Friday, February 5, 2010

ಪ್ರೊ. ಸಿದ್ದು ಯಾಪಲಪರವಿ

ರಾಷ್ಟ್ರಪ್ರಶಸ್ತಿ ಪುರಸ್ಕೃತ ತರಬೇತುದಾರ

ಪ್ರೊ. ಸಿದ್ದು ಯಾಪಲಪರವಿ

ಕವಿ,ಬರಹಗಾರ,ವಿಮರ್ಶಕ,ವ್ಯಕ್ತಿತ್ವ ವಿಕಸನ ತರಬೇತುದಾರರು

ಕೊಪ್ಪಳ ಜಿಲ್ಲೆ ಕಾರಟಗಿ ಗ್ರಾಮದ ವ್ಯಾಪಾರಿ ಪರಿವಾರದಲ್ಲಿ ೧೨-೪-೧೯೬೫ ರಂದು ಜನನ. ಬಸವರಾಜಪ್ಪ ಹಾಗೂ ಪಾರಮ್ಮನವರ ಹಿರಿಯ ಪುತ್ರ. ಕಾರಟಗಿಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಣ. ದಡ್ಡ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದರೂ ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳ ವಿಫಲತೆ ಹೆಚ್ಚಿನ ವ್ಯಾಸಂಗಕ್ಕೆ ಪ್ರೇರಣೆ. ಇಂಗ್ಲ್ಲಿಷ್ ಕಲಿಯಬೇಕೆಂಬ ಛಲ. ಪರಮಪೂಜ್ಯ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಖ್ಯಾತ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಂದ ಅಪರೂಪದ ಪ್ರೇರಣೆ-ಮಾರ್ಗದರ್ಶನ. ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಹಂತ ಹಂತವಾಗಿ ಯಶಸ್ಸು. ಕಳೆದ ಎರಡೂವರೆ ದಶಕಗಳ ಹೋರಾಟದ ಅನುಭವ ಅನನ್ಯ.

ಶಿಕ್ಷಣ : ಪಿಎಚ್.ಡಿ (ನೋಂದಣಿ ಡಾ. ಎಂ.ಎಂ. ಕಲಬುರ್ಗಿಯವರ ಮಾರ್ಗದರ್ಶನದಲ್ಲಿ) ೨೦೦೬

ಎಂ.ಬಿ. ಎ (ಮಾನವ ಸಂಪನ್ಮೂಲ ನಿರ್ವಹಣೆ) ೨೦೦೬

ಎಂ. ಎ. (ಇಂಗ್ಲಿಷ್ ಸಾಹಿತ್ಯ) ೧೯೮೯.

ವೃತ್ತಿ : ಇಂಗ್ಲಿಷ್ ಉಪನ್ಯಾಸಕ

ಸಧ್ಯ ಕೆ. ವಿ ಎಸ್. ಅರ್. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆಯಲ್ಲಿ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸುಲಭವಾಗಿ, ಸರಳ ಬೋಧನೆ, ನವಿರು ಹಾಸ್ಯದ ಮೂಲಕ ಇಂಗ್ಲಿಷ್ ಕಲಿಕೆಗೆ ಪ್ರೇರಣೆ.

ಪ್ರಕಟಿತ ಕೃತಿಗಳು : 'ನೆಲದ ಮರೆಯ ನಿಧಾನ', 'ನಾನೊಂದ ಕನಸ ಕಂಡೆ ' ಕವನ ಸಂಕಲನಗಳ , 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನ

ಜಾಗತಿಕ ಸಂಚಾರ : 'ದೇಶ ನೋಡು ಕೋಶ ಓದು' ಎಂಬ ವಾಣಿಯಂತೆ ೨೦೦೮ ರಲ್ಲಿ ಅನಿವಾಸಿ ಭಾರತೀಯರ ಆಹ್ವಾನದ ಮೇರೆಗೆ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳಿಗೆ ಭೇಟಿ. ದೇಶದ ತುಂಬೆಲ್ಲಾ ಸಂಚಾರ ಅಂದ್ರ, ಕೇರಳ, ಪಂಜಾಬ,ಪಶ್ಚಿಮ ಬಂಗಾಳ, ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ ಉತ್ತರಾಂಚಲ ರಾಜ್ಯಗಳಿಗೆ ಭೇಟಿ. ಅಲ್ಲಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘಟನೆಗಳೊಂದಿಗೆ ಸಂವಾದ ಚರ್ಚೆ. ತನ್ಮೂಲಕ ರಚಿಸಿದ 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನಕ್ಕೆ ಸಾಹಿತ್ಯಾಸಕ್ತರ ಹಾಗೂ ವಿಮರ್ಶಕರ ಮೆಚ್ಚುಗೆ.

ಪ್ರಶಸ್ತಿ,ಪುರಸ್ಕಾರ ; ಆಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ

ಬೆಳಗಾವಿ ಜಿಲ್ಲೆಯ ಹಾರೋಗೇರಿಯ ಆಜೂರ ಪುಸ್ತಕ ಪ್ರತಿಷ್ಠಾನವು ರಾಜ್ಯಮಟ್ಟದ ಶ್ರೇಷ್ಠ ಕೃತಿಗಳಿಗೆ ಪುರಸ್ಕಾರವನ್ನು ನೀಡುತ್ತದೆ.ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನಕ್ಕೆ ೨೦೦೯ ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿ ನೀಡಿದೆ.

ಸಾವಿರಕ್ಕೂ ಹೆಚ್ಚು ಉಪನ್ಯಾಸಗಳು

ಭಾಷಣಗಳೆಂದರೆ ಅವರಿವರು ಹೇಳಿದ ಧ್ಯೇಯ ವಾಕ್ಯಗಳ ಪುನರುಚ್ಚಾರಣೆ ಅಲ್ಲ ಎಂಬ ನಂಬಿಕೆ. ವಚನ ಚಳುವಳಿ ಕುರಿತು ಸಾವಿರಕ್ಕೂ ಹೆಚ್ಚು ವಿಚಾರಪೂರ್ಣ ಉಪನ್ಯಾಸಗಳು, ಕನ್ನಡ ಹಾಗೂ ಇಂಗ್ಲ್ಲಿಷ್ ಭಾಷೆಗಳಲ್ಲಿ ಮನ ಮುಟ್ಟುವಂತೆ ವೈಚಾರಿಕವಾಗಿ ಪ್ರತಿಪಾದನೆ.

ವ್ಯಕ್ತಿತ್ವ ವಿಕಸನ ತರಬೇತಿ : ನಾಲ್ಕಾರು ತಾಸುಗಳವರಗೆ ನಿರರ್ಗಳವಾಗಿ ತರಬೇತಿ ನೀಡುವ ಸಾಮರ್ಥ್ಯ, ನವಿರು ಹಾಸ್ಯ, ಮನ ಮುಟ್ಟುವ ನಿರೂಪಣೆ ನೇರ ಸಂವಹನಕ್ಕಾಗಿ ಹೆಸರುವಾಸಿ. ವಿದ್ಯಾರ್ಥಿಗಳು,ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳ ಅಧಿಕಾರಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಸಕರಾತ್ಮಕ ಧೋರಣೆ ಕುರಿತು ವಿಶೇಷ ಅಧ್ಯಯನ.

ಹರಿತ ಲೇಖನಿ, ಮೊನಚು ವಿಚಾರಗಳು : ನಿರಂತರ ಪದ್ಯ, ಕಥೆ ಹಾಗೂ ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ.ರಾಜಕೀಯ ಅಂಕಣಗಳು:ನಾಡಿನ ವಿವಿಧ ಪತ್ರಿಕೆಗಳಲ್ಲಿ ರಾಜಕೀಯ ಅಂಕಣಗಳು ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯ ಸಂಪಾದಕ ಸಲಹೆಗಾರರಾಗಿ ಸಾಂದರ್ಭಿಕ ಲೇಖನ ಹಾಗೂ ಸಂದರ್ಶನಗಳು.

ಸಾಕ್ಷ್ಯಚಿತ್ರಗಳ ನಿರ್ಮಾಣ : ದೂರದರ್ಶನ ಕೇಂದ್ರಕ್ಕಾಗಿ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಅವಲೋಕನ, ಭಾವೈಕ್ಯತೆ ಹಾಗೂ ನಮ್ಮೂರ ಜಾತ್ರೆ ಸಾಕ್ಷ್ಯ ಚಿತ್ರಗಳ ನಿರ್ದೇಶನ.

ಗ್ರಂಥ ಸಂಪಾದನೆ :

ಕಲಾವಿದ ಮನೋಹರ ಕಡ್ಲಿಕೊಪ್ಪ ಅವರ 'ಮನೋಹರ' , ಲಕ್ಕುಂಡಿ ಉತ್ಸವದ 'ಸ್ರ್ತೀ ಸಾಹಿತ್ಯ ಸೌರಭ', ಶಿಕ್ಷಣ ತಜ್ಞ ಎಸ್. ಎನ್ ಕಾತರಕಿಯವರ 'ಸಾಧಕ', ಅಭಿನಂದನಾ ಗ್ರಂಥಗಳ ಸಂಪಾದನೆ.

ದೂರದರ್ಶನ ಸಂದರ್ಶನ:

ಚಂದನ ವಾಹಿನಿಯ ಬೆಳಗು ಪರಿಚಯ ಮಾಲಿಕೆಯಲ್ಲಿ ಸಂದರ್ಶನದ ನೇರ ಪ್ರಸಾರದ ಮೂಲಕ ವ್ಯಕ್ತಿತ್ವದ ಸಮಗ್ರ ಪರಿಚಯ.

ರಂಗಾಭಿನಯ : ರಾಜ್ಯದ ವಿವಿಧ ಕಲಾತಂಡಗಳಲ್ಲಿ ವೈವಿದ್ಯಮಯ ಪಾತ್ರಗಳ ನಿರ್ವಹಣೆ.

ಶೈಕ್ಷಣಿಕ ಸಲಹೆಗಾರ:ವಗದುಗಿನ ಜಗದ್ಗುರು ಶಿವಾನಂದ ವಿಜ್ಞಾನ ಕಾಲೇಜಿನ ಸಲಹೆಗಾರರಾಗಿ ಹೊಸ ವಿಚಾರಗಳ ಆವಿಷ್ಕಾರ ಹಾಗೂ ಅನುಷ್ಠಾನ. ನಾಡಿನ ವಿವಿಧ ಸಂಸ್ಥೆಗಳ ಮೂಲಕ ವಿನೂತನ ಶೈಕ್ಷಣಿಕ ಕಲಿಕಾ ನಿರ್ವಹಣೆ.

ವಿವಿಧ ಸಂಘಟನೆಗಳ ಸಂಸ್ಥಾಪಕ:

ಸಮರಸ ಬಳಗ (ಸಾಂಸ್ಕೃತಿಕ ಸಂಘಡನೆ) ಕ್ರಿಯೇಟಿವ್ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮ್ಯಾನೇಜ್‌ಮೆಂಟ್ ( ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ) ರಂಗದರ್ಶನ ಕಲಾತಂಡ (ರಂಗ ಚಟುವಟಿಕೆಗಳ ಕೇಂದ್ರ) ಕೈಂಡ್ ಪರಿವಾರ (ಸ್ವಯಂ ಸೇವಾ ಸಂಸ್ಥೆ).

ಆಡಳಿತ ಮಂಡಳಿಯ ಸದಸ್ಯರು : ಹಂಪಿ ಕನ್ನಡ ವಿಶ್ವವಿದ್ಯಾಲಯ

೧೯೯೯ ರಿಂದ ೨೦೦೨ ರವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಣೆ. ವಿಶ್ವವಿದ್ಯಾಲಯದ ವಿವಿಧ ಸಮಿತಿಗಳ ಸದಸ್ಯರಾಗಿ ಮಾರ್ಗದರ್ಶನ.

ಜಿಲ್ಲಾ ಸಂಚಾಲಕರು ಬೆಳ್ಳಿಮಂಡಲ,೨೦೦೯ ರಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜಿಲ್ಲಾ ಸಂಚಾಲಕರಾಗಿ ಬೆಳ್ಳಿಮಂಡಲ ಫಿಲ್ಮ ಸೊಸಾಟಿಯ ಸ್ಥಾಪನೆ. ಸಿನೆಮಾ ಹಾಗೂ ಸಾಹಿತ್ಯ, ಸಿನೆಮಾ ಹಾಗೂ ಶಿಕ್ಷಣ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.

ಪುರಸ್ಕಾರ : ಜನಗಣತಿ ವಿಭಾಗದಲ್ಲಿ ಎಡಿಶನಲ್ ಚಾರ್ಜ ಆಫೀಸರ್ ಎಂದು ಕರ್ತವ್ಯ ನಿರ್ವಹಿಸಿ ಉತ್ತಮ ತರಬೇತಿ ನೀಡಿದ್ದಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಹಾಗೂ ಬೆಳ್ಳಿ ಪದಕ.

ವ್ಯಕ್ತಿತ್ವ ವಿಕಸನ ತರಬೇತುದಾರ :

ಕ್ರಿಯೇಟಿವ್ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮ್ಯಾನೇಜಮೆಂಟ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಧಿಕಾರಿಗಳಿಗೆ, ಸರಕಾರೇತರ ಸಂಸ್ಥೆಗಳ ಸಮಾಜ ಸೇವಕರಿಗೆ ವ್ಯಕ್ತಿತ್ವ ವಿಕಸನ ತರಬೇತಿ, ಒಂದು ದಿನ, ಎರಡು ದಿನ ಹಾಗೂ ಮೂರು ದಿನಗಳ ಅವಧಿಯ ವಿಕಸನ ತರಬೇತಿ ಪಠ್ಯಕ್ರಮ. ದಿನಕ್ಕೆ ಆರರಿಂದ ಎಂಟು ತಾಸುಗಳವರೆಗೆ ನಿರಂತರ ತರಬೇತಿ ನೀಡುವ ಸಾಮರ್ಥ್ಯ.

" ಯುರೋಪ್‌ನ ಇಂಗ್ಲೆಂಡ್ ದೇಶದ ವಿವಿಧ ಶೈಕ್ಷಣಿಕ ಸಂಸ್ಥೆಗಳ ಕೌನ್ಸೆಲಿಂಗ್ ಕೇಂದ್ರಗಳಿಗೆ ಭೇಟಿ, ವಿಶೇಷ ಅಧsಯನ.

" ಮಾನವ ಶಾಸ್ತ್ರ, ಮಾನಸ ಶಾಸ್ತ್ರಗಳ ವಿಷಯಗಳಲ್ಲಿ ಆಳವಾದ ಆಸಕ್ತಿ, ಸಕಾರಾತ್ಮಕ ಧೋರಣೆಯನ್ನು ಪ್ರತಿಪಾದಿಸಲು ವಚನ ಸಾಹಿತ್ಯವನ್ನು ಆಧರಿಸಿದ ವಿಶೇಷ ಉದಾಹರಣೆ.

" ಪದವಿ, ಸ್ನಾತಕೋತ್ತರ, ಮ್ಯಾನೇಜಮೆಂಟ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಆಯೋಜನೆ ಸಾವಿರಾರು ವಿದ್ಯಾರ್ಥಿಗಳಿಗೆ, ಐದನೂರಕ್ಕೂ ಹೆಚ್ಚು ಶಿಕ್ಷಕರಿಗೆ ನೂರಾರು ಅಧಿಕಾರಿಗಳಿಗೆ .

" ಕೆ. ಎಲ್. ಇ. ಸಂಸ್ಥೆಯ ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಹಾಗೂ ಎನ್. ಸಿ. ಸಿ. ವಿದ್ಯಾರ್ಥಿಗಳಿಗೆ.

" ಜೆ. ಎಸ್. ಎಸ್. ವಿದ್ಯಾಪೀಠ ಸುತ್ತೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ವಿಶೇಷ ಉಪನ್ಯಾಸ. ದೇಶದ ವಿವಿಧ ರಾಜ್ಯಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತರಬೇತಿ ನೀಡಿದ ಹೆಗ್ಗಳಿಕೆ.

" ಕರ್ನಾಟಕ ಸರಕಾರದ ಗ್ರಾಮೀಣಾಭಿವೃಧ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ವಯಸ್ಕರ ಶಿಕ್ಷಣ ಇಲಾಖೆ, ಕೇಂದ್ರ ಸರಕಾರದ ಜನಗಣತಿ ಇಲಾಖೆಯ ವಿವಿಧ ಅಧಿಕಾರಿಗಳಿಗೆ.

" ಸಕಾರಾತ್ಮಕ ಧೋರಣೆ, ಮನೋನಿಗ್ರಹ, ಸಂವಹನ ಕೌಶಲ್ಯ, ಟೈಮ್ ಮ್ಯಾನೇಜಮೆಂಟ್ ಇಂಗ್ಲಿಷ್ ಭಾಷಾ ಕೌಶಲ್ಯಗಳ ಕುರಿತು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ. ಪಾರದರ್ಶಕ ನಿಲುವು ಮತ್ತು ವ್ಯಕ್ತಿತ್ವ ವಿಕಸನದ ಕುರಿತು ವಿಷಯ ಪರಿಣಿತಿ.

" ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಕೇಂದ್ರದ ಮೂಲಕ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ವಿಶೇಷ ಅಧ್ಯಯನ ಯೋಜನೆ ನಿರ್ವಹಣೆ.

" ಹಂಪಿ ಕನ್ನಡ ವಿಶ್ವವಿದ್ಯಾಲಯ ಪದವಿ ಕಾಲೇಜು ಉಪನ್ಯಾಸಕರಿಗಾಗಿ ಆಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ ವಿಶೇಷ ಉಪನ್ಯಾಸಗಳು.

" ಕನಕದಾಸ ಶಿಕ್ಷಣ ಸಮಿತಿಯ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಕೇಂದ್ರ (ಕರ್ನಾಟಕ ವಿಶ್ವವಿದ್ಯಾಲಯ) ದಲ್ಲಿ ಅತಿಥಿ ಪ್ರೊಫೆಸರ್.

" ಧ್ಯಾನ, ಪ್ರಾಣಾಯಾಮಗಳೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಗೀತ, ವಿಡಿಯೋ ಸಾಧನಗಳ ಬಳಕೆಯ ಮೂಲಕ. ಕರ್ನಾಟಕ, ಆಂದ್ರ ಹಾಗೂ ತಮಿಳುನಾಡಿನ ವಿವಿಧ ಬಿ. ಎಡ್., ಡಿ. ಎಡ್. ವಿದ್ಯಾರ್ಥಿಗಳಿಗೆ 'ಕ್ಲಾಸ್‌ರೂಮ್ ಕಲ್ಚರ್' ಕುರಿತು ವಿಶೇಷ ಉಪನ್ಯಾಸ.

" ಗದಗ ಜಿಲ್ಲೆಯ ೨೦೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೀದಿ ನಾಟಕಗಳ ಮೂಲಕ ಜನಜಾಗೃತಿ ಜಾತಾದ ನಾಯಕತ್ವ.

" ೨೦೦೧ ಹಾಗೂ ೨೦೦೨ರ ಸಾಲಿನ ಜನಗಣತಿಯಲ್ಲಿ ಸ್ಪೆಶಲ್ ಎಡಿಶನಲ್ ಚಾರ್ಜ್ ಆಫೀಸರ್ ಆಗಿ ಕರ್ತವ್ಯ ನಿರ್ವಹಣೆ ಎನ್ಯೂಮರೇಟರ್ಸ್ ಹಾಗೂ ಸುಪರ್‌ವೈಜರಗಳಿಗೆ ತರಬೇತಿ ನೀಡಿದ್ದಕ್ಕೆ ಭಾರತ ಸರಕಾರದ ಗೃಹ ಇಲಾಖೆಂದ ಬೆಸ್ಟ್ ಎಡಿಶನಲ್ ಚಾರ್ಜ್ ಅಫೀಸರ್ ಎಂದು ರ್‍ಟ್ರಾಯ ಪುರಸ್ಕಾರ ಹಾಗೂ ಬೆಳ್ಳಿ ಪದಕ.

ಯುರೋಪ್‌ನ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳ ಭೇಟಿ :

ಇಂಗ್ಲಿಷ್ ಕಲಿಕಾ ಬೋಧನೆ, ವ್ಯಕ್ತಿತ್ವ ವಿಕಸನ ತರಬೇತಿ, ವಚನ ಚಳುವಳಿ ಹಾಗೂ ಜಾಗತೀಕರಣದ ಹಿನ್ನಲೆಯಲ್ಲಿ ಅಸ್ಖಲಿತ ಉಪನ್ಯಾಸ ನೀಡುವ ಇವರಿಗೆ ಪ್ರಸ್ತುತ ಪ್ರವಾಸ ಹೆಚ್ಚು ನೆರವಾಗಿದೆ. ವೃತ್ತಿಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅನುದಾನಿತ ಕೆ. ವಿ. ಎಸ್. ಆರ್. ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಸಿದ್ದು ಯಾಪಲಪರವಿಯವರ ಶ್ರದ್ಧೆ, ಆಸಕ್ತಿ, ಅಂತರಾಷ್ಟ್ರೀಯ ಸಂಬಂಧಗಳ ಮೂಲಕ ಸ್ನೇಹಿತರ ಹಾಗೂ ಬಂಧುಗಳ ನೆರವಿನಿಂದ ವೈಯಕ್ತಿಕವಾಗಿ ಹತ್ತಾರು ಸಾವಿರ ಮೈಲುಗಳನ್ನು ಕೇವಲ ೨೪ ದಿನಗಳಲ್ಲಿ ಸಂಚರಿಸಿದ್ದು ಸ್ಮರಣೀಯ.

ಅನಿವಾಸಿ ಭಾರತೀಯರ ಆಹ್ವಾನದ ಮೇರೆಗೆ ೨೦೦೮ ಮೇ ತಿಂಗಳಿನಲ್ಲಿ ಯುರೋಪ್‌ನ ಯುನೈಟೆಡ್ ಕಿಂಗ್‌ಡಮ್ ಪ್ರಾಂತದ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳಿಗೆ ಭೇಟಿ.

ವ್ಯಕ್ತಿತ್ವ ವಿಕಸನ ತರಬೇತುದಾರ, ಕವಿ ಹೃದಯದ ಸಿದ್ದು ಯಾಪಲಪರವಿ ಅವರಿಗೆ ಯುರೋಪ್ ಭೇಟಿ ವಿಶಿಷ್ಠ ಅನುಭವಗಳನ್ನು ಒದಗಿಸಿದೆ. ವೃತ್ತಿಂದ ಇಂಗ್ಲಿಷ ಉಪನ್ಯಾಸಕ; ಪ್ರವೃತ್ತಿಂದ ಕನ್ನಡದ ಬರಹಗಾರರಾಗಿರುವ ಕವಿಗೆ ಯುರೋಪ್ ಭೇಟಿ ಅನೇಕ ವಿನೂತನ ಆವಿಷ್ಕಾರಗಳನ್ನು ಒದಗಿಸಲು ಪೂರಕವಾತು.

ಅಲ್ಲಿನ ಜನ ಜೀವನ, ಶಿಕ್ಷಣ ಪದ್ಧತಿ ಸಂಸ್ಕೃತಿ ಕವಿ ಸಾಹಿತಿಗಳ ಐತಿಹಾಸಿಕ ಸ್ಥಳಗಳ ಭೇಟಿ, ಕೌನ್ಸೆಲಿಂಗ್ ಕೇಂದ್ರಗಳ ಕಾರ್ಯನಿರ್ವಹಣೆ ಹಾಗೂ ಪಾಶ್ಚಿಮಾತ್ಯ ಬದುಕಿನ ವಾಸ್ತವದ ಪರಿಣಾಮ ಅರಿಯಲು ಸಂಪೂರ್ಣ ಅಧ್ಯಯನದೊಂದಿಗೆ ಪ್ರಸ್ತುತ ಭೇಟಿಯನ್ನು ಬಳಸಿಕೊಳ್ಳಲಾತು. ಯುರೋಪ್ ಯಾತ್ರೆಯಲ್ಲಿನ ಪ್ರತಿ ಅನುಭವಗಳನ್ನು ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಮೂಲಕ ದಾಖಲಿಸಿಕೊಳ್ಳುವುದಲ್ಲದೆ, "ಎತ್ತಣ ಮಾಮರ ಎತ್ತಣ ಕೋಗಿಲೆ"ಯಲ್ಲಿ ತುಂಗೆಯಿಂದ ದ ಎವನ್‌ವರೆಗಿನ ಅನುಭವಗಳನ್ನು ಪ್ರವಾಸ ಕಥನವಾಗಿ ದಾಖಲೆ.

ಸಾಹಿತ್ಯ, ಮಾನವ ಶಾಸ್ತ್ರ, ಮನ:ಶಾಸ್ತ್ರ ಹಾಗೂ ವಚನ ಸಾಹಿತ್ಯದಲ್ಲಿ ಆಳ ಅಧ್ಯಯನ, ಪ್ರಚಲಿತ ವಿಷಯಗಳ ಮೇಲಿನ ವಿಚಾರಪೂರ್ಣ eನಾರ್ಜನೆಗೆ ಯುರೋಪ್ ಭೇಟಿ .

ಇಂದು ನಮ್ಮ ಯುವಕರು ವಿದೇಶ ಪ್ರವಾಸ ಕೈಗೊಳ್ಳುವ ಅನಿವಾರ್ರ್ಯತೆ ಇದ್ದು, ಅಲ್ಲಿ ಅವರು ಎದುರಿಸಬಹುದಾದ ಸಮಸ್ಯೆಗಳ ಸ್ಥಿತ್ಯಂತರದ ಅನುಭವಗಳನ್ನು ಸಮರ್ಥವಾಗಿ ನಿಭಾಸಲು ಸೂಕ್ತ ಮಾರ್ಗದರ್ಶನ ನೀಡುವ ನಿರ್ಧಾರ. ಒಬ್ಬ ಕ್ರಿಯಾಶೀಲ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಲು ಸಾಧ ಎಂಬುದಕ್ಕೆ ಪ್ರೊ. ಯಾಪಲಪರವಿ ನಿದರ್ಶನ. ಗ್ರಾಮೀಣ ಪ್ರದೇಶದ ಕನ್ನಡ ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ಸತತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸುತ್ತಿರುವುದು ನಮ್ಮ ಹೊಸ ತಲೆಮಾರಿನ ಯುವ ಜನಾಂಗಕ್ಕೆ ಇವರು ಮಾದರಿ.

ಕವಿ

ವಿದ್ಯಾರ್ಥಿದಸೆಂದಲೂ ಕಾವ್ಯ ರಚನೆಯಲ್ಲಿ ಆಸಕ್ತಿ. ವಿದ್ಯಾರ್ಥಿ ಕವಿ ಸಮ್ಮೇಳನಗಳಲ್ಲಿ,

ಧಾರವಾಡ ಆಕಾಶವಾಣಿ ಕೇಂದ್ರದಿಂದ ಸ್ವ ರಚಿತ ಕವನಗಳ ನಿವೇದನೆ.

ನಾಡಿನ ಹೆಸರಾಂತ ಉತ್ಸವಗಳಾದ ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕ"ಗ್ಠೋಗಳಲ್ಲಿ ಕವಿತೆಗಳ ನಿವೇದನೆ.

ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ಸಂಘಟನೆಗಳು ಪ್ರಕಟಿಸಿದ ಸಂಕಲಿತ ಸಂಕಲನಗಳಲ್ಲಿ ಕವನಗಳು ಪ್ರಕಟಿತ.

ನಾಡಿನ ದಿನಪತ್ರಿಕೆ, ವಾರ ಪತ್ರಿಕೆ, ಹಾಗೂ ಸಾವಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆದಿವೆ. ಮೊದಲ ಸ್ವತಂತ್ರ ಸಂಕಲನ 'ನೆಲದ ಮರೆಯ ನಿಧಾನ' ೨೦೦೭ ಹಾಗೂ ೨೦೦೮ ರಲ್ಲಿ ಪ್ರಕಟಿತ.

ಸ್ತ್ರೀ ಸಂವೇದಿ ಪದ್ಯಗಳ ಸಂಕಲನ 'ನಾನೊಂದ ಕನಸ ಕಂಡೆ' ಕವಿಗಿರುವ ಭಾವಪರವಶತೆಯನ್ನು ದಾಖಲಿಸಿದೆ.

ಕತೆಗಾರ :

ಇಂಗ್ಲಿಷ್‌ನ ಅನೇಕ ಕತೆಗಳು ಕನ್ನಡಕ್ಕೆ ಹಾಗೂ ಕಾವ್ಯಾತ್ಮಕ ಭಾಷೆಯ ಮೂಲಕ ಕತೆ ಬರೆಯುವುದನ್ನು ಕರಗತ ಮಾಡಿಕೊಂಡು ಸ್ವತಂತ್ರ ಕತೆಗಳು ಸಾ"ತ್ಯ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ.

ವಿಮರ್ಶಕ :

ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೂಂಡ ವಿಮರ್ಶಾ ಲೇಖನಗಳು. ಗದ್ಯ, ಪದ್ಯ ಪ್ರಕಾರಗಳಲ್ಲಿ ಸಮಾನ ಹಿಡಿತ ಹೊಂದಿರುವುದರಿಂದ ಓದಿಸಿಕೊಂಡು ಹೋಗುವ ಇವರ ಬರಹ, ನವಿರು ಹಾಸ್ಯ, ನೇರ ನಿರೂಪಣೆಗಳ ಮೂಲಕ ಬಹುಜನರಿಗೆ ತಲುಪಿದೆ.

ಧ್ಯೇಯ ಹಾಗೂ ಗುರಿ

ಬದುಕೆಂಬುದು ನಿಂತ ನೀರಲ್ಲ, ನೆಲದ ಮರೆಯ ನಿಧಾನದಂತೆ ಸತತ ಅಧ್ಯಯನ, ಪಾರದರ್ಶಕ ವರ್ತನೆ ಹಾಗೂ ಸಕಾರಾತ್ಮಕ ಧೋರಣೆಯೊಂದಿಗೆ ಪರಿಶ್ರಮದಿಂದ ಬದುಕುವದು.

ವಿಳಾಸ :

(ಇಂಗ್ಲಿಷ್ ವಿಭಾಗ ಕೆ.ವಿ.ಎಸ್ ಆರ್ ಕಾಲೇಜು)

ಸಾಂಗತ್ಯ ಪ್ರಕಾಶನ, ಕಳಸಾಪೂರ ರಸ್ತೆ,

ಗದಗ - ೫೮೨೧೦೩

೯೪೪೮೩೫೮೦೪೦

siddu.yapal@gmail.com

1 comment: