Sunday, October 31, 2010

ಉಳಿಯದ ಸ್ನೇಹ- ಮರೆಯಲಾಗದ ಕಾಣಿಕೆ

ಮುಂದಿನ ಪ್ರವಾಸದಲ್ಲಿ ಕೊಂಚ ಗಂಭೀರವಾಗಿದ್ದರೂ, ನಿನ್ನ ಸಾಮಿಪ್ಯ ಬೇಕೆನಿಸುತ್ತಿತ್ತು. ಮನಸ್ಸು ನಿಯಂತ್ರಣ ಕಳೆದುಕೊಂಡರೂ ನಿನ್ನಯ ಅಳು ನೆನಪಾಗಿ ಮೌನಿಯಾದೆ.
ನನ್ನ ಮೌನವು ನಿನಗೆ ಇಷ್ಟವಾಗಲಿಲ್ಲ. ನಾನು ಸಹಜವಾಗಿ ಮೊದಲಿನಂತೆ ಲವ ಲವಿಕೆಯಿಂದ ಇರಲಿ ಎಂಬ ನಿನ್ನ ನಿರೀಕ್ಷೆ ಸುಳ್ಳಾಯಿತು. ನಾನು ಅಂತರ್ಮುಖಿಯಾದೆ. ಏನನ್ನೋ ಕಳೆದುಕೊಂಡೆ ಜೀವನೋತ್ಸಾಹ ಇಲ್ಲದಾಯಿತು. ನಿನ್ನನ್ನು ಕಳೆದುಕೊಳ್ಳುವುದು ನೆನಪಾದರೆ ಸಾಕು ಕುಗ್ಗಿಹೋಗುತ್ತೇವೆ.
ನಾನೇನು ನಿನ್ನನ್ನು ಬಯಸಿಯೇ ಇರಲಿಲ್ಲ. ಆದರೆ ಪ್ರಾಮಾಣಿಕ ಸ್ನೇಹ ನನ್ನನ್ನು ಆಳಕ್ಕೆ ನೂಕಿತ್ತು. ಅಲ್ಲಿಂದ ಮೇಲೇರಲು ಸಾಧ್ಯವಾಗಲೇ ಇಲ್ಲ.
ಹೀಗೆ ಗಟ್ಟಿ ಧೈರ್ಯ ತಗೆದುಕೊಂಡು, ಭವಿಷ್ಯವನ್ನು ಕಲ್ಪಿಸಿಕೊಂಡಾಗ ಭಯವಾಯಿತು. Insecure ಭಾವನೆ ಹೆಚ್ಚಾಯಿತು. ನಾಳೆ ರಾತ್ರಿ ಊರು ತಲುಪುತ್ತೇವೆ. ಹೋದ ಮೇಲೆ ಪರೀಕ್ಷಾ ತಯಾರಿ ಆರಂಭ.
ಆ ಪ್ರಾಯದಲ್ಲಿ ಜಾಣರ ಗುಂಪೊಂದು, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಒಟ್ಟಾಗಿ study ಮಾಡುವ ಯೋಜನೆಯನ್ನು ಶಿಕ್ಷಕರು ರೂಪಿಸಿದದರು. ಹೇಗಿದ್ದರೂ ಅಲ್ಲಿ ಮತ್ತೆ ಒಟ್ಟಾಗಿ ಇರುತ್ತೇವಲ್ಲ ಎಂಬ ನಂಬಿಕೆ ಬೇರೆ.
ನನ್ನ ತುಂಟತನವನ್ನು ನಿಯಂತ್ರಿಸಿಕೊಂಡು ಗಂಬೀರವಾಗಿ ನಿನ್ನೊಂದಿಗೆ ವರ್ತಿಸಲಾರಂಸಿದೆ. ಆದರೆ ಮೊದಲಿನ ಸಹಜತೆ ಉಳಿಯಲಿಲ್ಲ. ಇಷ್ಟೊಂದು ಸಣ್ಣ ವಯಸ್ಸಿಗೆ, ಇಷ್ಟೊಂದು ದೊಡ್ಡ ಪ್ರಮಾದ ನಡೆಯಬಹುದು ಅಂದುಕೊಂಡಿರಲಿಲ್ಲ.
ಒಂಚೂರು ಗಂಭೀರವಾಗಿ ಆಲೋಚಿಸಿದಾಗ ಭವಿಷ್ಯ ಕರಾಳವೆನಿಸಿತು. ಬದುಕಿನಲ್ಲಿ ಯಶಸ್ವಿಯಾಗದಿದ್ದರೆ ಹೇಗೆ? ಅದಕ್ಕೆ ಕಾರಣ ಯಾರು? ಎಂಬ ಆಲೋಚನೆಗಳು ಆರಂಭವಾದ ಕೂಡಲೇ ನಿನ್ನ ಮೇಲೆ ಬೇಸರ ಉಂಟಾಯಿತು. ನೀನು ಪ್ರೀತಿಯನ್ನು ತೋರಿಸದೇ ಇದ್ದರೆ, ಸಹಿಸಿಕೊಂಡಿದ್ದರೆ ನಾನು ಬಚಾವಾಗುತ್ತಿದ್ದೆ ಎಂಬ ಹುಸಿ ಆರೋಪಿಗಳು ಆರಂಭವಾದರೂ ಸುಮ್ಮನೆ ಸಹಿಸಿಕೊಂಡೆ. ಕೊನೆದಿನ, ಮೊದಲ ದಿನದಂತೆ ಅಪರಿಚಿತವಾಗಿಯೇ ಬಿಳ್ಕೋಟ್ಟಾಗ ತಳಮಳ.
ನಾಳೆಯಿಂದ study ಮಾಡಲು ಒಟ್ಟಾಗಿ ಸೇರೋಣ. ನಿನಗೆ difficult ಎನಿಸುವ ವಿಷಯಗಳನ್ನು ನಾನೇ ಚರ್ಚಿಸಿ ತಿಳಿಸುವೆ ಎಂದಾಗ ನಿನ್ನ maturity.ಅರ್ಥವಾಗಿ ಸಣ್ಣವನೆನಿಸಿ ಕುಬ್ಜನಾಗಿ ಹೋದೆ.
ಒಂದು ವಾರ ನಾನೇ ಒಂಟಿಯಾಗಿ ಕಳೆದು, ನಿನ್ನನ್ನು ಪೀಡಿಸದೆ. ವಿಶ್ವಾಸ ಹೆಚ್ಚಿಸಿಕೊಂಡೆ. ಅಲ್ಲಿ ಸಹಜತೆ ಇರದಿದ್ದರೂ ಆತ್ಮವಿಶ್ವಾಸವಿತ್ತು.
ಒಂದು ವಾರದಲ್ಲಿ ನಿಧಾನ ಬದಲಾಗುತ್ತ ಹೋದೆ. out of sight is out of mind ಎಂಬ ಮಾತು ದಿಟ ಎನಿಸಿತು.
ಆದರೆ ಮತ್ತೇನು combined study ನಮ್ಮನ್ನು ಒಂದು ಮಾಡಿದ್ದು ಎರಡನೇ ಅಪಾಯಕ್ಕೆ ನಾಂದಿಯಾಯಿತು. ವಿಶಾಲವಾದ ಮೈದಾನ ಹತ್ತಾರು ರೂಮುಗಳು combined study ಗೆ ಸುಂದರ ವಾತಾವರಣ ಕಲ್ಪಿಸಿತ್ತು ಆದರೆ ನಾನದರಲ್ಲಿ ಆಗಬೇಕಾದ ರೀತಿಯಲ್ಲಿ involve ಆಗಲಿಲ್ಲ.
ಒಂದೆರಡು like minded ಗೆಳೆಯರೊಂದಿಗೆ study ಚೆನ್ನಾಗಿ ಸಾಗಿತು. ಆದರೆ ಮನಸ್ಸು ಮತ್ತೆ ಹಿಂದೆ ತಿರುಗಿತು.
ಎಲ್ಲರೂ ಅವರವರ ಪಾಡಿಗೆ ಇರುತ್ತಿದ್ದರು. ನೀನು ಗಣಿತ ಹೇಳಿಕೊಡುವಾಗ ನನ್ನ ಲೆಕ್ಕಾಚಾರವೇ ಬೇರೆಯಿರುತ್ತಿತ್ತು. Study ಬಿಟ್ಟು ಉಳಿದ ವಿಷಯ ಆರಂಭಿಸಿದೆ.
ನಡುರಾತ್ರಿ ಎರಡು ಗಂಟೆಯವರೆಗೆ ನನ್ನ ಮಾತುಗಳನ್ನು ಸಹನೆಯಿಂದ ಕೇಳಿಕೊಂಡ ನಿನ್ನ ತಾಳ್ಮೆ ಗಾಂಭೀರತೆ ಬದುಕಿನ ಬಗೆಗೆರುವ ಜವಾಬ್ದಾರಿ ನನ್ನ ಮೇಲೆ ಇರುವ ಪ್ರೀತಿ ಹೀಗೆ ಯಾವುದನ್ನು ನೆನಪಿಸಿಕೊಳ್ಳಲಿ.
ನಾನೇ ಒಂದಿನ ಕೇಳಿದೆ. ಆಯಿತು, ನಿನ್ನನ್ನು ನಾನೆಂದು ಮುಂದೆ ಭೇಟಿ ಆಗುವುದಿಲ್ಲ. ನನ್ನ ಜೀವನದ ಕೊನೆಕ್ಷಣದ ವರೆಗೆ ನೆನಪಿನ ಆಳದಲ್ಲಿ ಉಳಿಯುವ ಕಾಣಿಕೆ ನೀಡು ಎಂಬ ಬೇಡಿಕೆಗೆ ನೀನು ವಿಚಳಿತಳಾದೆ.
ಇಲ್ಲ ನನಗೆ ನಿನ್ನ ಮರೆಯೋಕೆ ಸಾಧ್ಯವಿಲ್ಲ. ಪರಸ್ಪರ ಸ್ನೇಹಿತರಾಗಿ ಉಳಿದರೆ ಖಂಡಿತ ಭೇಟಿ ಆಗುತ್ತ ಇರೋಣ. ಅದಕ್ಕೆ ಕಾಣಿಕೆ ಇತ್ಯಾದಿ ಬೇಡ. ನಿರ್ಮಲ ಸ್ನೇಹ ನಿಷ್ಟೆಯ ಮನಸ್ಥಿತಿ ಸಾಕು ಎಂದ ನಿನ್ನ ವಾದ ಅರ್ಥವಾಗಿದ್ದರೆ ನನಗಿಂದು ಈ ಸ್ಥಿತಿ ಅಂದರೆ ನಿನ್ನನ್ನು ಅಗಲುವ ಸ್ಥಿತಿ ಬರುತ್ತಿರಲಿಲ್ಲ.
ನನ್ನ ಮನದಾಳದ ಅಳಲನ್ನು ಕಡ್ಡಾಯವಾಗಿ ಬೇಕಿರುವ ಕಾಣಿಕೆಯ ಸುಳಿವನ್ನು ನೀಡಿ ನಿನ್ನನ್ನು ತೀವ್ರವಾಗಿ ಚಿಂತಿಸುವಂತೆ ಮಾಡಿದೆ. ನನಗೆ ಗೊತ್ತಿತ್ತು ಪರೀಕ್ಷೆ ಮುಗಿದ ಮೇಲೆ ನೀನು ಸಿಗುವುದಿಲ್ಲ ವೆಂದು ಅದಕ್ಕೆ ಕಾಣಿಕೆಗಾಗಿ ಪದೇ ಪದೇ ಒತ್ತಾಯಿಸಿದಾಗಲೂ ನೀನು ಜಾರಿಕೊಳ್ಳುತ್ತಿದೆ. ಆದರೆ ನಾನು ಬಿಡಬೇಕಲ್ಲ.

Saturday, October 30, 2010

ಮನಕರಗಿಸಿದ ಅಳು-ಅರ್ಥವಾಗದ ನಾನು.

ಮೆಲ್ಲನೆ ಗುಸು ಗುಸು ಪ್ರಾರಂಬವಾಗಿತ್ತು. ನಿನ್ನ ಮೇಲೆ ಮೊದಲಿನ ನಂಬಿಕೆ ಎಲ್ಲರಿಗೂ ಕಡಿಮೆ ಆಗಿತ್ತು. ಇದಾವುದನ್ನು ಲೆಕ್ಕಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ನಮ್ಮಿಬ್ಬರನ್ನು ಎಲ್ಲರೂ ಆಲಕ್ಷಿಸಿ, ತಮ್ಮ ಪಾಡಿಗೆ ತಾವಿದ್ದು ಪ್ರವಾಸವನ್ನು enjoy ಮಾಡಿದರು.
ನಮ್ಮ ಖಾಸಗಿ ಗೊಂದಲಗಳನ್ನು ಇಣುಕಿ ನೋಡುವ ತುಂಟತನ ಯಾರಲ್ಲಿ ಇರಲಿಲ್ಲ. ಆದರೂ ನಾವಿಬ್ಬರೂ dull ಆದ ಬಗ್ಗೆ ಅನುಮಾನ ಶುರು .
ಮತ್ತೆ ನಿನ್ನ ಉಪದೇಶ ಶುರು ಆಯ್ತು. ನೋಡು ನಿನಗೆ ಇಡೀ ಬದುಕಿನುದ್ದಕ್ಕೂ ನನ್ನನ್ನು ಕಳೆದುಕೊಳ್ಳಬಾರದೆಂಬ ಇರಾದೆ ಇದ್ದರೆ ಸಂಯಮದಿಂದ ನಡೆದುಕೊ.
ಇಲ್ಲಿಗೆ, ಇಷ್ಟಕ್ಕೆ, ಮುಗಿಸುವುದಾದರೆ ಎಲ್ಲವನ್ನು ಸಹಿಸುವೆ ಎಂಬ ನಿನ್ನ ವಾದವನ್ನು ಆಲಿಸುವ ಸಹನೆ ಉಳಿದಿರಲಿಲ್ಲ.
ನಿನ್ನ ಸೌಂದರ್ಯ, ನಿರ್ಮಲ ಪ್ರೀತಿ, ನಿರ್ವಾಜ್ಯ ಗೆಳೆತನವನ್ನು ಗಮನಿಸುವ ಮನೋಸ್ಥಿತಿಯನ್ನು ಕಳೆದುಕೊಂಡಿದ್ದೆ.
ಮುಂದಿನ ಪಯಣ uneasy ಆಯಿತು. ಊರು ಮುಟ್ಟಿದರೆ ಸಾಕು ಎಂಬ ನಿನ್ನ ಧಾವಂತ ಅರ್ಥವಾಯಿತು.
ಆದರೆ ನನಗೆ ಇದು ಬೇಕೆನಿಸಿತು. ಒಂದೇ ವಾರದಲ್ಲಿ ಹೀಗೆ ನಾನು ಬದಲಾಗಬಹುದು ಎಂದು ಅಂದುಕೊಂಡಿರಲಿಲ್ಲ.
ಇನ್ನೆರಡು ದಿನದಲ್ಲಿ ಊರು ತಲುಪುತ್ತೇವೆ. ಏಪ್ರಿಲ್ ನಲ್ಲಿ ಪರೀಕ್ಷೆ ಎದೆ ಧಸಕ್ ಎಂದಿತು. ವಾಸ್ತವದ ಸವಾಲುಗಳನ್ನು ಪ್ರೇಮ ಕುರುಡಾಗಿಸಿತ್ತು.
ಸಿರ್ಸಿ ಮಾರಿ ಕಾಂಬಾದೇವಿಯ ದರ್ಶನದಲ್ಲಿ ನೀನು ಗಂಭೀರಳಾದದ್ದನ್ನು ಗಮನಿಸಿದೆ. ನಿನ್ನ ಲ್ಲಿ ಪಾಪಪ್ರಜ್ಷೆ ಜಾಗೃತವಾಯಿತು. ಬೆಂಕಿಯಲ್ಲಿ ಕೈ ಇಟ್ಟವಳ ಹಾಗೆ ಒದ್ದಾಡಿದೆ. ಪ್ರೀತಿಯ ಮನದಾಳದ ಮಾತುಗಳನ್ನು ಕೇಳುವ ಸಹನೆ ನನ್ನಲ್ಲಿ ಇಲ್ಲದ್ದು ನಿನ್ನ ವ್ಯಥೆಗೆ ಕಾರಣವಾಯಿತು.

ನಿನ್ನ ಆಳದ ನೋವನ್ನು ಯಾರಿಗೂ ಹೇಳಲಾಗದ ನಿನ್ನ ದುಸ್ಥಿತಿಯ ಬಗ್ಗೆ ಈಗ ಕನಿಕರವೆನಿಸುತ್ತದೆ.
ಮತ್ತದೇ ಏಕಾಂತ. ಈಗ ನನ್ನ ಬಿಸಿ ಅಪ್ಪುಗೆ ನಿನ್ನ ಪಾಲಿಗೆ ಅಗ್ನಿ ಕುಂಡವಾಯಿತು. ಸಿಹಿ ಮುತ್ತುಗಳು ಹಾವಿನ ಹೆಡೆಯಾದವು.
ನಿನ್ನನ್ನು ನೀನು ನಿನಗರಿವಿಲ್ಲದಂತೆ, ಪ್ರಾಮಾಣಿಕ ಅಭಿವ್ಯಕ್ತಿಯಿಂದಾಗಿ ಕಳೆದುಕೊಂಡಿದ್ದೆ.

ನನಗೆ ಅದಾವುದನ್ನು ಗ್ರಹಿಸುವ ಶಕ್ತಿ ಇರಲಿಲ್ಲ. ವಿವೇಕ ನನ್ನಿಂದ ಮಾಯವಾಗಿತ್ತು. ಜಾಗೃತ ಗೊಳಿಸುವ ವಯಸ್ಸು ಅದಲ್ಲ ಬಿಡು. ಈ ಹುಡುಗಾಟ ಎಲ್ಲಿದ್ದವರನ್ನು ಎಲ್ಲಿಗೋ ತಲುಪಿಸಿತು.
ಒಮ್ಮೆಲೆ ನೀನು ಜೋರಾಗಿ ಅಳಲು ಶುರು ಮಾಡಿದಾಗ ಭಯವಾಯ್ತು. please leave me alone. ನನ್ನನ್ನು ಕಾಡಬೇಡ. ಕೈಮುಗಿತೇನೆ.

ಊರಿಗೆ ಹೋದ ಮೇಲೆ ಈ ರೀತಿ ಕಾಡಿದರೆ ತೊಂದರೆ ಅನುಭವಿಸಿ ಸಾಯ್ತೇನೆ ಅಂದಾಗ ಆಘಾತವಾಯಿತು.
ನಾನೇನು ಹುಡುಗಿ ಮದುವೆಯಾಗಿ ಹೋಗ್ತೇನೆ. ಆದರೆ ನೀನು ಮುಂದೆ ಕಾಲೇಜಿಗೆ ಹೋಗಿ ಜಾಣನಾಗಿ ಭವಿಷ್ಯ ರೂಪಿಸಿಕೊಳ್ಳಬೇಕು. ನನ್ನಿಂದ ನಿನ್ನ ಬಾಳು ಹಾಳಾಗಬಾರದು.

ಕೇವಲ ಆಪ್ತ ಅಪ್ಪುಗೆಗೆ ನೀನು ಹೀಗೆ ಕರಗಿ ಹೋಗಿ ಹಟಮಾರಿ ಆಗುತ್ತಿ ಎಂದು ಗೊತ್ತಿದ್ದರೆ ನಾನಿಂತಹ ತಪ್ಪು ಮಾಡುತ್ತಿದ್ದಿಲ್ಲ.
ದಯವಿಟ್ಟು ಕ್ಷಮಿಸು ಮಾರಾಯ, ಸ್ವಲ್ಪ ಸಹನೆ ತಗೋ, ನೀನು ತುಂಬಾ ಚಿಕ್ಕವನು.
ನನಗಿಂತ ಎಂಟು ತಿಂಗಳು ಸಣ್ಣವನು. ನನಗಿಂತ ಆರು ವರ್ಷ ದೊಡ್ಡವನನ್ನು ಮದುವೆಯಾಗಿ ಹೋಗುವ ಗೃಹಿಣಿ. ನನ್ನನ್ನು ಒಂಚೂರು ಆ ಪವಿತ್ರ ದೃಷ್ಟಿಯಿಂದ ನೋಡು.
ಇನ್ನೆರಡು ತಿಂಗಳಲ್ಲಿ ನಾನು ಬೇರೆಯವರ ಹೆಂಡತಿ. ಆಗ ನಿನಗೆ ಯಾವ ಅಧಿಕಾರವೂ ಇರುವುದಿಲ್ಲ. ಕೇವಲ ಒಂದೇ ವಾರದ ಸಲುಗೆಯಲ್ಲಿ ನನ್ನನ್ನು ಬಿಟ್ಟಿರುವುದು ಅಸಾಧ್ಯ ಎಂಬಂತೆ ವರ್ತಿಸಿದರೆ ಮುಂದೆ ಹೇಗೆ ಇರುತ್ತೀ.
ನಾನು ನಿನಗಾಗಿ ಚಿಂತಿಸುವಂತಾಯಿತು. please control your self, ಇಲ್ಲಂದರೆ ನೀನು ಹಾಳಾಗುತ್ತೀ ಎಂದು ಬಿಗಿದಪ್ಪಿ ಅಳಲು ಪ್ರಾರಂಭಿಸಿದಾಗ ಒಂದು ಕ್ಷಣ ಸ್ತಂಬೀ ಭೂತನಾದೆ. ಆಯ್ತು ನಿನ್ನನ್ನು ಅರ್ಥಮಾಡಿಕೊಳ್ಳುವೆ ದಯವಿಟ್ಟು ಅಳಬೇಡ ಅಂದಾಗ ನಿನಗೆ ಸಮಾಧಾನವಾಯ್ತು.
ನನ್ನ ಈ ಸಹನೆಯನ್ನು ನೀನು ತೃಪ್ತಿಯಿಂದ ಸ್ವೀಕರಸಿದೆ. ಆದರೆ ನನ್ನ ಈ ಸಹನೆ ಶಾಶ್ವತವಾಗಿ ಉಳಿಯುತ್ತೆ ಎಂಬ ನಂಬಿಕೆ ನನ್ನಲ್ಲಿರಲಿಲ್ಲ. ಕಣ್ಣೀರನ್ನು ವಾತ್ಸಲ್ಯದಿಂದ ಒರೆಸಿದೆ.
ಹೌದು ನಿನ್ನ ಬಾಳಿಗೆ ಮುಳ್ಳಾಗಬಾರದು ಇಷ್ಟು ಅನುಭವಿಸಿದ್ದು ಸಾಕು.
ಊರಿಗೆ ಹೋದ ಮೇಲೆ ಈ ಹಿಂದೆ ಇದ್ದಂತೆ, ಅಪರಿಚಿತನಾಗಿ serious ಆಗಿ ಉಳಿಯಬೇಕು ಎಂಬ ನಿರ್ಧಾರಕ್ಕೆ ಬಂದು ಹಾಸಿಗೆ ಸೇರಿದೆ.
ನಿನ್ನ ಕಣ್ಣಿರ ಹನಿಗಳು ಎದೆಯ ಮೇಲೆ ಹರಿದಾಡಿದಂತೆ ಭಾಸವಾಯಿತು.
ನನ್ನನು ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸಿ ನಿದ್ರೆಗೆ ಜಾರಿದೆ.

ಪಾಸಾದ ಮೊದಲ ಪರೀಕ್ಷೆ - ನಿಟ್ಟುಸಿರು ಬಿಟ್ಟ ಶಿಕ್ಷಕರು

ನಿಧಾನವಾಗಿ ನಿರಾಶೆ ಪ್ರಾರಂಭ. ಉಳಿದ ವಿಷಯಗಳಲ್ಲಿ ಪರಿಪೂರ್ಣತೆ ಇಲ್ಲದೆ Highscool ಗೆ ಹೋಗುವದಾದರೂ ಹೇಗೆ ಎಂಬ tension ಶುರು ಆಯಿತು. ಸ್ವಲ್ಪ serious ಆಗಿ ಶಾಲೆಗೆ ಅಂಟಿಕೊಂಡಿದ್ದು ಏಳನೇ ವರ್ಗದಲ್ಲಿ.
ಆದರೆ ಆಗ ತುಂಬಾ ವಿಳಂಬವಾಗಿತ್ತು. Board exam ಎದುರಿಸುವ ಕಾರಣಕ್ಕಾಗಿ ಎಲ್ಲಿಯೂ ಹೋಗದಂತೆ ಅಭ್ಯಾಸ ಪ್ರಾರಂಭ ಮಾಡಿದೆ.
ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳಲ್ಲಿ ಹೆಚ್ಚಿನ ಪರಿಪೂರ್ಣತೆ ಸಾಧ್ಯವಾಗಲಿಲ್ಲ.

ಅಡಿಪಾಯವಿಲ್ಲದ ಕಟ್ಟಿದ ಮನೆಯಂತಾದ ನನ್ನ ಶಿಕ್ಷಣದ ಕುರಿತು ಚಿಂತಿಸುವಂತಾಯಿತು. ನಾನು primary ಹಂತದಲ್ಲಿ ಶಿಕ್ಷಣ ಪಡೆಯಲು ವಂಚಿತನಾದದ್ದು ಮುಂದಿನ ಅಧ್ಯಯನಗಳಲ್ಲಿ ಶ್ರಮ ಪಡುವಂತಾಯಿತು.
ಇತ್ತೀಚಿನ ದಿನಗಳ ಶ್ಯಕ್ಷಣಿಕ ಕಾರ್ಯಗಳಲ್ಲಿ ನನ್ನ ಭಾಷಣ, ತರಬೇತಿಗಳು ಮುಗಿದ ಮೇಲೆ ಶಿಕ್ಷಣ ತಜ್ಞರು ನಾನು ಮೊದಲಿನಿಂದಲೂ ಪ್ರತಿಭಾ ಸಂಪನ್ನ rank ವಿದ್ಯಾರ್ಥಿಯೆಂದೇ ಭಾವಿಸುತ್ತಾರೆ. ಅತ್ಯಂತ ವಿಫಲ ವಿದ್ಯಾರ್ಥಿ ಎಂಬ ಸತ್ಯ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅಂದಿನ ನನ್ನ ವಿಫಲತೆ, ಇಂದಿನ ಸಫಲತೆಗೆ ನಾಂದಿಯಾಗಿದ್ದು ಹಲವರಿಗೆ ಪ್ರಯೋಜನವಾಗಿದೆ.
ಇವರೊಬ್ಬ educational expert ಎಂದು ಪರಿಚಯಿಸಿದಾಗ ಒಳಗೊಳಗೆ ಸಂಕೋಚವಾಗಲು ನನ್ನ ಬಾಲ್ಯದ ವಿಫಲತೆ ಕಾರಣ. ಏಳನೇ ತರಗತಿಯಲ್ಲಿದ್ದಾಗ ಪೂರ್ವಭಾವಿ ಪರೀಕ್ಷೆಗಳಲ್ಲಿ ನನ್ನ ವಿಫಲತೆಯನ್ನು ಗುರುತಿಸಿದ ಮುಖ್ಯ ಗುರುಗಳು fail ಆಗುವ ಸೂಚನೆಯನ್ನು ನೀಡಿದರು. ಆದರೆ ಕಾಲ ಮಿಂಚಿತ್ತು. ಊರಲ್ಲಿನ ಪ್ರತಿಷ್ಟಿತರ ಮಕ್ಕಳು board exam ನಲ್ಲಿ fail ಆದರೆ ಶಿಕ್ಷಕರಿಗೆ, ಶಾಲೆಗೆ ಕೆಟ್ಟ ಹೆಸರು ಬೇರೆ.
ನನ್ನನ್ನು ಕರೆದು ಚನ್ನಾಗಿ ಅಭ್ಯಾಸ ಮಾಡಲು ಸೂಚಿಸಿದರೂ ನಾನು ಅಸಹಾಯಕ ಸ್ಥಿತಿ ತಲುಪಿದ್ದೆ.
ಸರಿ ವಾರ್ಷಿಕ ಪರೀಕ್ಷೆ ಹತ್ತಿವಾದಾಗ, ಜಾಣ ಗೆಳೆಯರ ನೆರವು ಕೇಳಿದೆ.ಅವರಿಗೂ ನಾನು pass ಆಗಲಿ ಎಂಬ ಸದಾಶಯವಿತ್ತು.
ಅಂದಿನ ಸರಕಾರಿ ಶಾಲೆಗಳಲ್ಲಿ ಸಮರ್ಪಕ seating ವ್ಯವಸ್ಥೆ ಇರಲಿಲ್ಲ. ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯಬೇಕಿತ್ತು.
ದಡ್ಡ ವಿದ್ಯಾರ್ಥಿಗಳು, ನದಿಯಲ್ಲಿ ತೇಲಿ ಬರುವ ಹೆಣಕ್ಕೆ ಸಮ ಎಂದು ಶಿಕ್ಷಕರು ತಮಾಷೆ ಮಾಡುತ್ತಿದ್ದರು. ನದಿಯಲ್ಲಿ ತೇಲಿ ಬರುವ ಹೆಣವನ್ನು ನೋಡಿದವರು ಉದ್ದನೇ ಕೋಲಿನಿಂದ ಹೆಣವನ್ನು ಮುಂದಿನ ಊರಿಗೆ ಸಾಗಿಸುತ್ತಾರಂತೆ. ಹಾಗೆ ನನ್ನನ್ನು ಹೈಸ್ಕೂಲಿಗೆ ಸಾಗು ಹಾಕುವ ಯೋಚನೆ, ಜವಾಬ್ದಾರಿ ಶಿಕ್ಷಕರ ಪಾಲಿಗಿತ್ತು.

ಏಳನೇ ಪರೀಕ್ಷೆಯಲ್ಲಿ ನಾನು ಬರೆದ ಉತ್ತರ ಪತ್ರಿಕೆಗಳನ್ನು ಒಮ್ಮೆ ಶಿಕ್ಷಕರೇ ಪರೀಕ್ಷಿಸುತ್ತಿದ್ದರು. pass ಆಗುವ ಅವಕಾಶ ಕಡಿಮೆ ಅನಿಸಿದರೇ ಒಂದೆರಡು ಉತ್ತರಗಳನ್ನು ಬರೆಸುವದು ಅನಿವಾರ್ಯ ವಾಯಿತು.
ಸತ್ಯ, ಪ್ರಾಮಾಣಿಕತೆಯನ್ನು ಬೋಧಿಸುವ ಶಿಕ್ಷಕರು ನಮ್ಮಂತಹ ಅವಿವೇಕಿಗಳಿಂದಾಗಿ ಎಂತಹ ತೊಂದರೆ ಅನುಭವಿಸಬೇಕಾಯಿತು ಎಂದು ನೆನಪಾದರೆ ಬೇಸರವಾಗುತ್ತದೆ.
ಹೀಗಾಗಿ ಅಂದು ನಮ್ಮ ಪ್ರವೇಶಗಳನ್ನು ಕಾಪಿ ಮಾಡಿಸುವದು ಅನಿವಾರ್ಯವಾಗಿತ್ತು. ಪರೀಕ್ಷಾ ನಕಲು ಪದ್ದತಿಯನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲರಾಗುತ್ತಿದ್ದರು.
ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದಕ್ಕಿಂತ, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವುದೇ ಪ್ರಯಾಸಕರ ಕೆಲಸವಾಗಿತ್ತು. mass copy ಇರದಿದ್ದರೂ ಅಲ್ಲಲ್ಲಿ oxygen ತರಹ ಸಹಾಯ ಮಾಡಿ ಜೀವದಾನ ನೀಡುತ್ತಿದ್ದರು. ಊರಲ್ಲಿ ಇದ್ದ ಸರಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿತ್ತು.
ಅದೇ ತಾನೇ ಊರಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭವಾಗಿತ್ತು.

English medium ಹುಚ್ಚು ಹಳ್ಳಿಗಳಲ್ಲಿ ಆರಂಭವಾಗಿತ್ತು. ಮನೆಯಲ್ಲಿ ತಮ್ಮ ಜಗದೀಶ, ತಂಗಿ ರಾಜೇಶ್ವರಿ ಇಂಗ್ಲಿಷ್ ಶಾಲೆಗೆ ಹೋಗುತ್ತಿದ್ದರು.
ನಾನು ಶಿಕ್ಷಣ ಪಡೆಯುವಲ್ಲಿ ಪೂರ್ವ ವಿಫಲನಾಗಿದ್ದು ನನಗೇನು ಅನಿಸಲೇ ಇಲ್ಲ. ಏಳನೇ ತರಗತಿಯ ಆರು paper ಚನ್ನಾಗಿ ಆದವು ಎಂಬ ಸಮಾಧಾನ ಶಿಕ್ಷಕರಿಗೆ, ಆದರೆ ನನಗೆ ಆ ರೀತಿಯ ಆತ್ಮವಿಶ್ವಾಸವಿರಲಿಲ್ಲ.
ಆತ್ಮಾವಲೋಕನ ಮಾಡಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ಏನಾದರೂ ಆಗಲಿ ಎಂಬ ಭಾವನೆಯಿತ್ತು.

ಮನೆತನದ ಶ್ರೀಮಂತಿಕೆ ಕಡಿಮೆ ಆಗಿ ವ್ಯಾಪಾರ ಇಳಿಮುಖವಾಗಿತ್ತು. ಮನೆತನದ ಶ್ರೀಮಂತ ಅಮರಣ್ಣ ತಾತ 1976 ರಲ್ಲಿ ನಿಧನರಾಗಿದ್ದರು.
ಮುಂದೆ ಶಿಕ್ಷಣದ ಮೂಲಕವೇ ಬದುಕನ್ನು ರೂಪಿಸಿಕೊಳ್ಳುವ ಅನಿವಾರ್ಯವಿತ್ತು. ವ್ಯಾಪಾರ ಊರಲ್ಲಿ ಭಿನ್ನವಾಗಿ ಬೆಳೆಯತೊಡಗಿತ್ತು.
ಅತ್ತಕಡೆ ವ್ಯಾಪಾರವೂ ಇರಲಿಲ್ಲ. ಪರಿಪೂರ್ಣ ಶಿಕ್ಷಣವೂ ಸಿಗಲಿಲ್ಲ ಎಂಬ ತ್ರಿಶಂಕು ಸ್ಥಿತಿ ನಮ್ಮದಾಗಿತ್ತು.
ಇನ್ನು ಮುಂದೆ ಗಂಭೀರವಾಗಿ ಅಭ್ಯಾಸ ಮಾಡಬೇಕು ಎಂಬ ನಿರ್ಧಾರ ಮಾಡಿದೆ.
ಸುದೈವ ವಶಾತ್ 7th pass ಆದೆ. ನನಗಿಂತಲೂ ಹೆಚ್ಚು ನಮ್ಮ ಶಿಕ್ಷಕರು ಖುಷಿ ಪಟ್ಟರು. ಅಂದು ನಾನು 7th pass ಆದ ಸಂಭ್ರಮ ನೆನಪಾದರೆ ಅಮಿತಾಬ ಬಚ್ಚನ್ ರ ಮಂಜ ಪಾಸ್ ಆದ ಎಂಬ ಜಾಹಿರಾತು ನೆನಪಾಗುತ್ತದೆ. ಅಂತೂ ಮಂಜ ಪಾಸ್ ಆದ.

Friday, October 29, 2010

ವಿಚಲಿತಗೊಂಡ ಮನಸು - ಕೆರಳಿದ ಭಾವನೆಗಳು

ಮೈಸೂರು ದಾಟುವ ಹೊತ್ತಿಗೆ ನಾನು ಭಿನ್ನವಾಗಿ ಹೋಗಿದ್ದೆ. ಎಂದೂ ಇರದ ಕೋಪ ನನ್ನ ನಡೆ-ನುಡಿಯಲ್ಲಿ ಶುರುವಾಯಿತು.. ಅದನ್ನು ಗುರುತಿಸಲಿಲ್ಲ. ಶ್ರೀರಂಗ ಪಟ್ಟಣದ ಪಾರ್ಕಿನಲ್ಲಿ ಮರದ ಕೆಳಗೆ ನಿಂತು ನಿನ್ನನ್ನು ಕಾಯುವಾಗ ಸಿಟ್ಟು ಬರಬಾರದಿತ್ತು.
ಆದರೆ ನಾನು ಕೋಪಿಸಿಕೊಂಡಾಗ ನನ್ನಲ್ಲಾದ ಬದಲಾವಣೆಯನ್ನು ನೀನು ಗುರುತಿಸಲಿಲ್ಲ. ಈಗ ಕೇವಲ ಬಯಕೆ ಮಾತ್ರ ಉಳಿದು, ಉಳಿದ ಕುತೂಹಲವೆಲ್ಲ ನಿಧಾನ ಮಾಯವಾಯಿತು.

ಬೇಲೂರಿನಲ್ಲಿ halt ಮಾಡಿದಾಗ ಮತ್ತೊಮ್ಮೆ ಇಡೀ ರಾತ್ರಿ ಚರ್ಚಿಸುವ ಅವಕಾಶ. ಆದರೆ ನಾನು ಸುಂದರ ಸಮಯವನ್ನು ಹಾಳುಮಾಡಿಕೊಂಡೆ. ನಿನ್ನಿಂದ ಏನೆಲ್ಲ, ಅಪ್ರಿಯವಾದದ್ದನ್ನು ಬಯಸಿದ್ದು ನಿನಗೆ ಆತಂಕವನ್ನುಂಟುಮಾಡಿತ್ತು. ನಿಧಾನವಾಗಿ ನಿರಾಕರಣೆ ಮಾಡಿದಾಗ, ನಾನು ನನಗರಿವಿಲ್ಲದಂತೆ ಹಕ್ಕನ್ನು ಚಲಾಯಿಸಿದ್ದು ಆಘಾತವನ್ನುಂಟುಮಾಡಿತ್ತು.
ನಾನಾಗ ಬದಲಾಗಿದ್ದೆ. ಬಿಸಿ ಅಪ್ಪುಗೆಯ ರೋಮಾಂಚನ ಹಿತಕಾರಿಯಾಗದೇ ಶತ್ರುವಾಯಿತು. ನೀನು ದಾಳಿ ಮಾಡಿದಾಗ ಇದ್ದ ಮುಗ್ಧತೆ ನನ್ನಲ್ಲಿ ಉಳಿದಿರಲಿಲ್ಲ. ನಾನು ಒಂದರ್ಥದಲ್ಲಿ ವಿಕೃತವಾಗಿ ಹೋಗಿದ್ದೆ.
ನೀನು ನನ್ನಿಂದ ಬಯಸಿದ ಮುಗ್ಧ ಪ್ರೇಮದ ಜಾಗೆಯಲ್ಲಿ ಬಯಕೆ ಆವರಿಸಿತ್ತು. ಕೇವಲ ಎರಡೇ ದಿನಗಳಲ್ಲಿ ಆದ ಬದಲಾವಣೆ, ಯಾಕೆ ಹೀಗೆ ಎಂಬ ಜಿಜ್ಞಾಸೆ, ಅತಾರ್ಕಿಕ ಸಂಗತಿಯಾಯಿತು.
ಇಬ್ಬರೂ mood ಕಳೆದುಕೊಂಡು ಗಂಭೀರವಾದೆವು. ಪ್ರವಾಸದ ಆರಂಭದಲ್ಲಿದ್ದ ಖುಷಿ ನಿಧಾನವಾಗಿ ಕರಗಿ ಹೋಯಿತು.
please ನನ್ನನ್ನು ರೂಮಿಗೆ ಹೋಗಲು ಬಿಡು, ಯಾರಾದರೂ ತಪ್ಪು ತಿಳಿದುಕೊಂಡಾರು ಎಂದದ್ದು ನನಗಿಷ್ಟವಾಗಲಿಲ್ಲ.

ಎಲ್ಲವೂ track ತಪ್ಪಿದಾಗ ಆಗುವ ಅನಾಹುತವನ್ನು ನೀನು ನನಗಿಂತ ಚನ್ನಾಗಿ ಅರಿತವಳಾಗಿದ್ದೆ.
Engaged girl ಎಂಬ relaxation ಉಳಿಯುವುದಿಲ್ಲ ಎಂದು ನಿನಗೆ ಖಾತ್ರಿಯಾದಾಗ ನನ್ನನ್ನು ದೂರ ಮಾಡಲು ಪ್ರಯತ್ನಿಸಿದ ಸೂಕ್ಷ್ಮತೆ ನನಗೆ ಅರ್ಥವಾಗಲಿಲ್ಲ. You felt that I started disturbing you.
ನಿನ್ನ ಪ್ರೇಯಸಿಯಂತೆ ಪರಿಭಾವಿಸಲು ಪ್ರಾರಂಭಿಸಿದ್ದು ನಿನಗೆ ಹೊಸದೆನಿಸಿತು.
ಬಸ್ಸಿನಲ್ಲಿ ನಿಧಾನವಾಗಿ ತಿಳಿಹೇಳಿದರೂ ನನಗದು ಅರ್ಥವಾಗಲಿಲ್ಲ. ನೋಡು ಪುಟ್ಟಾ ನಾನು ಮದುವೆಯಾಗಿ ಹೋಗುವವಳು ನನಗೆ ನಿನ್ನಿಂದ ತೊಂದರೆಯಾಗಬಾರದು. ನಿನ್ನ ಮೇಲಿದ್ದ ನಿರ್ಮಲ ಪ್ರೇಮವನ್ನು ಹೇಳಿ-ಹಂಚಿಕೊಂಡಿದ್ದೆ ತಪ್ಪಾಯಿತು ಅನ್ನುವಂತೆ ನಡೆದುಕೊಳ್ಳಬೇಡ. ನಿನ್ನ ಪ್ರೀತಿಯ ನೆನಪನ್ನು ಕಟ್ಟಿಕೊಂಡು ಹೋಗಲು ಅವಕಾಶ ಮಾಡಿಕೊಡು. ನೆನಪು ಹಿತಕರವಾಗಿ ಉಳಿಯಬೇಕಾದರೆ ನೀನು ಮುಗ್ಧವಾಗಿದ್ದರೆ ಚಂದ, ಈ ರೀತಿ ಹೆಚ್ಚನದನ್ನು ಬಯಸಬೇಡ ಅಂದಾಗಲೂ, ಊಹೂಂ.....ನಾನು ಬದಲಾಗಿ ಹೋಗಿ ಆಕ್ರಮಣಕಾರಿಯಾಗಿದ್ದೆ.

ಬಿಸಿ ಉಪ್ಪಿಟ್ಟು, ಅಮೇರಿಕಾ ಹಾಲು

ರಾಮಣ್ಣ ಮೇಷ್ಟ್ರು ಪ್ರಕರಣವೊಂದೇ ನನ್ನ ನಿರಾಸಕ್ತಿಗೆ ಕಾರಣವಲ್ಲ. ಅಕ್ಷರ ಪ್ರೇಮ ಅರಳಲೇ ಇಲ್ಲ. ಅಂಗಡಿ ಮೇಲಿನ ಆಸಕ್ತಿ, ಪುಟಾಣಿ, ಬೆಲ್ಲ, ಗೋಡಂಬಿಗಳ ಮೇಲಿನ ಪ್ರೀತಿಯಿಂದಾಗಿ ಶಾಲೆ ಆದ್ಯತೆ ಅನಿಸಲೇ ಇಲ್ಲ.
ಮನೆಯಲ್ಲೂ ಅಷ್ಟೆ, ದೊಡ್ಡ ಪರಿವಾರ ಯಾರು ಹೋಗ್ತಾರೆ, ಬಿಡ್ತಾರೆ ಎಂಬ ಕಟ್ಟುನಿಟ್ಟು ಇರಲಿಲ್ಲ. ಪಾಲಕರು, ಅಜ್ಜಂದಿರು, ನಮ್ಮನ್ನು ಹೊಡೆಯುವುದು ಶಿಕ್ಷಿಸುವುದಂತೂ ದೂರದ ಮಾತು. ಎಲ್ಲರೂ ಅವರವರ ಪಾಡಿಗೆ busy.
ಇಂದಿನ ಪ್ರಾಥಮಿಕ ಶಿಕ್ಷಣದ ಶಿಸ್ತನ್ನು, ಅಭ್ಯಾಸದ ಬಗೆಗಿನ ಕಾಳಜಿಯನ್ನು ನೋಡಿದರೆ ಆಶ್ಚರ್ಯ. ಈ ರೀತಿಯ ಬಾಲ್ಯದ ಶಿಕ್ಷಣ ಪಡೆದ ನೆನಪೆ ಇಲ್ಲ.
ಇದ್ದ ಸರಕಾರಿ ಶಾಲೆಯಲ್ಲಿ ಮಕ್ಕಳು ಬಂದರೆ ಸಾಕು ಎನ್ನುವ ಸ್ತಿತಿ ಶಾಲೆಯಲ್ಲಿ ಕೊಡುತ್ತಿದ್ದ ದಪ್ಪ ಕಾಳಿನ ಉಪ್ಪಿಟ್ಟು ಒಮ್ಮೊಮ್ಮೆ ಶಾಲೆಗೆ ಹೋಗಲು ಪ್ರೇರೆಪಿಸುತ್ತಿತ್ತು.
ಅದನ್ನು ಎಲ್ಲರೂ ತಿನ್ನಬಾರದು ಎಂಬ ಕರಾರಿದ್ದರೂ ನಾನು ಕಡ್ಡಾಯವಾಗಿ ಖುಷಿಯಿಂದ ತಿನ್ನುತ್ತಿದ್ದೆ.
ಇಂದಿನ ಅಕ್ಷರ ದಾಸೋಹದ ಬಿಸಿ ಊಟ ಅಂದು ಉಪ್ಪಿಟ್ಟಿನ ಸ್ವರೂಪದಲ್ಲಿತ್ತು. ಬಿಸಿಯುಟ ಹೊಸ concept ಅಲ್ಲ. ಅಂದು ಅಮೇರಿಕಾ ಒದಗಿಸುತ್ತಿದ್ದ ಹಾಲಿನ ಪುಡಿ, ಮತ್ತು ರವೆಯನ್ನು ಮಕ್ಕಳ ಆಹಾರವಾಗಿ ಬಳಸುತ್ತಿದ್ದರು. ನಮ್ಮಂತಹ ದಡ್ಡ ಹುಡುಗರನ್ನು ಆಕರ್ಷಿಸಲು ಉಪ್ಪಿಟ್ಟು ನೆರವಾಯಿತು.
ಉಪ್ಪಿಟ್ಟು ಮಾಡುವ ವಾಸನೆ ಸಿಕ್ಕರೆ ಸಾಕು ಶಾಲೆಗೆ ಓಡಿಹೋಗುತ್ತಿದ್ದೆ. ಯಾರಿಗೂ ಕಾಣದಂತೆ ಉಪ್ಪಿಟ್ಟು ತಿನ್ನುತ್ತಿದ್ದೆ.
ನಿಧಾನವಾಗಿ ಸಾಧ್ಯವಾದಷ್ಟು ಕಲಿಯಲು ಪ್ರಾರಂಬಿಸಿದೆ. ರೆಗ್ಯೂಲರ್ ಇರದಿದ್ದರೂ ವರ್ಷ ಏಪ್ರಿಲ್ 10 ರಂದು ಪಾಸ್ ಆಗಿರುತ್ತಿದ್ದೆ.
ತಲೆಗೆ ಎಷ್ಟು ಅಕ್ಷರಗಳು ಹೋದವು ಎಂಬ ಪರೀಕ್ಷೆ ಇಲ್ಲದೆ ಪಾಸ್ ಆದದ್ದು ನನ್ನ ಶೈಕ್ಷಣಿಕ ಪವಾಡ
ಇಂತಹ ಪವಾಡಗಳು ನಮ್ಮ ಕಾಲಕ್ಕೆ ಸಾಮಾನ್ಯ. ಶ್ರೀಮಂತರ ಮಕ್ಕಳು ಶಾಲೆಗೆ ಬಂದರೆ ಸಾಕು ಎಂಬ ಸಂಭ್ರಮ ಬೇರೆ.
ಕನ್ನಡವನ್ನು ಮಾತ್ರ ಕಲಿಯುತ್ತಿದ್ದೆ. ಇಪ್ಪತ್ತರವರೆಗೆ ಮಗ್ಗಿ ಕಲೆತಿದ್ದು ಗಣಿತದ ಸಾಧನೆ.
ವಿಜ್ಞಾನ, ಇಂಗ್ಲಿಷ್, ಹಿಂದಿ ವಿಷಯಗಳ ಪದಗಳು ಆಗಾಗ ಪ್ರತ್ಯಕ್ಷವಾಗಿ ಮಾಯವಾಗುತ್ತಿದ್ದವು. ಆದರೆ ಆಳಕ್ಕೆ ಇಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಬಿಂದುರಾವ್ ಮೇಷ್ಟ್ರು, ಪ್ರಕಾಶಪ್ಪ ಮೇಷ್ಟ್ರು ಶಿಸ್ತಿನಿಂದ ಪಾಠ ಮಾಡುತ್ತಿದ್ದರು. ಬರುಬರುತ್ತಾ ಕುಷ್ಟಗಿಗೆ ಹೋಗುವುದನ್ನು ಕಡಿಮೆ ಮಾಡಿದೆ. ಶಾಲಾ ಸುಧಾರಣಾ ಸಮಿತಿಯ ಸಭೆಗಳಲ್ಲಿ ನಮ್ಮಂತಹ ಹುಡುಗರ ಬಗ್ಗೆ ಚರ್ಚೆಯಾಗುತ್ತಿದ್ದ ಸುದ್ದಿಗಳು ಕಿವಿಗೆ ಬಡಿಯುತ್ತಿದ್ದವು.
ಆದರೆ ಶಾಲೆಯ ಬಗ್ಗೆ ಭಯ, ಆಸಕ್ತಿ, ಶ್ರದ್ಧೆ ಬರಲೇ ಇಲ್ಲ. ಬಾಲ್ಯದಲ್ಲಿ ಕಡ್ಡಾಯವಾಗಿ ಶಿಕ್ಷೆ ನೀಡಿ ಶಿಕ್ಷಣ ನೀಡಬೇಕು. ಇಲ್ಲದಿದ್ದರೆ ಶಿಕ್ಷಣ ತಲೆಗೆ ಹೋಗುವುದಿಲ್ಲ ಎಂದು ಈಗ ಅನಿಸುತ್ತದೆ. ಆದರೆ ದೇಹ ದಂಡನೆಯ ಅಗತ್ಯವಿಲ್ಲ.
ಕನ್ನಡ ಅಕ್ಷರ ದುಂಡಾಗಿ ಬರೆಯುವುದನ್ನು ರೂಢಿ ಮಾಡಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ಈಗಲೂ ಅಕ್ಷರ ದುಂಡಾಗುವುದಿಲ್ಲ.
ಮರವಾಗಿ ಬಗ್ಗದ್ದು, ಗಿಡವಾಗಿ ಬಗ್ಗೀತೆ ಎಂಬ ಮಾತು ನನ್ನ ಅಕ್ಷರಗಳಿಗೆ ಅನ್ವಯಿಸುತ್ತದೆ. ಬಾಲ್ಯದಲ್ಲಿ ಶುದ್ದಬರಹ ಸಾಧ್ಯವಾಗಲಿಲ್ಲ.
ಪ್ರತಿ ವರ್ಷ pass ಆಗುವ ಸಂಬ್ರಮ ಇದ್ದೇ ಇರುತ್ತಿತ್ತು. ನನಗಿಂತ ಒಂದೇ ವರ್ಷ ಮುಂದಿನ ಚನ್ನಪ್ಪ ಕಕ್ಕ ಶಾಲೆಯಲ್ಲಿ ಬುದ್ಧಿವಂತನಿದ್ದ. ಅದನ್ನು ನಾನೆಂದು compitition ಎಂದು ಭಾವಿಸಲೇ ಇಲ್ಲ. ಅವನದು ಅವನಿಗೆ, ನನ್ನದು ನನಗೆ ಎಂಬ easy going attitude ಇತ್ತು.
ಅಂಗಡಿಯಲ್ಲಿ ಕುಳಿತಾಗ ಅಮರಣ್ಣ ತಾತ ಕೇಳುವ ಇಲ್ಲ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ಕೊಡುತ್ತಿದ್ದರಿಂದ ತಾತ ಶಹಬ್ಬಾಸ್ ಗಿರಿ ಕೊಡುತ್ತಿದ್ದ. ಹೀಗಾಗಿ ನನ್ನನ್ನು ದಡ್ಡ ಎಂದು ಯಾರೂ ಪರಿಗಣಿಸಲಿಲ್ಲ. ಅಮರಣ್ಣ ತಾತ ವ್ಯಾಪಾರದಲ್ಲಿ ತುಂಬಾ ಬುದ್ಧಿವಂತ. ಮನೆಯ ಹಿರಿಯ ಬೇರೆ, ಅಂತಹ ತಾತನೇ ಸರ್ಟಿಫಿಕೇಟ್ ಕೊಟ್ಟ ಮೇಲೆ ಉಳಿದವರೇನು ಲೆಕ್ಕ ಎಂಬ ಅಸಡ್ಡೆ ಬೆಳೆಯಿತು.
ಅಕ್ಯಾಡೆಮಿಕ್ ಆಗಿ ಬೆಳೆಯದಿದ್ದರೂ ಸಾಮಾನ್ಯ ಜ್ಞಾನ ಬೆಳಸಿಕೊಂಡೆ. ದಿನ ಪತ್ರಿಕೆ ಓದುತ್ತಿದ್ದೆ. ರೇಡಿಯೋ ಕೇಳುತ್ತಿದ್ದೆ ಅಲ್ಲಿನ ಎಲ್ಲ ಸುದ್ದಿಗಳನ್ನು ತುಂಬಾ ಅಚ್ಚುಕಟ್ಟಾಗಿ ಅಮರಣ್ಣ ತಾತನಿಗೆ ವರದಿ ಮಾಡುತ್ತಿದ್ದೆ.

ನಾಲ್ಕಾರು ಜನ ಇದ್ದಾಗ ತಾತ ಹೇಳುತ್ತಿದ್ದ, "ನಮ್ಮ ಸಿದ್ದಿ ತುಂಬಾ ಜಾಣ ಎಲ್ಲ ಸರಿಯಾಗಿ ನೆನಪಿಟ್ಟಿರುತ್ತಾನೆ." ಎಂಬ ಪ್ರಶಂಸೆಗಳು ಅಕ್ಯಾಡೆಮಿಕ್ ಆಗಿ ಬೆಳೆಯಲು ತಡೆಯೊಡ್ಡಿದವು.
ಗಲ್ಲೆಮೇಲೆ ಕುಳಿತುಕೊಂಡು ಸರಿಯಾಗಿ ಲೆಕ್ಕ ಮಾಡುತ್ತಿದ್ದೆ. ವ್ಯಾಪಾರದಲ್ಲಿನ ಚುರುಕುತನ ನನ್ನ ಜಾಣ ಎಂದು ಪರಿಗಣಿಸಿತು. ಏಳನೇ ತರಗತಿ ಬೋರ್ಡ ಪರೀಕ್ಷೆ. ಆಗ ಶಿಕ್ಷಕರು ಕಟ್ಟು ನಿಟ್ಟಾಗಿ ಕ್ಲಾಸಿಗೆ ಹಾಜರಾಗಲು ಸೂಚಿಸಿದರು.
ಒಂದರಿಂದ ಆರು ಅಪರೂಪದ ಅತಿಥಿಯಾಗಿದ್ದ ನಾನು ಶಾಲೆಗೆ regular ಆದದ್ದು ಏಳನೇ ಕ್ಲಾಸಿನಲ್ಲಿ ಮಾತ್ರ.

Thursday, October 28, 2010

ಕೆಟ್ಟು ಹೋದ ರಾಜಕೀಯ ಸಂಸ್ಕೃತಿ


ರಾಜ್ಯದ ಉನ್ನತ ಸ್ಥಾನದಲ್ಲಿರುವ ಮುಖ್ಯ ಮಂತ್ರಿಗಳು ನಿಮಗೆ ಗಂಡಸುತನ ಇದ್ದರೆ ಬರುವ ಚುನಾವಣೆಯಲ್ಲಿ ಗೆದ್ದು ತೋರಿಸಿ' ಎನ್ನುತ್ತಾರೆ.
ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಗೌರವಾನ್ವಿತ ಸ್ಪೀಕರ್ ಅವರಿಗೆ ಅವನಿದ್ದಾನಲ್ಲ ನಿಮ್ಮ ಸ್ಪೀಕರ್, ಅವನಿಗೆ ಈ ವಿಷಯ ಕೇಳಿ' ಎಂಬ ಅಗೌರವ ಭಾಷೆ ಬಳಸುತ್ತಾರೆ.
ಕೈ, ನಾಲಿಗೆ, ಹೀಗೆ ದೇಹದ ವಿವಿಧ ಅಂಗಾಂಗಗಳನ್ನು ಕತ್ತರಿಸುವುದಾಗಿ ಇನ್ನೊಬ್ಬರು ಅಬ್ಬರಿಸುತ್ತಾರೆ.
ಸುಸಂಸ್ಕೃತ ಸಭ್ಯ ಎನಿಸಿಕೊಂಡ ಕನ್ನಡ ಸಂಸ್ಕೃತಿಯ ಪ್ರತಿನಿಧಿಗಳಾಗಿರುವ ನಮ್ಮ ರಾಜಕೀಯ ನಾಯಕರುಗಳು ಹದ್ದು ಮೀರಿ ವರ್ತಿಸುತ್ತಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು-ಗೆಲವು ಇದ್ದದ್ದೇ. ಅಧಿಕಾರದಲ್ಲಿದ್ದವರನ್ನು ಬೀಳಿಸುವ ಪ್ರಕ್ರೀಯೆಯಿಂದಾಗಿ ಎಲ್ಲ ಗೊಂದಲ ಸೃಷ್ಟಿಯಾಗಿ ಶಾಸಕರ ಬೆಲೆ, ಭೂಮಿಯ ಬೆಲೆಯಂತೆ ಆಕಾಶಕ್ಕೇರಿದೆ. 25 ಕೋಟಿ ಬೆಲೆಬಾಳುತ್ತಾರೆಂದರೆ ಏನರ್ಥ?
ಕವಡೆ ಕಿಮ್ಮತ್ತಿಗೆ ಬೆಲೆ ಇಲ್ಲದಂತೆ ವರ್ತಿಸುವ ಜನಪ್ರತಿನಿಧಿಗಳ ಬೆಲೆ ರಾಜಕೀಯ ಜಂಜಾಟದಿಂದಾಗಿ ಕೋಟಿಗೇರಿದೆ.
ಸ್ವತ: ಶಾಸಕರೇ ತಮ್ಮ (ಇಲ್ಲದ) ಬೆಲೆಗಾಗಿ ಅಚ್ಚರಿಗೊಂಡಿದ್ದಾರೆ. ಯಾವ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳಬೇಕೆಂದು ಗೊಂದಲಕ್ಕೆ ಬಿದ್ದಿದ್ದಾರೆ. ಪಕ್ಷ, ಸಿದ್ದಾಂತ, ಆರಿಸಿದ ಮತದಾರರ ಮೌಲ್ಯಗಳನ್ನು ಮರೆತು, ತಮ್ಮ ಮೌಲ್ಯ ಹೆಚ್ಚಳಕ್ಕೆ ಪರದಾಡುತ್ತಿದ್ದಾರೆ.
ಕರ್ನಾಟಕ ಶಾಸಕ ಸಭೆಯ ಇತಿಹಾಸದಲ್ಲಿಯೇ Best (?) Batch ಎನ್ನಬಹುದು.
ಅಧಿಕಾರ ಸಿಗದಿದ್ದರೂ ಚಿಂತೆಯಿಲ್ಲ, ಸಿಕ್ಕ ಹಣ ಬಾಚಿಕೊಂಡರೆ ಸಾಕು ಎಂದು busy ಆಗಿದ್ದಾರೆ.
ಅವರ ಹಣ ಹೂಡಿಕೆಗಾಗಿ ತಲೆಹಿಡುಕರು, ಭೂಮಿ ಹಿಡುಕರು ಅವರಿಗಿಂತಲೂ busy ಆಗಿದ್ದಾರೆ.
ಈ ಸ್ಥಿತಿ ಇನ್ನು ಮುಂದೆ ನಿಲ್ಲುವಂತೆ ಕಾಣುವುದಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಇನ್ನೂ ಆಪರೇಷನ್ ಗಳಿಗೆ ಸಿದ್ಧವಾಗುತ್ತವೆ ಅಧಿಕಾರ ಇರುವ ಪಕ್ಷಗಳ ಜೊತೆಗೆ ಕೈಜೋಡಿಸುವಾಗ ಕ್ಷೇತ್ರದ ಅಭಿವೃದ್ಧಿ ಎಂದರೆ ಏನು ಎಂಬುದನ್ನು ಅರ್ಥ ಶಾಸ್ತ್ರ ಬಲ್ಲವರು ಇವರನ್ನು ನೋಡಿ ಆದಷ್ಟು ಬೇಗ ಹೊಸ ವ್ಯಾಖ್ಯಾನ ರೂಪಿಸಲಿ.

ಬದಲಾದ ಭಾವನೆಗಳು - ಉಂಟಾದ ತಲ್ಲಣ

ನೀನು ಉಂಟು ಮಾಡಿದ ಗೊಂದಲಕ್ಕೆ ಕೊನೆ ಬೀಳಬಹುದು ಅಂದುಕೊಂಡಿದ್ದೆ.
ಬಿಸಿ ಅಪ್ಪುಗೆ, ಸಿಹಿ ಚುಂಬನಗಳು ನನ್ನ ಮೈ-ಮನಗಳನ್ನು ಅರಳಿಸಿ ಹೊಸ ತಲ್ಲಣಗಳಿಗೆ ಕಾರಣವಾಗಿ ಪ್ರೇಮಭಾಷೆಯನ್ನು ಪರಿಚಯಿಸಿದವು.
ಮುಗ್ಧತೆ ಮಾಯವಾಗಿ, ಹೊಸ ಆಸೆ ಹುಟ್ಟಿತು. ನಮ್ಮಲ್ಲಿರುವ ಪ್ರೇಮ-ಕಾಮನೆಗಳು ಅರಳುವುದು ಹೀಗೆ ಇರಬಹುದು ಅಂದು ಕೊಂಡಿರಲಿಲ್ಲ.
ಮುಗ್ಧತೆ ಕಳೆದುಕೊಂಡೆ ಅನಿಸಿದಾಗ, ಆ ಜಾಗೆಯಲ್ಲಿ ಆರಾಧನೆ , ದಬ್ಬಾಳಿಕೆ ಶುರು ಆಯಿತು.
ಹೀಗಾಗಬಹುದು ಅಂದುಕೊಂಡಿರಲಿಲ್ಲ. ನೀನೇಕೆ ಬೇರೆಯರನ್ನು ಮದುವೆ ಆಗಬೇಕು. ನಿನ್ನನ್ನು ಮದುವೆ ಆಗುವ ಹುಡುಗನಿಗೆ ಯಾವ ಹಕ್ಕಿದೆ? ಎಂಬ ಎಡವಟ್ಟು ಪ್ರಶ್ನೆ ಆರಂಭವಾಗಲು ನಿನ್ನ ವರ್ತನೆ ಕಾರಣ ಎಂಬ ಭಾವನೆ ಕೆರಳಿಸಿತು.
ಪ್ರಯಾಣದಲಿ ಬಸ್ಸಿನ ಗಾಲಿಗಳು ಉರುಳಿದಂತೆಲ್ಲ, ಭಾವನೆಗಳು ಅರಳಹತ್ತಿದವು. ಮತ್ತೆ ಅದೇ ಅಪ್ಪುಗೆ, ಚುಂಬನಗಳು ಬೇಕೆನಿಸಿದವು.
ನಾನೊಬ್ಬ ಭಾವಕ ಹುಡುಗ, ನೀನಾದರೆ ಪ್ರಭುದ್ಧ ಹೆಣ್ಣು ನಿನಗೆ ಮದುವೆ ಎಂಬ ಸಂಕೋಲೆಯಲ್ಲಿ ನನ್ನನ್ನು ಗಾಯಗೊಳಿಸಿ ಆಸೆ ತೋರಿಸಿ ಮಾಯವಾಗುವ ಅಧಿಕಾರ ನಿನಗೆ ಕೊಟ್ಟವರಾರು? ನೋಡು ನನಗರಿವಿಲ್ಲದಂತೆ ನಾನು ಕ್ರೂರಿಯಾಗಲು ನಿನ್ನ ಪ್ರೇಮದ ಬಿಸಿ-ಅಪ್ಪುಗೆಯೇ ಕಾರಣ.
ಆದರೆ ಈ ಎಲ್ಲ ತಾರ್ಕಿಕ ಅಲೋಚನೆಗಳು ಈಗ ಅರ್ಥವಾಗಿವೆ. ಆಗ ನನಗೆ ತಿಳಿದಿದ್ದರೆ ಅಷ್ಟೊಂದು ಭಾವುಕನಾಗುತ್ತಿರಲಿಲ್ಲ.

ಎಲ್ಲವನ್ನು ಸಹಿಸಿಕೊಂಡು ಸಿಕ್ಕಷ್ಟು ಅನುಭವಿಸುತ್ತಿದ್ದೇನೇನೋ. ಒಂಟಿಯಾಗಿ ಬಳಲುವ ಸ್ಥಿತಿ ಬರುತ್ತಿರಲಿಲ್ಲ.
Hug,Love,Kiss ಎಂಬ ಪದಗಳು, ರಾಗ ಸಂಯೋಜನೆಗೊಂಡು ದೇಹದ ಮೇಲೆ ಹಿತವಾಗಿ ನರ್ತನ ಮಾಡಲು ಶುರು ಮಾಡಿದ ಮೇಲೆ ನನ್ನಲ್ಲಿ ಬದಲಾವಣೆ ಆರಂಭವಾಗಿತ್ತು.
ಮುಂದೆ ಇಂತಹ ದಟ್ಟ ಕಾಡೊಂದು ಸಿಕ್ಕರೆ ನೀನು ಹೇಳುವ ಮುನ್ನವೇ ನಾನೇ ಬಿಗಿದಪ್ಪಿ ಮುದ್ದಾಡಲು ನಿರ್ಧರಿಸಿದೆ.ಏ fool ಬಾರೋ ಇಲ್ಲಿ ಅನ್ನುವ ಅಗತ್ಯವೇ ಇಲ್ಲ. ನನ್ನಲ್ಲೀಗ ಆ foolishness ಮಾಯವಾಗಿದೆ.
ಮುಂಬರುವ ಎಲ್ಲ ಘಟನೆಗಳಿಗೆ ನೀನೆ ಕಾರಣವಾದೆ ಎಂಬುದನ್ನು ವಿಷಾದದಿಂದ ನೆನಪಿಸಿಕೊಳ್ಳುತ್ತೇನೆ. ಹುಡುಗುತನದ ಮುಗ್ಧತೆ ಮಾಯವಾಗಿ, ಪುರುಷ ಪ್ರಧಾನ dominent ಭಾವನೆ Adom, Eve ಕತೆಯಂತೆ ಹೀಗೆ ಆರಂಬವಾಗಬಹುದು ಅಂದುಕೊಂಡಿರಲಿಲ್ಲ.
Adom and Eve ಕತೆಯನ್ನು ಶಿಕ್ಷಕರು ವಿವರಿಸಿದಾಗ ಅರ್ಥವಾಗಿರಲಿಲ್ಲ. ಆದರೆ ನೀ ಮೈ ಪುಳಕಗೊಳಿಸಿದ ಮೇಲೆ Adom ಎಚ್ಚರಾಗಿದ್ದಾನೆ.
ಪಕ್ಕದಲ್ಲಿ ನಿನ್ನ ಪಾಡಿಗೆ ನೀನು ಕುಳಿತಿದ್ದೆ, ಬೇಕಾದಾಗ ಮಾತ್ರ ಬೇಕಾದಂತೆ ವರ್ತಿಸುವ ತಿಳುವಳಿಕೆ ನಿನಗೆ ನಿನ್ನ ಹೆಣ್ತನ ನೀಡಿತ್ತು. ಆದರೆ ನನಗೆ ಕೇವಲ ಹುಚ್ಚು, ನೀ ಬೇಕೆಂಬ ಅದಮ್ಯ ಬಯಕೆ.
ನಿಧಾನ ರೋಮಾಂಚಿತನಾಗಿ ಮೈ ಅರಳತೊಡಗಿ ಮನಸು ಬೆಚ್ಚಗಾಯಿತು.
ನಿಧಾನ ತಾಗಿ ಬಳುಕುವ ನಿನ್ನ ತೋಳುಗಳನ್ನು ದಿಂಬಾಗಿಸಿ ಮಲಗಿಕೊಂಡಾಗ ನಿದ್ರೆಗೆ ಜಾರಿದ್ದೆ ಗೊತ್ತಾಗಲಿಲ್ಲ......
ಬೆಳಕು ಹರಿದಾಗ ಕಣ್ಣೆದುರು ಧುತ್ತೆಂದು ಪ್ರತ್ಯಕ್ಷವಾದ ಮೈಸೂರು ಅರಮನೆ ನಿನ್ನಷ್ಟು ಭವ್ಯ ಅನಿಸಲಿಲ್ಲ.
ಮೈ ಮನಗಳಲಿ, ಕಣ್ಣನೋಟದಲಿ, ಹರಿದಾಡುವ ರಕ್ತದಲಿ ನೀ ಆವರಿಸಿಕೊಂಡಿದ್ದೆ.
ನನ್ನ ನಗು -ಮುಗ್ಧತೆಯಂತೆ ಮಾಯವಾಗಿ ಹೋಯಿತು. ಮುಗ್ಧತೆಗೆ ಗೊತ್ತಿರದ ಅನೇಕ ಸತ್ಯಗಳು ಅರ್ಥವಾಗತೊಡಗಿದವು.


ಅರಮನೆಯ ಸೌಂದರ್ಯದ ವಿವರಣೆ ತಲೆಯಲಿ ಹೋಗಲಿಲ್ಲ.ನೀನೋ ಏನೂ ಅಗದವಳಂತೆ, ಏನನ್ನೂ ಅನುಭವಿಸದಂತೆ ಸಹಜವಾಗಿದ್ದುದು, ನನ್ನ ಸಹಜತೆಯನ್ನು ನುಂಗಿಹಾಕಿತ್ತು.
ಗಲಿಬಿಲಿಯಾದ ಮನಸಿಗೆ ನಿನ್ನ ಸಾಂತ್ವನದ ಮಾತುಗಳು ಬೇಕೆನಿಸಿದ್ದವು. ನೀ ಸುಮ್ಮನಾದರೆ ಕೆನ್ನೆಗೆ ಬಾರಿಸಿ ಮಾತಿಗೆ ಎಳೆಯಬೇಕೆನಿಸಿತು.
ಪುರುಷತ್ವದ ಅಹಂಕಾರ ಜಾಗೃತವಾದಾಗ, ಕಾಮ ಅರಳಿದಾಗ ಉಂಟಾಗುವ ಮೃಗತ್ವ ಕೆರಳಿತು.
sorry I am sorry ಹಿಂದೆ ತಿರುಗದ ಹಾದಿ ಹಿಡಿದಿದ್ದೆ. ಮುಂದೆ ನನ್ನಿಂದ ಏನಾದರು ಎಡವಟ್ಟಾದರೆ ದಯವಿಟ್ಟು ಕ್ಷಮಿಸು ಎನ್ನುವ ಸೌಜನ್ಯವನ್ನು ಮನಸು ಮರೆಯಿತು.
Love,affection, infatuation ಹೀಗೆ ಹೊಸ ಪದಗಳು ಸಾಲಾಗಿ ಜೋಡಣೆಯಾದವು. ಈಗ ಅದಕ್ಕಾಗಿ ವಿಷಾದವಿಲ್ಲ ಆ ಮಾತು ಬೇರೆ ಅದರೆ ಆಗ ......ಆಗ.....