Saturday, November 12, 2016

ಆರ್ಥಿಕ ತಲ್ಲಣ

Financial Emergency ಹಾಗೂ ಸಾಮಾನ್ಯರ ತಲ್ಲಣಗಳು

ಕೈ ಖಾಲಿ ಆಗೋ ಅನುಭವ ನನಗೇನು ಹೊಸದಲ್ಲ. ಕಿಸೆಯಲ್ಲಿ ದುಡ್ಡಿಲ್ಲದೆ ಎಲ್ಲಂದರಲ್ಲಿ ತಿರುಗುವ ಸ್ವಭಾವ , ಈ ನಿಷ್ಕಾಳಜಿ ಸ್ವಭಾವದಿಂದ ಅನೇಕ ಮುಜುಗರಗಳನ್ನು ಎದುರಿಸಿದ್ದೇನೆ.
ವ್ಯಕ್ತಿ ಯಾವುದೇ ವೃತ್ತಿಯಲ್ಲಿದ್ದರೂ ತನ್ನ ಯೋಗ್ಯತೆಗೆ ತಕ್ಕಂತೆ ಆರ್ಥಿಕ ಶಿಸ್ತನ್ನು ರೂಪಿಸಿಕೊಂಡಿರುತ್ತಾನೆ. ಅದು ವ್ಯಕ್ತಿಯ ಸಹಜ ಗುಣಧರ್ಮವೂ ಹೌದು ।
  ನಾನು ಆ ಶಿಸ್ತನ್ನು ರೂಪಿಸಿಕೊಂಡಿಲ್ಲ ಎಂಬುದು ಹಿತೈಷಿಗಳ ಆರೋಪ , ಅದು ನಿಜವೂ ಹೌದಲ್ಲ !
ಈಗ್ಯಾಕೆ ಈ ಆತ್ಮರತಿ ಅಂತೀರಾ ?
ಮಧ್ಯಮ ವರ್ಗದ ಶಿಸ್ತಿನ ಜನ financial emergency ಯಿಂದ ತಲ್ಲಣಗೊಂಡು ತಮ್ಮ ರಕ್ತ ಸುಟ್ಟುಕೊಂಡು ನೋಟುಗಳ ಭಜನೆ ಮಾಡುವ ಈ ಹೊತ್ತಿನಲ್ಲಿ ನಾನು ಹಣವಿಲ್ಲದೇ ನಿಶ್ಚಿಂತನಾಗಿರಲು ನನ್ನ zero balance ಕಾರಣ ನನ್ನ ಈ ಅಶಿಸ್ತು ಈಗ ವರವಾಗಿರಬಹು ಎಂಬ positive ಭಂಡತನ ಇರಬಹುದಾ ?

ಈ ತಲ್ಲಣವನ್ನು ಒಂದು ಕ್ಷಣ ಗಂಭೀರವಾಗಿ ಆಲೋಚಿಸುವ ಅಗತ್ಯವೂ ಇದೆ. ಸಾವಿರಾರು ಕೋಟಿ ಕಪ್ಪು ಹಣ ಬಿಳಿ ಆಗುವುದು ಆ ದೇವರಿಗೆ ಗೊತ್ತು ಆದರೆ ಮಧ್ಯಮ ವರ್ಗದವರ ತಲ್ಲಣಕ್ಕೆ ಸರಿಯಾದ guidelines ಅಗತ್ಯವಿದೆ.

ಈ ಸಮಸ್ಯೆ ಎಷ್ಟು ದಿನ ?  ಜನಸಾಮಾನ್ಯರು even bank ನವರು confusion ನಲ್ಲಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿ ಸಣ್ಣಪುಟ್ಟ ಕೆಲಸ ಮಾಡುವವರು ಕೆಲಸ ಕಳೆದುಕೊಳ್ಳುವಂತಾಗಿದೆ. ಮಧ್ಯಮ ವರ್ಗದವರು ಅತೀ ಶ್ರೀಮಂತರ ನೆರವಿನಿಂದ ಪಡೆಯುತ್ತಿದ್ದ ಅನುಕೂಲಗಳಿಗೆ ತಡೆಬಿದ್ದಿದೆ.
ಅನೇಕ ಸ್ತಿತ್ಯಂತರಗಳನ್ನು ಸಮರ್ಥವಾಗಿ ಎದುರಿಸಿದ ನಾವು ಇದನ್ನೂ ಎದುರಿಸಬಹುದು ಎಂಬ ವಿಶ್ವಾಸ ಕೊಂಚ ಕ್ಷೀಣಿಸಿದೆ .
ಜನಸಾಮಾನ್ಯರ ಬಾಳು ತುಂಬಾ ಅಸ್ತವ್ಯಸ್ತವಾದರೆ ಆಗಬಹುದಾದ ರಾಜಕೀಯ ಪರಿಣಾಮಗಳು ಅಯೋಮಯ , ಇದು ಕೂಡಾ 'ಬಡವನ ಕೋಪ ದವಡೆಗೆ ಮೂಲ ' ಎಂಬಂತಾಗಿದೆ.

ಅತೀ ಶ್ರೀಮಂತರು , ಕಪ್ಪು ಹಣವುಳ್ಳವರು ಮೇಲ್ನೋಟಕ್ಕೆ silent ಆಗಿ ಕಾಣಿಸುತ್ತಾರೆ ಆದರೆ ಮಧ್ಯಮ ವರ್ಗದವರ ಸಪ್ಪಳ ಜೋರಾಗಿ ಕೇಳಿಸುತ್ತಿದೆ ಇದಕ್ಕೆ ನೀವೇನಂತೀರಿ ?

    ----ಸಿದ್ದು ಯಾಪಲಪರವಿ

No comments:

Post a Comment