಿ. ಜವಾಬ್ದಾರಿ ಸ್ಥಾನದಲ್ಲಿರುವುವರು ವ್ಯಕ್ತಿಯಾಗಿ ಉಳಿದಿರುವುದಿಲ್ಲ. ಈ ದೇಶದ ಶಕ್ತಿ ಯಾಗಿರುತ್ತಾರೆ. ಅಲ್ಲಿ ಅವರು ಮಾತನಾಡುವುದಿಲ್ಲ ಅವರ ಸ್ಥಾನ ಮಾತನಾಡುತ್ತದೆ ಎಂಬ ಭರವಸೆಂದ ಇಲ್ಲಿಯ ಸ್ಥಾನ ಮಾತನಾಡುತ್ತದೆ ಎಂಬ ಭರವಸೆಯಿಂದ ಇಲ್ಲಿಯೂ ಒಬಾಮಾಗಳಿಗಾಗಿ ಹುಡುಕೋಣ.

No comments:

Post a Comment