Monday, May 9, 2016

ಬಸವ ಜಯಂತಿಯ ಶರಣುಗಳು

ಕಳೆದ ಎರಡುವರೆ ದಶಕಗಳಿಂದ ನಿತಾಂತವಾಗಿ ವಚನ ಸಾಹಿತ್ಯವನ್ನು ಓದುತ್ತಾ , ಸಾವಿರಾರು ವೇದಿಕೆಗಳಲ್ಲಿ ಮಾತನಾಡಿದ್ದೇನೆ ಆದರೂ ತಿಳುವಳಿಕೆ ಸಾಲದು. ತೀರಾ ಇತ್ತೀಚೆಗೆ ಅಲ್ಲಮ, ಅಕ್ಕ , ಚನ್ನಬಸವಣ್ಣ ಅರ್ಥವಾಗತೊಡಗಿದ್ದಾರೆ , ಎಷ್ಟು ಓದಿದರೂ ಸಾಲದೆನಿಸುತ್ತದೆ.
ಕೆಲವರು ಬಸವಾದಿ ಶರಣರ ತತ್ವಗಳ ವ್ಯಾಪಾರಿಕರಣದಲ್ಲಿಯೂ ಯಶಸ್ವಿಯಾಗಿದ್ದಾರೆ.
ಸಂಪೂರ್ಣ ಅರ್ಥಮಾಡಿಕೊಂಡು ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಂಡಾಗ ಮಹಾಮನೆ ಅನುಭವ ಮಂಟಪದಲ್ಲಿನ ಬಸವಾದಿ ಶರಣರ ಶ್ರಮ ಸಾರ್ಥಕವಾಗುತ್ತದೆ. ಆದರೆ ಯಾಕೋ ಹಾಗಾಗುತ್ತಿಲ್ಲ ಎಂಬ ವಿಶಾದದ ಮಧ್ಯೆ ನಿತ್ಯ ಸ್ಮರಿಸುವ ಆರಾಧ್ಯ ದೈವ , ಮಹಾ ಮಾನವತಾವಾದಿ ಬಸವಣ್ಣ ಹಾಗೂ ಅನುಭವ ಮಂಟಪದ ಸಾಧನೆಯನ್ನು ಮೆಲುಕು ಹಾಕಿದೆ .
ಎಂದೆಂದೂ ಬತ್ತದ ಸೆಲೆ , ದೀನರಿಗೆ ನೆಲೆ ನೀ ಬಸವಣ್ಣ.
ಎಲ್ಲರಿಗೂ ಬಸವ ಜಯಂತಿಯ ಶರಣುಗಳು.
----ಸಿದ್ದು ಯಾಪಲಪರವಿ.

No comments:

Post a Comment