Wednesday, August 3, 2016

ಅಗ್ನಿ ಪರೀಕ್ಷೆ

ಅಗ್ನಿ ಪರೀಕ್ಷೆ

ಆತ್ಮೀಯರು ಅನಿರೀಕ್ಷಿತವಾಗಿ
ಗೊಂದಲಕ್ಕೆ ಬಿದ್ದು ದಾರಿ
ಕಾಣದಾದಾಗ ಕೇವಲ
ಸಹಾನುಭೂತಿ
ತೋರದೇ
ಅನುಭೂತಿಯಿಂದ
ಅನುಭವಿಸಿ ಸೂಕ್ತ
ಮಾರ್ಗದರ್ಶನ
ತೋರಬೇಕು.
ಎಷ್ಟೇ ಜಾಣರಿದ್ದರೂ
ತೀವ್ರ ಸಂಕಷ್ಟ ಎದುರಾದಾಗ
ದಾರಿ ಕಾಣದಾಗುತ್ತದೆ.
ಆಗ ಸಹಾನುಭೂತಿಗಿಂತಲೂ
ಅನುಭೂತಿ ಪರಿಣಾಮಕಾರಿಯಾಗಿ
ನೆರವಾಗುತ್ತದೆ.
ವೈದ್ಯರೇ ಅನಾರೋಗ್ಯ
ದಿಂದ ಬಳಲುವಾಗ
ಇನ್ನೊಬ್ಬ ವೈದ್ಯನ ಚಿಕಿತ್ಸೆ
ಅನಿವಾರ್ಯವಾಗುತ್ತದೆ.
ಅಗ್ನಿ ಪರೀಕ್ಷೆಯಿಂದ
ಪಾರಾಗಲು
ನೆರವಾಗೋಣ .

----ಸಿದ್ದು ಯಾಪಲಪರವಿ

No comments:

Post a Comment