Tuesday, June 8, 2010

ಒಂದಿಷ್ಟು ವಿಳಂಬ - ಅಷ್ಟಿಷ್ಟು ಅಲೆದಾಟ

ರಜೆಯಲಿ ನಿರಂತರ ಬರೆಯುತ್ತಿದ್ದು, ಈಗ irregular ಆಗಿದ್ದಕ್ಕೆ ಬೇಸರವಿದೆ. ಬರೆಯುವ ತುಡಿತ ಕಾಡುತ್ತಿದ್ದರೂ ಸಮಯ ಹೊಂದಾಣಿಕೆ ಆಗುತ್ತಿಲ್ಲ.
ಮಾನಸೋಲ್ಲಾಸದ ಹತ್ತಾರು ಪ್ರಶ್ನೆಗಳು ನನ್ನೆದುರಿಗಿದೆ. ಅವುಗಳಿಗೆ ಉತ್ತರಿಸಬೇಕಾಗಿದೆ.
ಲವ್ ಕಾಲದ ಬಗ್ಗೆ ಅನೇಕರಿಗೆ ಕುತೂಹಲವಿದೆ. ನಟ ರವಿಚಂದ್ರನ್ ರೊಂದಿಗಿನ ಸಂದರ್ಶನ ಓದುವ ಕಾತುರವೂ ಇದೆ. ಜುಲೈ ಕೊನೆವಾರ ph.d ಮುಗಿಯಲೇಬೇಕೆಂಬ ಆದೇಶ ಮಾರ್ಗದರ್ಶಕರಾದ ಡಾ, ಎಂ. ಎಂ. ಕಲಬುರ್ಗಿಯವರದು ನನಗೂ ಅಷ್ಟೇ. ಡಾ. ಎಂ. ಎಂ. ಕಲಬುರ್ಗಿ ಅವರಂತಹ ಸಂಶೋಧಕರ ಕೈಯಲ್ಲಿ ಪದವಿ ಪಡೆಯುವ ಸಂಭ್ರಮವಿದೆ.
ಇತ್ತಿಚೀಗೆ ಹೆಚ್ಚು ಆಪ್ತರಾಗಿರುವ ಸಚಿವರಾದ ಶ್ರೀರಾಮುಲು ಕೆಲ assignment ಒಪ್ಪಿಸಿದ್ದಾರೆ.
ಎಲ್ಲವನು, ಎಲ್ಲದನು ಪೂರೈಸುವ ಧಾವಂತ. ಏನೇ ಇದ್ದರೂ ಮೊದಲ ಆಯ್ಕೆ ಓದು - ಬರಹ - ಪಾಠ. ಅಷ್ಟೇ ಇದರ ಸ್ವರೂಪ ಬದಲಾಗಬಹುದು. ಪ್ರವಾಸಕಥನ ಮತ್ತೊಮ್ಮೆ ಅಚ್ಚಿಗೆ ಹೋಗಬೇಕಿದೆ.
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಾಹಿತ್ಯ ಪುರಸ್ಕಾರದ ಫಲಿತಾಂಶ ಬಂದಿದೆ. ಸರ್ ಅವರೊಂದಿಗೆ ಚರ್ಚಿಸಿ, ಪ್ರಕಟಿಸಿ ಒಂದು ಸುಂದರ ಕಾರ್ಯಕ್ರಮ ರೂಪಿಸಬೇಕಿದೆ.
ಅಂದುಕೊಂಡಂತೆ ಮೇ 26 ಕ್ಕೆ ಕಾರ್ಯಕ್ರಮ ಆಗಬೇಕಿತ್ತು. ಆದರೆ ರಜೆಗಾಗಿ ಸಾಹಿತ್ಯದ ಸ್ನೇಹಿತರೆಲ್ಲ ಊರಲ್ಲಿರಲಿಲ್ಲ. ಹೀಗಾಗಿ ಜೂನ್ ಕೊನೆ ವಾರದಲ್ಲಿ ಕಾರ್ಯಕ್ರಮ ಆಯೋಜಿಸುವ ಾಲೋಚನೆ ಇದೆ.
ಈ ಮಧ್ಯ 2ನೇ ಕವನ ಸಂಕಲನ ಪ್ರಕಟಿಸಬೇಕಾಗಿದೆ. ಹೀಗೆ ಕೆಲಸಗಳು ಬಾಕಿ ಇದ್ದಾಗ ಬೇಸರವಾಗುವುದು ಸಹಜ. ಆದರೆ ಎಲ್ಲವನ್ನು ನಿಭಾಯಿಸುವ ತುಡಿತ ಇಟ್ಟುಕೊಂಡು ಅಲೆದಾಡುವುದರಲ್ಲಿ ಖುಷಿ ಇರುತ್ತದೆ.
ರಾತ್ರಿ ಬಿಡುವಾಗಿಸಿಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿ writing table ಹುಡುಕಬೇಕೆನಿಸುವ ಮನಸಿಗೆ ಋಣಿಯಾಗಿದ್ದೇನೆ.

No comments:

Post a Comment