Friday, September 14, 2012

ಚಿತ್ರದುರ್ಗ ಮಹಾರಾಣಿ, ಮಹಾರಾಜನ ನಂಟು


ಮಹಾರಾಣಿ ಪಿ.ಯು, ಮಹಾರಾಜ ಪದವಿ ಕಾಲೇಜುಗಳನ್ನು ಅಲ್ಲಿನ ಹಿಂದುಳಿದ ಜನಾಂಗದ ನಾಯಕ ಡಿ.ಬೋರಪ್ಪ ಆರಂಭಿಸಿದ್ದರು.  ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ್ದ ಕಾಲೇಜಿನಲ್ಲಿ ನನಗೆ ಕೈತುಂಬಾ ಸಂಬಳ ಸಿಗದಿದ್ದರೂ, ಮೈತುಂಬಾ ಕೆಲಸವಂತು ಇತ್ತು.

ಮೊದಲ ವರ್ಗಕ್ಕೆ ಹೋಗುವಾಗ ನನಗೆ ಅಷ್ಟೊಂದು ಆತಂಕವಿರಲಿಲ್ಲ.  ವಿದ್ಯಾರ್ಥಿ ದೆಸೆಯಿಂದಲೂ ಭಾಷಣ ಮಾಡಿ ರೂಢಿ ಇತ್ತು.  ಚರ್ಚಾಪಟುಗಳಿಗೆ ಉಪನ್ಯಾಸಕ ವೃತ್ತಿ ಕಠಿಣವೆನಿಸುವುದಿಲ್ಲ. ಆದರೂ ಮೊದಲ ದಿನ ಯಾವ ವಿಷಯ ಆಯ್ಧುಕೊಳ್ಳಬೇಕು ಎಂಬ  ಗೊಂದಲದ ಮಧ್ಯೆ Hhow to learn  English as a Kannada Student? ಎಂಬ ವಿಷಯ ಪಿ.ಯು. ವರ್ಗಕ್ಕೆ ವಿವರಿಸಿದೆ.  ಮೊದಲ ವರ್ಗದಲ್ಲಿಯೇ 250 ವಿದ್ಯಾರ್ಥಿಗಳು, Houseful ವಾತಾವರಣ, ವಿದ್ಯಾರ್ಥಿಗಳ ಮುಖದ ಮೇಲಿನ ಖುಷಿ, ನನ್ನನ್ನು ಗೆಲ್ಲಿಸಿದ ಭಾವನೆ.

ಅಂದೇ B.A. B.Com.B.Sc. ವಿದ್ಯಾರ್ಥಿಗಳನ್ನು ಒಟ್ಟಾಗಿ ಸೇರಿಸಿ ನನಗೆ ತುಂಬಾ ಇಷ್ಟವಾದ Shakespeareನ  True Love Poem ಆಯ್ದುಕೊಂಡೆ.  ಅದನ್ನು ರಸವತ್ತಾಗಿ ಪಾಠ ಮಾಡುತ್ತಿದ್ದ ನನ್ನ ಗುರುಗಳನ್ನು ನೆನಪಿಸಿಕೊಂಡು ಅದೇ ಪರಿಣಾಮದಲ್ಲಿ ಪಾಠ ಮಾಡಿ ಯಶಸ್ಸಿಯೂ ಆದೆ. 

ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳ ಕಣ್ಮಣಿಯಾದೆ.  ಆದರೆ ಹೊಟ್ಟೆಪಾಡು ಕಠಿಣವಾಗಿತ್ತು.  Approval, Grant ಎಂಬ ಪದಗಳ ಪರಿಚಯವಿರಲಿಲ್ಲ.  ಅದೆಲ್ಲ ಮುಗಿದರೆ ನಿಯತ ಸಂಬಳ ಎಂಬ ಕಲ್ಪನೆಯೂ ಇರಲಿಲ್ಲ.  ಕೇವಲ ಪಾಠ ಮಾಡುವುದೊಂದೇ ಗೊತ್ತಿತ್ತು.

ಎಲ್ ಆರ್. ಮುನಿಪಾಟೀಲ ಮನೆಯಲ್ಲಿ ರಾತ್ರಿ ಪ್ರೀತಿಯಿಂದ ಊಟ ಹಾಕಿ, ಖರ್ಚಿಗೆ ಹಣ ಕೊಡುತ್ತಿದ್ದರು.  ಅವರ ಋಣ ನನಗೆ ಈಗಲೂ ಹಾಗೆಯೇ ಇದೆ.  ಕೆಲವೊಂದನ್ನು ಚುಕ್ತಾ ಮಾಡಲಾಗುವುದಿಲ್ಲ. ಸರಕಾರದಿಂದ ನನ್ನ ಹುದ್ದೆಗೆ ಬೇರೆಯವರು ಬಂದ ಮೇಲೆ ಅಲ್ಲಿಂದ ಬಿಡುವುದು ಅನಿವಾರ್ಯವಾಯಿತು.

ಅದು ಗೊತ್ತಿದ್ದರೂ ತುಂಬಾ ಲವಲವಿಕೆಯಿಂದ ಪಾಠ ಮಾಡಿದೆ.  ಚಿತ್ರದುರ್ಗ ಗ್ರಾಮೀಣ ವಿದ್ಯಾರ್ಥಿಗಳು ತುಂಬಾ ಮುಗ್ಧರು.  ಕೋಟೆಯೆದುರಿಗಿನ ಕಾಲೇಜು, ಆ ಕಾಲೇಜಿನ ತುಂಬೆಲ್ಲ ಹರಡಿರುವ ವಿದ್ಯಾರ್ಥಿಗಳು, ಮುಂಜಾನೆ  ನಾಯಿಗೆ ಬ್ರೆಡ್ ಹಾಕುತ್ತಾ ನಿಂತಿರುತ್ತಿದ್ದ  ಚೇರ್ ಮನ್ ಈಗಲೂ ನನ್ನ ಕಣ್ಣಮುಂದೆ ಹಾದು ಹೋಗುತ್ತಾರೆ.

Monday, September 10, 2012

ಎರಡು ದಶಕಗಳ ಶಿಕ್ಷಕ ವೃತ್ತಿಯ ನೆನಪುಗಳು.


          ಈ ಬಾರಿ ಶಿಕ್ಷಕ ದಿನಾಚರಣೆಯನ್ನು ಆಚರಿಸುವಾಗ ಶಿಕ್ಷಕನಾಗಿರಲಿಲ್ಲವೆ?  ಈ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

          1989 ರಿಂದ 2010ರ ಜೂನ್ ತನಕ ನಿರಂತರ ಶಿಕ್ಷಕ ವೃತ್ತಿಯ ಪಯಣ ನಿಜವಾಗಲೂ ಸ್ಮರಣೀಯ.  2010 ಜೂನ್ 9ರಂದು ಆದ ಅಪಘಾತ,  ಮುರಿದ ಎಡಗೈ ಶಿಕ್ಷಕ ವೃತ್ತಿಗೆ ತಾತ್ಕಾಲಿಕ ತಡೆ ಒಡ್ಡಿತು.  ಹಲವಾರು ಕಾರಣಗಳಿಗೆ ಅವಕಾಶಗಳಿದ್ದರೂ ಮರಳಲು ಸಾಧ್ಯವಾಗಲಿಲ್ಲ.  ಆದರೆ, ವೃತ್ತಿಯ ಹಚ್ಚ ಹಸಿರು ನನ್ನಿಂದ ಮರೆಯಾಗಲು ಅಸಾಧ್ಯ.

          ಇಂಗ್ಲಿಷ್ ಎಂದರೆ ಭಯದ ವಾತಾವರಣದಲ್ಲಿದ್ದ ನನಗೆ 1981ರಲ್ಲಿ ಪ್ರವೇಶ ಪಡೆದ ಕರ್ನಾಟಕ ಕಾಲೇಜು ಧಾರವಾಡದ ವಾತಾವಣ ಹೊಸ ಭರವಸೆ ಮೂಡಿಸಿ ಭಯ ದೂರಾಗಿಸಿತು.  ಅಲ್ಲಿನ ಶಿಕ್ಷಕರು ಆದರ್ಶಪ್ರಾಯರಾದರು. ಡಾ: ಸಿದ್ಧಲಿಂಗ ಪಟ್ಟಣಶೆಟ್ಟಿ, ಇಂಗ್ಲಿಷ್ ವಿಭಾಗದ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಇಂಗ್ಲಿಷ್  ಮೇಜರ್ ವಿಷಯವಾಗಿ ತೆಗೆದುಕೊಳ್ಳಲು ಪ್ರೇರೆಪಿಸಿದರು. 

          ಆದರೆ ಅದಕ್ಕೆ ಅಗತ್ಯವಿರುವಷ್ಟು ಆಳವಾಗಿ ಓದಲು ಸಾಧ್ಯವಾಗದಿರಲು ಭಾಷಾ ಸಮಸ್ಯೆಯೇ ಕಾರಣ.  ಅಂದು ಸ್ನೇಹಿತರಾಗಿದ್ದ ಅರುಣ ಹಾನಗಲ್ಲ್, ಅನಿತಾರಾವ್ ಇಂಗ್ಲಿಷ್  ಮಾತನಾಡವ ಆತ್ಮವಿಶ್ವಾಸ ತುಂಬಿದರು.  ಆಗ ನಾನು ಇಂಗ್ಲಿಷ್  ಶಿಕ್ಷಕ ಆಗಬಹುದು ಎಂಬ ಭರವಸೆ ಮೂಡಿರಲಿಲ್ಲ.

          ಬದುಕಿಗೆ ಅದರದೇ ಆದ ತಿರುವುಗಳು ಇರುತ್ತವೆ.  ನಾವು ಬದುಕು ಕರೆದುಕೊಂಡು ಹೋಗುತ್ತೇವೆ.  ಅಲ್ಲಿಗೆ ಯಾಕೆ ಹೋಗುತ್ತೇವೆ ಎಂಬುದು ನಮಗೂ ಗೊತ್ತಿರುವುದಿಲ್ಲ. ನನ್ನ ಪಾಡು ಅದೇ ಆಯಿತು.  ಮನೆತನದ  ಅನಿರೀಕ್ಷಿತ ಸಮಸ್ಯೆಗಳ ಕಾರಣದಿಂದ ನೌಕರಿ ಹಿಡಿಯಲೇಬೇಕಿತ್ತು. ಎಂ.ಎ. ಧಾರವಾಡದಲ್ಲಿ ಅಸಾಧ್ಯ ವೆನಿಸಿದಾಗ ಧಾರವಾಡದಲ್ಲಿ ಭೇಟಿಯಾದ ಪ್ರೊ: ಪಿ.ಎಸ್. ರೆಡ್ಡಿ ಸರ್ ಜಗತ್ತಿನಲ್ಲಿ ಬೇಕಾದಷ್ಟು ವಿಶ್ವವಿದ್ಯಾಲಯಗಳಿವೆ, ಕೇವಲ ಧಾರವಾಡ ಒಂದೇ ಅಲ್ಲ ಎಂಬ ಮಾತು ಮುಂದೆ ಹೋಗಲು ಪ್ರೇತೆಪಿಸಿತು.

          ಎಂದೂ ನೋಡದ, ಕೇಳರಿಯದ ಕೆಡಗೆ ನನ್ನ ಪಯಣ ಸಾಗಿತು.  ಡಾ: ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಕೊಟ್ಟ ಚೀಟಿ ಹಿಡಿದು ಕೊಲ್ಲಾಪುರಕ್ಕೆ ಹೋಗಿ ಡಾ: ಶಾಂತಿನಾಧ ದೇಸಾಯಿಯವರನ್ನು ಕಂಡೆ.  ಅವರ ಕಧೆ, ಕಾದಂಬರಿಗಳನ್ನು  ಆಗಲೇ ಓದಿದ್ದೆ.  ಅವರು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜು ಸೇರಲು ತಿಳಿಸಿದಾಗ ಬೆಚ್ಚಿ ಬಿದ್ದೆ.  ಆಗ ನನಗೆ ಮರಾಠಿ, ಹಿಂದಿ ಭಾಷೆಗಳು ಬರುತ್ತಿರಲಿಲ್ಲ.  ಭಯ ಭೀತರಾಗಿ ಒಂಟಿಯಾಗಿ ಚಿಂತಿಸಿದೆ, ಹೋಗುವ ಅನಿವಾರ್ಯವಿತ್ತು.

          ವಿಲ್ಲಿಂಗ್ಡನ್ ಕಾಲೇಜು ಸೇರಿದೆ.  ಹೊಚ್ಚ ಹೊಸ ವಾತಾವರಣ ತಿಳಿಯದ ಮರಾಠಿ, ಧಾರವಾಡ ಎಂ.ಎ. ಕಷ್ಟಪಟ್ಟು ಎರಡು ವರ್ಷ ಪೂರೈಸಿದೆ.  ಒಳ್ಳೇ ಫಲಿತಾಂಶ ಬರಲಿಲ್ಲ.  54.5%ಗೆ ಮೀಸಲಾದೆ.  55% ಆಗಿದ್ದರೆ, ಸರಕಾರಿ ನೌಕರಿ ಸಿಗುತ್ತಿತ್ತು.  ಅದೃಷ್ಟ ಆಡಿದಂತೆ ಆಡಿದೆ.  ಅಮೆರಿಕನ್ ಸಾಹಿತ್ಯದಲ್ಲಿ ಮರು ಪರೀಕ್ಷೆ ತೆಗೆದುಕೊಳ್ಳುವ ಮೊದಲು ಆತ್ಮ ವಿಶ್ವಾಸ ಮೂಡಿಸಿಕೊಂಡು ವೃತ್ತಿಗೆ ಧುಮುಕಲು ತೀರ್ಮಾನಿಸಿದೆ. 

ಎಲ್. ಆರ್. ಮೂಲಿಪಾಟೀಲ್ ನಮಗೆ ಗೊತ್ತಿದ್ದ ಪೋಲಿಸ್  ಅಧಿಕಾರಿ ಅವರು ಚಿತ್ರದುರ್ಗದಲ್ಲಿ ಸಿ.ಪಿ.ಎ. ಆಗಿದ್ದರು.  ಅಲ್ಲಿನ ಡಿ. ಬೋರಪ್ಪನವರು ಸ್ಥಾಪಿಸಿದ  ಮಹಾರಾಜ ಹಾಗೂ ಮಹಾರಾಣಿ ಕಾಲೇಜುಗಳಲ್ಲಿ ಅರೆಕಾಲಿಕ ನೌಕರಿ ಕೊಡಿಸಿ ವಾಸ್ತವ, ಊಟಕ್ಕೆ ವ್ಯವಸ್ಥೆ ಮಾಡಿದರು.  ಚಿತ್ರದುರ್ಗದಲ್ಲಿ ಒಂದು ವರ್ಷ, ಗದುಗಿನ ಜೆ.ಡಿ.ಕಾಲೇಜಿನಲ್ಲಿ, ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜಿನಲ್ಲಿ,  ಅಂತಿಮವಾಗಿ ಫುಲ್ ಟೈಮ್ ಕೆ.ಎಲ್.ಇ. ಮಹಿಳಾ ಕಾಲೇಜಿನಲ್ಲಿ ಏಕಕಾಲಕ್ಕೆ ಕೆಲಸ ಮಾಡಿದೆ. 

          ಆಗಿದ್ದ ಛಲ, ಆತ್ಮವಿಶ್ವಾಸ, ಅನಿವಾರ್ಯತೆ ಹಾಗೂ ಪರಿಶ್ರಮವನ್ನು ನೆನಪಿಸಿಕೊಂಡರೆ ಬೆಳಗಾಗುತ್ತದೆ.  ಆಗ ನನಗೆ ಗದುಗಿನಲ್ಲಿ ಜನ ನನ್ನನ್ನು ಪ್ರೀತಿಯಿಂದ siddu yapalaparvi English lecturer of Gadag  Betageri. ಎನ್ನುತ್ತಿದ್ದರು.  ಅರೆಕಾಲಿಕ ವೃತ್ತಿ ನನ್ನ ಹೊಟ್ಟೆಯನ್ನು ತುಂಬಿ ಹೊಸ ಜಗತ್ತನ್ನು ತೋರಿಸಿತು.

           

 

 

Monday, September 3, 2012

ಸ್ನೇಹ ವೆಂಬ ಹೆಸರಿನ ಅಪಾಯಕಾರಿ ವಾಸ್ತವ


                                                             ದೃಶ್ಯ  __ 1

ಸ್ನೇಹದಲ್ಲಿ ಅಪಾರವಾದ ವಾಸ್ತವ ಸೇರಿದರೆ ಆಗುವ ಅಪಾಯಕ್ಕೆ ನೀನೇ ಸಾಕ್ಷಿ.  ಗುಡಿ ಗುಂಡಾರಗಳಲ್ಲಿ ನಂಬಿಕೆ ಇಲ್ಲದೆ, ದೇವರ ಸರ್ವವ್ಯಾಪಿ ಅಸ್ತಿತ್ವದಲ್ಲಿ ಭಕ್ತಿ ಕಾಣುವ ನನ್ನನ್ನು ದೇವರ ಗುಡಿಗೆ ಎಳೆದಾಗಲೇ ಅಚ್ಚರಿಯಾಯಿತು.

ಅಯ್ಯೊ ಪಾಪ! ಏನೋ ನಿನ್ನ ನಂಬಿಕೆ ಅಂದುಕೊಂಡೆ, ಸಂಕಷ್ಟಿಯ ದಿನದ ಸಂಜೆ ಗಣೇಶನ ಸನ್ನಿಧಾನದಲ್ಲಿ ನನ್ನ ಮೇಲಿನ ವ್ಯಾಮೋಹವನ್ನು ಸಾಕ್ಷೀಕರಿಸಿದ್ದನ್ನು ಅಮಾಯನಂತೆ ನಂಬಿದೆ.

ನಿನ್ನ ಸೌಂದರ್ಯ, ಅಪಾರ ಕಾಳಜಿ ನನಗೆ ಮುಖ್ಯವೆನಿಸದೆ ನಿನ್ನನ್ನು ಒಪ್ಪಿಕೊಂಡೆ, ದೇವಸ್ಥಾನದಿಂದ ಹೃದಯ ಸಿಂಹಾಸನದಲ್ಲಿ ಆಸೀನಳಾಗುವ ಅವಕಾಶ ನೀಡಿ ಹತ್ತಿರ ಪಡೆದುಕೊಂಡೆ.  ಒಂದೇ ರಿಂಗಿಗೆ ರಿಸೀವ್ ಆಗುವ ಫೋನ್ ಗಂಟೆಯಾದರೂ ಕೊನೆಗೊಳ್ಳುತ್ತಿರಲಿಲ್ಲ.
ಗೆಳೆಯ, ನಿನ್ನಲ್ಲಿರುವ ರಾಜಕಳೆ, ರಾಜ ಗಾಂಭೀರ್ಯ ಬಿಸಿ ಅಪ್ಪುಗೆಯಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಹಿತಕರ ಮಾತುಗಳನ್ನು ಆಪ್ತವಾಗಿ ನಂಬಿದೆ.ನಿನ್ನ ಕರೆ ಬಂದಾಗ ಜಿಂಕೆಯ ಹಾಗೆ ಓಡಿ ಬರೋಣ ಎನಿಸುತ್ತೆ ಅಂತ ಹೇಳಿದ್ದು….. ಹಾಗೆ ಬಂದದ್ದು ಕೂಡಾ ಅಷ್ಟೇ ಸತ್ಯ.
ಆಪ್ತ ನಗೆ, ಗುಪ್ತ ನರಳಾಟ  ಸುಖ ಹುಡುಕುವುದು ಮನುಷ್ಯ ಸಹಜ ದೌರ್ಬಲ್ಯ  ಅದಕ್ಕೆ ನಾನು ಹೊರತಾಗಲಿಲ್ಲ.  ಲಂಡನ್ ಬ್ರಿಡ್ಜ್ ಮೇಲೆ ಕಾರನ್ನು ವೇಗವಾಗಿ ಓಡಿಸುತ್ತಾ ಹಂಚಿಕೊಂಡ ಸಿಹಿ ನೆನಪುಗಳು.
ಮೈ-ಮನಸ್ಸನ್ನು ಹಗುರಾಗಿಸಲು ತೋರಿದ ಉತ್ಸಾಹ ನಾನು ಶಾಶ್ವತ ಅಂದುಕೊಂಡದ್ದು… ಹೀಗೆ ಬದುಕೊಂದು ಸುಂದರ ಸಂಜೆ.  ಪ್ರೀತಿಯ ಸೆಳೆತದಲ್ಲಿದ್ದಾಗ ಉರಿ ಬಿಸಿಲು ಮಟ ಮಟ ಮಧ್ಯಾನ್ಹ ಬರಬಹುದೆಂದು ನಾವ್ಯಾರು ಅಂದುಕೊಳ್ಳುವುದೇ ಇಲ್ಲ.

ಜಿಂಕೆಯ ನಡಿಗೆ ನಿಧಾನವಾಗಿ ಆಮೆ ನಡಿಗೆಯಾಯಿತು.  ಮುಖದ ಮೇಲಿನ ನಗೆ ಮಾಯವಾಯಿತು. ಹತ್ತಾರು ರಿಂಗ್ ಆದರೂ ಫೋನ್ ರಿಸೀವ್ ಆಗಲೇ ಇಲ್ಲ.  ಲಂಡನ್ ಬ್ರಿಡ್ಜ್ ಮೇಲೆ ಕಾರು ವೇಗವಾಗಿ ಓಡಲೇ ಇಲ್ಲ.  ಹೈಡ್ ಪಾರ್ಕ್ ಸುತ್ತಾಟಕ್ಕಾಗಿ ಕಾಲು ಯಾಕೋ ಸುಸ್ತಾದವು.

ಮೈ-ಮನಸು ಹಗುರಾಗುವ ಕ್ರಿಯೆ ನಿಂತೇ ಹೋಯಿತು.

ದೃಶ್ಯ  __ 2


ಈಗ ದ್ವನಿಯು ಕರ್ಕಶವಾಗಿ ಕೋಮಲತೆ ಮಾಯವಾಗಿದೆ.  ಕರೆದಾಗಲೆಲ್ಲ ಓಡಿಬರೋಕೆ ನನಗೇನು ಬೇರೆ ಕೆಲಸ ಇಲ್ಲವೇ? ಇನ್ನೇನು ಒಂದರ್ಧ ಗಂಟೆಯಲ್ಲಿ ಬರುವೆ ಸಹನೆಯಿಂದ ಕಾಯಕಾಗಲ್ವ ಎಂಬ ಮಾತುಗಳಲ್ಲಿನ ಒರಟುತನ ಮೊದಲ ದೃಶ್ಯದಲ್ಲಿ ಕಾಣಿಸುತ್ತಿತಲಿಲ್ಲ.ಸಂಜೆ ರೆಡಿಯಾಗಿರು ಸಾಧ್ಯವಾದರೆ ಬಂದು ಹೋಗುವೆ.  ನನಗೆ ವಿಪರೀತ ಕೆಲಸ ಯಾರನ್ನೊ ನೋಡಬೇಕು, ಎಲ್ಲಿಗೋ ಹೋಗಬೇಕು.  ಜನ ಏನು ನಮ್ಮ ಸಲುವಾಗಿ ಕಾಯುತ್ತಾ ಕೂಡುತ್ತಾರೇನು?   
ಬೇಕೆಂದಾಗ ಸಿಗಲು ಆಗೊಲ್ಲ, ನೀವು ಸ್ವಲ್ಪ ನಮ್ಮ ಕಷ್ಟಾನು ಅರ್ಥಮಾಡಿಕೋಬೇಕು.  ನೂರೆಂಟು ವ್ಯವಹಾರಗಳು, ವ್ಯವಹಾರಕ್ಕಾಗಿ ಜನರನ್ನು ಭೇಟಿ ಆಗಲೇ ಬೇಕು.  ಬರೀ ರೊಮ್ಯಾನ್ಸ್ ನಿಂದ ಹೊಟ್ಟೆ ತುಂಬುತ್ತದೆಯೇ? ಎಂಬ ವಾಸ್ತವದ ಪ್ರಶ್ನೆಗಳು ಸಾಗರದಲೆಗಳಂತೆ ಅಪ್ಪಳಿಸಲು ಶುರು ಆದಾಗ ತಡೆದು ಕೊಳ್ಳಲೇ ಬೇಕಲ್ಲ.
ಹೆಚ್ಚು ವಾದಿಸಿದಾಗ ಬಂದ ಉತ್ತರವೂ ಅಷ್ಟೇ ಭಯಾನಕವಾಗಿತ್ತು.  ನೀವು ತುಂಬಾ possessive ನಿಮ್ಮ way of thinking ಬದಲಾಯಿಸಿಕೊಳ್ಳಬೇಕು ಎಂಬ ಉಪದೇಶ ಬೇರೆ.  ಹೀಗೆ ಉಪದೇಶ ಮಾಡುವಾಗ ನನ್ನ ಮುಖದ ಮೇಲಿನ ರಾಜಕಳೆ ಕಾಣಲಿಲ್ಲವೇನೋ?
ಹೀಗೆ ಪ್ರೀತಿಯೆಂಬ ಭ್ರಮಾಲೋಕದಲ್ಲಿ ಹತ್ತು ಹಲವಾರು ಅನುಭವಗಳು ಕಿರಿ ಕಿರಿಗಳು ನಿಮಗೆ ಬೇಕೆಂದರೆ ದೃಶ್ಯ ಒಂದರ ಮಾತುಗಳನ್ನು ನಂಬಿ ಕಷ್ಟ ಅನುಭವಿಸಲೇ ಬೇಕು.
ಚಾರಿತ್ರ್ಯ ಚರಿತ್ರೆ ಗೊತ್ತಿಲ್ಲದವರೊಂದಿಗೆ ಅತೀಯಾದ ಸಲಿಗೆ, ಮೈ-ಮನಸುಗಳ ಹಂಚಿಕೊಳ್ಳುವ ಮುನ್ನ ಅತಿಯಾದ ಎಚ್ಚರಿಕೆ ಇರಲಿ. ವಾಸ್ತವಾದ ಹೆಸರಿನಲ್ಲಿ ಯ
 
ಯಾರಾದರೂ ಗುಟ್ಟಾಗಿ ಒದ್ದು ಹೋದಾಗ ಬಿದ್ದ ಒದೆಯನ್ನು ಬೇರೆಯವರೊಂದಿಗೆ ಹೇಳಿಕೊಳ್ಳವುದು ಕಷ್ಟ!  ಬೇರೆಯವರ ಚಾರಿತ್ರ್ಯ ಹಾಗೂ ಚರಿತ್ರೆ   ಕಂಡು ಪ್ರೀತಿಸುವ ವ್ಯವಧಾನ ಹೃದಯಕ್ಕೆ ಇರುವುದಿಲ್ಲವಾದರೂ ಒಂದು ಕ್ಷಣದ ಈ ತರಹದ ಆತಂಕದ ಗುಮಾನಿ ನಿಮ್ಮನ್ನು ನೋವಿನಿಂದ ರಕ್ಷಿಸಬಹುದು ಎಂಬ ಸಣ್ಣ ನಂಬಿಕೆ ಅಷ್ಟೆ!!     

ಪ್ರೀತಿಯೊಂದೇ ಸಾಲದು……………………………


 
ನಿತ್ಯ ಬದುಕಿನಲ್ಲಿ ಪ್ರೀತಿ ಜೀವ ದ್ರವ್ಯವಾಗಿದೆ.  ಪ್ರೀತಿಯಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ ಎಂಬುದು ಪರಮ ಸತ್ಯ.

ಸ್ನೇಹಿತರು, ಗೆಳೆತಿಯರು, ಬಂಧುಗಳು, ಸಹೋದ್ಯೋಗಿಗಳು ಎಲ್ಲರನ್ನು ಪ್ರೀತಿಯಿಂದ ಗೆಲ್ಲಬೇಕೆಂದು ಬಯಸುತ್ತೇವೆ.  ನಮ್ಮ ಖುಷಿ ಅಲ್ಲಿಯೇ ಇರುತ್ತದೆ ಕೂಡಾ!  ಆದರೆ ನಿಮ್ಮ ಸುತ್ತಲಿನ ಜನರ ಬಂಧನ ಆಳವಾಗಿರಬೇಕಾದರೆ, ನಿಮ್ಮ ಬಾಂಧವ್ಯ ಕೊನೆತನಕ ಇರಬೇಕು ಎಂಬುದಾದರೆ ಕೇವಲ ಪ್ರೀತಿಯೊಂದೆ ಸಾಲದು, ಪ್ರೀತಿಯ ಗೊಡೆಯು ಕುಸಿಯಬಾರದೆಂದರೆ ಅದನ್ನು ವಿಶ್ವಾಸವೆಂಬ ಗಾರೆಹಾಕಿ ಪ್ಲಾಸ್ಟರ್ ಮಾಡಲೇಬೇಕು.
ನಮ್ಮ ಬಹುಪಾಲು ಸಂಬಂಧಗಳು ಬಹುಬೇಗ ಕುಸಿಯಲು ವಿಶ್ವಾಸದ ಕೊರತೆಯೇ ಕಾರಣ. ಪ್ರೀತಿ ವಿಶ್ವಾಸವೆಂಬ ಜೋಡಿ ಪದ ಸಂಯೋಜನವಾಗಿರುವ ಮೂಲ ಕಾರಣವೂ ಇದೆ.  ಆದರೆ ನೀವು ವಿಶ್ವಾಸದಿಂದ  ಪ್ರೀತಿಯನ್ನು ಬೇರ್ಪಡಿಸಿದಾಗಲೆಲ್ಲ, ಪ್ರೀತಿಯ ಗೋಡೆಯಲ್ಲಿ ಬಿರುಕು ಕಾಣಿಸುತ್ತದೆ.
ನಮ್ಮ ಬಂಧುಗಳು ಗೆಳೆಯರು, ಹೆತ್ತವರು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ.  ಆದರೆ ಬರು ಬರುತ್ತಾ ಏನೋ ಸಣ್ಣ ಗುಮಾನಿಯಿಂದಾಗಿ ವಿಶ್ವಾಸದ ಕೊರತೆ ಉಂಟಾಗಿ ಬಿಡುತ್ತದೆ. ಪಾಲಕರು ಮಕ್ಕಳ ಮೇಲೆ ಎಷ್ಟೇ ಪ್ರೀತಿಯಿದ್ದರು ಹೆಂಡತಿ ಬಂದ ಮೇಲೆ ಮಕ್ಕಳ ಮೇಲೆ ಅನುಮಾನಿಸಲು ಶುರು ಮಾಡುತ್ತಾರೆ.  ಇದಕ್ಕೆ ಕಾರಣ ವಿಶ್ವಾಸದ ಕೊರತೆ, ಪ್ರೀತಿ ಕೊರತೆಯಿಂದಲ್ಲ ಎಂಬುದು ಅಷ್ಟೇ ಕುತುಹಲಕಾರಿ.
ವಿಶ್ವಾಸದ ಬಲದಿಂದ ಕೂಡಿದ ಪ್ರೀತಿ ಗಟ್ಟಿಯಾಗಿ ನೆಮ್ಮದಿ ಕೊಟ್ಟರೆ,  ವಿಶ್ವಾಸವಿಲ್ಲದ ಪ್ತೀತಿ ಕೇವಲ  possessiveness ಆಗಿಬಿಡುತ್ತದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಅಂಗಲಾಚಿ ಕಿರುಚಾಡುವವರಿಗೆಲ್ಲ ವಿಶ್ವಾಸದ ಕೊರತೆಯಿಂದಾಗಿ ಕೇವಲ INFATUATE ಆಗಿ, possessive ಆಗಿ ನೋವು, ಹಿಂಸೆ ಅನುಭವಿಸುತ್ತಾರೆ.ಕಿರಿ ಕಿರಿಯೆನಿಸುವ ಪ್ರೀತಿಯೆಂಬ ಹಾಲಿಗೆ ವಿಶ್ವಾಸವೆಂಬ ಜೇನ ಬೆರೆಸಿ ಬದುಕು ರುಚಿಯಾಗಿಸೋಣ.