Friday, August 31, 2012

The Cops dress knocked my mind


                Young man was walking in street with confidence.  He introduced himself as a cop once,   but left the job to protect his ideology of anticorruption.  The entered the politics to clean the  image  of society through the low making way.

                But unfortunately he did not.  Then I felt for him tried to give him better position.            I introduced him to senior politician and requested to fulfill his desire.

                I too felt that I did good job.  That is the  way  of fools to think so… ( Here I am that fool).

                Youngman grew by wing all methods,  got himself quite comfortable position.  His tongue became long and long.

                He has practiced to forget me, take a diseased person.  Sometimes he could not recognize me also.  Now I feel pity for myself.  I think I am the cause for his ill health.

                Now he is flying in sky like colourful kite.  I wish him all success in his future even without remembering   me . I wish him speedy recovery.

                But I am in confusion whether it is true or dream.

Thursday, August 30, 2012

ನಂಬಿ ಕೆಡೋಣ ಬನ್ನಿ


        ನಂಬಿ ಕಟ್ಟವರಿಲ್ಲ  ಎಂಬ ದಾಸರ ವಾಣಿ ವರ್ತಮಾನದಲ್ಲಿ ಹೇಗೆ ಮಾರಾಯರೇ ನಂಬುವುದು. ಏನನ್ನು,ಯಾರನ್ನು,ಯಾಕೆ ಎಂಬ ಪ್ರಶ್ನೆಗಳು ನಿತ್ಯ ಸುಳಿದಾಡುತ್ತಿರುವಾಗಲೇ ನಂಬುತ್ತಲೇ ಹೋಗುತ್ತೇವೆ.

          ಇದು ಯಾರೋ ನ್ನ ವಿಷಯಕ್ಕೆ ತುಂಬಾ ಎಡವಟ್ಟಾಗುತ್ತಲಿದೆ.  ನಾನಂತು ನಂಬಿ  ಕೆಡುತ್ತಲೇ  ಇದ್ದೇನೆ.  ನನ್ನ ಆಪ್ತರೊಬ್ಬರು ಪದೇ,  ಪದೇ  ಚುಡಾಯಿಸುತ್ತಾ ಇರುತ್ತಾರೆ.  ಮೊನ್ನೆ ಅವನನ್ನು ನಂಬಿ ಏನೋ ಮಾಡಿದ್ದಿರಲ್ಲ ಅವನು ಇನ್ನು ನಮಗೆ ‘ಗುನ್ನಾ’ ಇಟ್ಟಿಲ್ಲವಾ? ಎನ್ನುತ್ತಿರುವಾಗಲೇ ಅವರಿಂದ ಗುನ್ನಾ ಇಡಿಸಿಕೊಂಡಿರುವುದು ಹಳೆಯ ಮಾತಾಗಿರುತ್ತದೆ.

          ಯಾವುದೇ ವ್ಯವಸ್ಥೆಯಲ್ಲಿ ನಾವಿರಲಿ ಅಲ್ಲಿ ನಮ್ಮನ್ನು ನಂಬಿಸಿ ಮೋಸ ಮಾಡುವವರ ದಂಡೇ ಇರುತ್ತದೆ.  ಅವರು ಮೋಸ ಮಾಡಬಹುದು ಎಂಬ ಅನಗತ್ಯ ಗುಮಾನಿ ಇಟ್ಟುಕೊಡರೆ ಕೆಲಸ ಮಾಡುವುದಾದರೂ ಹೇಗೆ?   ಇದಕ್ಕೆ ಅಂತಿಮ ಉತ್ತರವಿರುವುದಿಲ್ಲ.  ಅನುಭವದಿಂದ  ಪಾಠ ಕಲಿಯಬೇಕು.  ಆದರೆ ಅಂತಹ ಕಹಿ ಎಷ್ಟು ಬಾರಿ ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ  ತಿನ್ನಬೇಕು ಎಂಬುದನ್ನು ನಾವು ನಿರ್ಧರಿಸಬೇಕು. 

          Once up on a time  ಎಂಬ ಪದ್ಯದಲ್ಲಿ ವಿವರಿಸಿದಂತೆ, glad to meet you  ಎಂದು ಪರಿಚಯವಾದವರು very bad ಆಗಿ ಚೆನ್ನಾಗಿ ಇರಿಯುತ್ತಾರೆ.     ಇದನ್ನು ಸಹಿಸಿಕೊಳ್ಳುವ ತಾಕತ್ತು ನಮಗಿದ್ದರೆ ಮೂರ್ಖರ ಹಾಗೆ ನಂಬಬೇಕು, ನಂಬಿ ಕಟ್ಟ ಮೇಲೆ ಹಾಕಿದ ಚೂರಿಯ ನೋವ ಸಹಿಸಬೇಕು.

          ಆತ್ಮಸಾಕ್ಷಿ, ಅಹಂಕಾರ, ಉದ್ವೇಗ, ವೈಯುಕ್ತಿಕ  ಅವಿವೇಕ ಈ ರೀತಿ ಅವಘಡಗಳಿಗೆ ಕಾರಣ ಎಂದು ಅಂದುಕೊಂಡು ನನ್ನನ್ನು ನಾನೇ ದೂಷಿಸಿಕೊಳ್ಳಲು ಆರಂಭಿಸಿ ಮೊದಲ ಪಾಠ ಕಲಿತಿದ್ದೇನೆ.

          ಕೇವಲ ವೈಯಕ್ತಿಕ ದೋಷಾರೋಪವು ಆತ್ನಹತ್ಯೆಯಾಗಬಾರದು ಎಂಬ ಪರಮ ಸತ್ಯವನ್ನು ಈಗೀಗ ನನ್ನ ನಿರ್ಲಿಪ್ತ ಸ್ವಭಾವದ ಗುರುಗಳಾದ ಡಾ: ಆರ್. ರಾಮಪ್ರಿಯಾ ಕಲಿಸುತ್ತಿದ್ದಾರೆ.  ಎರಡು ದಶಕಗಳ ಸಾಮಾಜಿಕ ಜೀವನ ಈ ಪಯಣದಲ್ಲಿ ಭೇಟಿಯಾದ ಸುಮಾರು ಜನ, ಕಳೆದು ಕೊಂಡ ಹಣ, ನಸುನಗುತ್ತಲೇ ಕೊಳ್ಳಿ ಇಟ್ಟವರು ನನ್ನನ್ನೊಮ್ಮೆ ಮೂರ್ಖನನ್ನಾಗಿಸಲು ಬಯಸಲಿಲ್ಲ.  ನನ್ನಷ್ಟಕ್ಕೆ ನಾನೇ ಮೂರ್ಖನಾದೆ.

          ಅವರು ನನಗೆ ತುಂಬಾ ಆತ್ಮೀಯರು, ತುಂಬಾ ಒಳ್ಳೆಯವರು ಎಂದು ಯಾರನ್ನಾದರೂ ಪರಿಚಯಿಸುವ ಮುನ್ನ, ಅದನ್ನು ಒಪ್ಪಿಕೊಳ್ಳವ ಮುನ್ನ ಸಾವಿರ ಬಾರಿ ಅಲೋಚಿಸಬೇಕು.

          ಅವರೇನು ನಮ್ಮನ್ನು ಗೆಳೆಯರು, ಆತ್ಮೀಯರು ಎಂದು ಘೋಷಿಸಿ ಕೊಂಡಿರುವುದಿಲ್ಲವಲ್ಲ.  ನಾವು ಅವರನ್ನು ಆತ್ಮೀಯರು ಅಂದುಕೊಂಡಂತೆ, ನಮ್ಮನ್ನು ಅವರು ಆತ್ಮೀಯರು ಎಂದು ಅಂದುಕೊಡಿರಬೇಕಲ್ಲ ಎಂಬ ಸಣ್ಣ  ಅಂತರದ ಅನುಮಾನ ನಮ್ಮಲ್ಲಿ ಮೂಡದ ಹೊರತು ಇದಕ್ಕೆ ಪರಿಹಾರವೆಂಬುದಿಲ್ಲ.

          ಬದುಕಿನ ಪಯಣ ಹತ್ತು – ಹಲವು ಅನುಭವಗಳನ್ನು ನೀಡಿ ಪಾಠ ಕಲಿಸುತ್ತದೆ.  ಹಾಗೆ ಹಾಗಂತ ಬರೀ ಪಾಠ ಕಲಿಯುತ್ತಾ ಪೆಟ್ಟು ತಿನ್ನುತ್ತಾ ಹೋಗುವುದರಲ್ಲಿ ನಮ್ಮ ಆಯುಷ್ಯವೇ ಮುಗಿದು ಹೋದರೆ? ಎಂಬ ಸಣ್ಣ ಎಚ್ಚರಿಕೆ ನಮ್ಮಲ್ಲಿರಲಿ ಎಂಬುದೇ ನನ್ನ ಅಂತಿಮ ನಿರ್ಣಯ.

          ಬಾಲ್ಯದಲ್ಲಿ ಕಾರಡಗಿಯಲ್ಲಿ, ಕಾಲೇಜು ದಿನಗಳಲ್ಲಿ ಧಾರವಾಡದಲ್ಲಿ ಉದ್ಯೋಗ ದಿನಗಳಲ್ಲಿ ಗದುಗಿನಲ್ಲಿ, ಈಗ ಬೆಂಗಳೂರಿನಲ್ಲಿ ನನಗೆ ಪರಿಚಯವಾದವರ ಸಂಖ್ಯೆ ಹತ್ತುಸಾವಿರ ಗಡಿಯನ್ನು ದಾಟಿರಬಹುದು.  ನನ್ನ ಮೊಬೈಲ್ ಫೋನ್ ಬುಕ್ ನಲ್ಲಿಯೇ ನಾಲ್ಕು ಸಾವಿರ ಜನರಿದ್ದಾರೆ.

          ಆದರೆ ಅದರಲ್ಲಿ ಎಷ್ಟು ಜನ ನನಗಾಗಿ ಮಾತನಾಡುತ್ತಾರೆ, ಅವರ ಕೆಲಸಕ್ಕಾಗಿ ಮಾಡುತ್ತಾರೆ ಎಂಬ ಕಟು ವಾಸ್ತವವನ್ನು ಅವಲೋಕಿಸಿದಾಗ ನೂರರ ಸಂಖ್ಯೆಯನ್ನು ನಾವು ತಲುಪುವುದಿಲ್ಲ. ಸಾಕಲ್ಲ ಇಷ್ಟು ಬದುಕಿನ ಪಯಣದ ಗೆಳೆಯರನ್ನು ಅಳೆದು ತೂಗಿ ಅರಿತುಕೊಳ್ಳಲು  ಇಷ್ಟೆಲ್ಲ ಸುಧೀರ್ಘ ಪಯಣದಲ್ಲಿ ಆತ್ಮೀಯರ ಪಟ್ಟಿ ಉಳಿಸಿಕೊಂಡವರ ಸಂಖ್ಯೆ ಹತ್ತನ್ನು ದಾಟುವುದಿಲ್ಲ.

          ಅದಕ್ಕೆ ನೀವು ನನ್ನಂತೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿರಿ ನನ್ನ ಹಾದಿ ನೀವು ತುಳಿಯದಿದ್ದರೆ ಮಾತ್ರ ನೀವು ಬುದ್ಧಿವಂತರು!.

Wednesday, August 29, 2012

Letters to Love


 

                It is an inevitable for me to express some of the real agony with you.

                We have many faces but always we try to hide them.  Why believed one face is un answering question.   But still we go on believing persons in a foolish way.

                That has happened with you.  No! It gives many meanings which I don’t want to understand.  If I try to understand your all faces, it goes to false attempt. Knowingly all your difficult faces I have to accept your lovely face, which appears So…..

                 Man has  that capacity to hide his real face,  when it applies to me,  why can’t it with you.?

                 I always try to echo the words of my favorite poet William Shakespeare “…….it signifies nothing full of sound and fury, sound and fury.     Everything sounds strongly but I  pretend nothing is heard and nothing is seen.

                 Once again I say  you that you also believe that I know nothing.  

Tuesday, August 28, 2012

ಕುಸಿದು ಬಿದ್ದ ಅಣ್ಣಾಕೋಟೆ



 2008 ರ ಡಿಸೆಂಬರ್ನಲ್ಲಿ ತುಂಬಾ ಉತ್ಸಾಹದಿಂದ ರಾಳೆಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅವರನ್ನು ಭೇಟಿ ಆಗಿ ಸುಧೀರ್ಘವಾಗಿ ಚರ್ಚಿಸಿದ್ದೆ. 2004ರಲ್ಲಿ ದೆಹಲಿಯಲ್ಲಿ ನಡೆದ ಗ್ರಾಮೀಣಾಭಿ ವೃಧ್ದಿ ಎ ಜಿ ಓ ಗಳ ಮಾವೇಶದಲ್ಲಿಅವರನ್ನು ಹತ್ತಿರದಿಂದ ನೋಡಿದ್ದೆ. ಅವರ ಭೇಟಿಯ ಕ್ಷಣಗಳಲ್ಲಿ ಅವರಲ್ಲಿದ್ದ ಆತ್ಮವಿಶ್ವಾಸ

ಅಂತ:ಸತ್ವವನ್ನು ಕಂಡು ಬೆರಗಾಗಿದ್ದೆ. ಇವರು ನಿಜವಾದ ಗಾಂಧಿವಾದಿ ಎಂಬ ನಂಬಿಕೆ ಅಚಲವಾಗಿತ್ತು. ಕಾಲನಂತರದಲ್ಲಿ 2011ರಲ್ಲಿ ದೇಶದಲ್ಲಿ ' ಅಣ್ಣಾ' ಮೆನಿಯಾ ಕಂಡಾಗ ಅತ್ಯಂತ ಹೆಮ್ಮೆ ಎನಿಸಿತು. ಸ್ವಾತಂತ್ರ್ಯ ಚಳುವಳಿಯ ನಂತರ ದೇಶ ಕಂಡ ಅತ್ಯಂತ ಯಶಸ್ವಿಯ 'ಲೋಕಪಾಲ ಮಸೂದೆ' ಜಾರಿ ಹೋರಾಟದಲ್ಲಿ ಭಾಗವಹಿಸಿದವರ ಆತ್ಮ ವಿಶ್ವಾಸ ಹೆಚ್ಚಿಸಿದೆ ಎಂಬ ಹೆಗ್ಗಳಿಕೆ 'ಅಣ್ಣಾ' ಅವರದು.
ಗಾಂಧಿಜಿಯವರ ಜಯಪ್ರಕಾಶ ನಾರಾಯಣರ ಹಾಗೆ 'ಅಣ್ಣಾ' ನಿಜವಾಗಲೂ ಅಪ್ಪಟ ಚಿನ್ನವೇ ಸರಿ. ಆದರೆ ಅಣ್ಣಾ ಸುತ್ತಲೂ ಇದ್ದವರ ಇತಿಹಾಸ, ವರ್ತಮಾನದ ಉದ್ದೇಶಗಳು ಸರಿ ಇರಲಿಲ್ಲ, ಎಂಬ ಸತ್ಯ 'ಅಣ್ಣಾ'ರ ಮುಗ್ಧತೆಗೆ ಅರಿವಾಗಲಿಲ್ಲ. 


ಅಣ್ಣಾ ಹಜಾರೆ ಗಾಂಧೀಜಿಯವರ ಹಾಗೆ , ಜೆ.ಪಿ.ಯವರ ಹಾಗೆ ಉನ್ನತ ಪದವಿಗಳನ್ನು, ಜಾಣತನವನ್ನು ದಕ್ಕಿಸಿಕೊಳ್ಳದ ಅಮಾಯಕರು. ಅವರ ಮಾಯಕತೆ, ಸಾಮರ್ಥ್ಯವನ್ನು ಬಳಸಿಕೊಂಡು 'ಹೀರೋ' ಗಳಾಗಲು ಹೋರಾಡಿದವರ ಮುಖವಾಡಗಳು ಬಹು ಬೇಗ ಕಳಚಿ ಬಿದ್ದವು.
ಹೋರಾಟದ ಇತಿಹಾಸಕ್ಕಿಂತ ತಮ್ಮ , ತಮ್ಮ ಕ್ಷೇತ್ರಗಳಲ್ಲಿ ಅಪಾರ ಖ್ಯಾತಿ, ಸಂಪತ್ತು ಗಳಿಸಿದ ಮಹನೀಯರುಗಳು. ಇವರು ಯಾರೂ 'ಅಣ್ಣಾ' ಸಮಾನ ನಿಲ್ಲುವ ಯೋಗ್ಯತೆ ಇದ್ದವರಲ್ಲ ಎಂಬುದು ಅಷ್ಟೇ ಸತ್ಯ.
Nature Justice ಗೆ ಬಹು ದೊಡ್ಡ ಶಕ್ತಿ ಇದೆ. ಅದನ್ನೆ ಕಾವ್ಯ ಭಾಷೆಯಲ್ಲಿ poetic justice ಎಂದು ಕರೆಯುತ್ತಾರೆ. ಪ್ರಕೃತಿ 'ಅಣ್ಣಾ' ಹಿಂಬಾಲಕರ ಬಂಡವಾಳವನ್ನು ಬೇಗನೇ ಬಯಲಿಗೆಳೆಯಿತು. ಹೋರಾಟದ ಮೂಲಕ ಈ ದೇಶಕ್ಕೆ ನ್ಯಾಯ ಒದಗಿಸಬೇಕು ಎಂಬುದಕ್ಕಿಂತ ಕಾಂಗ್ರೆಸ್ಗೆ, ಸಂಸತ್ತಿಗೆ ಸವಾಲು ಹಾಕುವ ಕೆಲಸದಲ್ಲಿ 'ಅಣ್ಣಾ' ಅನುಯಾಯಿಗಳು ನಿರತರಾದರು.
ಅವರ ಒಳಗಣ ಕಿಚ್ಚು ಬೇರೆಯೇ ಆಗಿತ್ತು ರಾಜಕಾರಣದ ನಂಜನ್ನು ನುಂಗಿ ಸಾರ್ವಜನಿಕ ಹೋರಾಟಕ್ಕಿಳಿದರೆ ಆಗುವುದು ಬೇರೆಯೇ. ಎಲ್ಲಾ ಹೋರಾಟಗಳು, ಹೋರಾಟಗಾರರು ಕೇವಲ ಹೋರಾಟಗಳಾಗಿರಲಿ ಎಂದು ಜನ ಬಯಸುತ್ತಾರೆ. ಅದೊಂದು ರೀತಿಯ ಸಾತ್ವಿಕ ವಿರೋಧ ಪಕ್ಷವಿದ್ದಂತೆ. ಹಾಗೆ ಇರಲಿ ಕೂಡಾ ಎಂಬುದು ಸಾರ್ವತ್ರಿಕ ಅಭಿಪ್ರಾಯವಿರುತ್ತದೆ.

ಆದರೆ ಅಣ್ಣಾ ತಂಡದ ನತಂತರ ಏಕಪಕ್ಷೀಯ ದಾಳಿ ಅವರ ತಾಳಕ್ಕೆ ತಕ್ಕಂತೆ ಕುಣಿದ ಕೇಸರಿ ಪಡೆ ಹತ್ತಾರು ಅನುಮಾನಗಳಿಗೆ ಕಾರಣವಾದವು . ರಾಜಕೀಯ ಪಕ್ಷ ಕಟ್ಟುವ ಇರಾದೆಯಿಂದಾಗಿ ಅಣ್ಣಾ ಮಂಕಾದರು. ಇತಿಹಾಸ ಪುರುಷರಾಗಬೇಕಾಗಿದ್ದ ಅಣ್ಣಾ ವರ್ತಮಾನಕಲ್ಲಿಯೇ ಕರಗಿ ಹೋಗುವಂತಾಗಿರುವುದು ವಿಷಾದನೀಯ.
ಮುಂದಿನ ಹೋರಾಟಗಳು ರಾಜಕೀಯ ರಹಿತವಿದ್ದರೆ
hidden ogendaಇರದಿದ್ದರೆ ಜನ ನಮ್ಮೊಂದಿಗೆ ಇರುತ್ತಾರೆ ಎಂಬ ಸತ್ಯವನ್ನು 'ಅಣ್ಣಾ' ಹೋರಾಟದ ಅಂತ್ಯ ಸಾಬೀತುಪಡಿಸಿದೆ.

Sunday, August 26, 2012

ಜಾತಿ ವ್ಯವಸ್ಥೆಯ ಸಾರ್ವತ್ರೀಕರಣದ ಅಪಾಯ


       ಇತ್ತೀಚಿನ ದಿನಗಳಲ್ಲಿ ಸಂವಿಧಾನಕ್ಕೆ ಅಪಚಾರವೆನಿಸುವ ರೀತಿಯಲ್ಲಿ ಜಾತಿಯ ವಿಚಾರಗಳು ಬಹಿರಂಗವಾಗಿ ಚರ್ಚೆಯಾಗುತ್ತಲಿವೆ.

       ಾತಿಗೊಂದರಂತೆ ಹುಟ್ಟಿಕೊಂಡಿರುವ ಮಠಗಳು, ರಾಜಕಾರಣಿಗಳು ಬಯಸುತ್ತಿರುವ ಮತಗಳು ಸ್ಥಿತಿಗೆ ಕಾರಣವೇನೋ? ಎಂಬ ಅನುಮಾನ ಶುರುವಾಗಿದೆ. ಇದು ಯಾರಿಂದ ಪ್ರಾರಂಭವಾಯಿತು.  ಯಾಕೆಪ್ರಾರಂಭವಾಯಿತು ಎಂಬುದಕ್ಕಿಂತ ಇದರ ಅವಶ್ಯಕತೆ ಇದೆಯಾ? ಎಂಬ ಚಿಂತನೆ ನಡೆಯಬೇಕಿದೆ.

       12ನೇ ಶತಮಾನದ ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವೆಂಬ ಮೊದಲ ಪಾರ್ಲಿಮೆಂಟಿನ ಮೂಲಕ ಜಾತಿ ವ್ಯವಸ್ಥೆಯನ್ನು ಅಳಿಸಿ ಹಾಕುವ ಮೊದಲ ಯಶಸ್ವಿ ಪ್ರಯತ್ನ ನಡೆಯಿತು.

       ನಂತರ 20ನೇ ಶತಮಾನದಲ್ಲಿ ಸ್ಥಾಪಿತವಾದ ಭಾರತದ ಪಾರ್ಲಿಮೆಂಟಿನ ಡಾ: ಅಂಬೇಡ್ಕರ್ ರವರು ರಚಿಸಿದ ಸಂವಿಧಾನವೂ ಜಾತಿ ವ್ಯವಸ್ಥೆಯನ್ನು ಅಳಿಸಿ ಹಾಕಲು ಸೂಚಿಸಿತು.

       ಹೀಗೆ ಎರಡು ಸಂಸತ್ತುಗಳ ವಿಚಾರಧಾರೆಗಳನ್ನು ಮೆಲುಕು ಹಾಕುತ್ತಾ, ಸಂದರ್ಭ ಬಂದಾಗ ಭಾಷಣ ಮಾಡುತ್ತಾ ಜಾತಿ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುತ್ತಾ ಸಾಗಿರುವುದು ಎಂತಹ ವಿಪರ್ಯಾಸ.

       ಆಧುನಿಕತೆ, ಜಾಗತೀಕರಣ, ಶಿಕ್ಷಣ ವ್ಯವಸ್ಥೆ, ಮಾಹಿತಿ ತಂತ್ರಜ್ಞಾನದ ಪ್ರತಿಫಲ ಜಾತಿ ವ್ಯವಸ್ಥೆಯನ್ನು ನಾಶಪಡಿಸುತ್ತೆ ಎಂಬ ಭಾವನೆ ಬಿಸಿರಕ್ತದ ಯುವಕರಲ್ಲಿದೆ.  ಆದರೆ ಮತ್ತೊಂದೆಡೆ ಪ್ರತಿಷ್ಠಿತ ವ್ಯವಸ್ಥೆಯಾಗಿರುವ ರಾಜಕಾರಣ ಜಾತಿ ದುರ್ಬಳಿಕೆ ಆರಂಭಿಸಿದೆ.
       ಅಳಿಸಿ ಹಾಕುವ - ಪುನರ್ ಸ್ಥಾಪಿಸುವ ಹಗ್ಗ - ಜಗ್ಗಾಟ ನಿರಂತರವಾಗಿ ನಡೆದಿದೆ.  ಒಂದು ಕ್ಷಣ ನಮ್ಮ ಮನ:ಸಾಕ್ಷಿಗೆ ಅನುಗುಣವಾಗಿ ಆಲೋಚಿಸಿದಾಗ ಜಾತಿ ವ್ಯವಸ್ಥೆ ಅಳಿಸಿ ಹೋಗಲಿ ಅನಿಸಲೇಬೇಕಲ್ಲ.

Saturday, August 25, 2012

Don't Miss Me


Your meeting was quite unexpected. You came, you saw and you conquered.

It always happens so………, but what to do? It is the fun and beauty of life.

Things went on quickly like a motion picture on movie screen. That went in a different way. You took name of God, that is too Baba, then faith was with me.

We breathe regularly without thinking about it. Passion is also like breathing it never waits for our permission.  Very few personal visits brought us closer and closer knowingly entered in to heart, soul and body also.

I was lost with you.

Now trying find you out and in, somewhat…… difficult to get you for some of your personal reasons.

You were running to me like deer, but your steps are reserved. Your visit become rare, but hoping for your old, quick appearance like a jumping deer – dear.

ನಿಲ್ಲದ ಉಸಿರಾಟವೆಂಬ ಬರಹ


ಬರಹ ನಿಂತಾಗ ಉಸಿರು ನಿಂತ ಅನುಭವ. ಬದುಕಿನಲ್ಲಿ ಏನೇನೋ ಪಲ್ಲಟಗಳು. ಬೆಂಗಳೂರು ವಿಶ್ವವಿದ್ಯಾಲಯ ಸೇರಿದಾಗ ಸಂಭ್ರಮ ಇತ್ತು. ನಿಯೋಜನೆ ಅನುಮತಿಗಾಗಿ ಅನುಭವಿಸಿದ ಯಾತನೆ ದಾಖಲಿಸಲು ಹಿಂಸೆ ಎನಿಸುತ್ತದೆ. ಕಷ್ಟ ಪಟ್ಟು ವಿ.ವಿ.ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಆರಂಭಿಸಿದ್ದು ಆಯಿತು............................

ಈಗ ಮತ್ತೊಂದು ಹೊಸ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಈ ಹೊಸ ಜವಾಬ್ದಾರಿ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಒಂದು ರೀತಿಯ ಹೆರಿಗೆ ನೋವು.. ಅನುಭವಿಸುವುದರಲ್ಲಿಯೂ ಥ್ರಿಲ್ ಇದೆ.
ಏನೇ ಇರಲಿ ಇನ್ನು ಮಂದೆ ಲೇಖನಿ ಹಿಡಿದು ಇಲ್ಲಿ ಹಾಜರಾಗುತ್ತೇನೆ. ಈ ಅಂತರದಲ್ಲಿ ಅನೇಕ ಮಹತ್ತರ ಸಂಗತಿಗಳು ಘಟಿಸಿವೆ. ಯಾವ ಮುಲಾಜಿಲ್ಲದೆ ಹೇಳಿಕೊಳ್ಳುವ ಮುಕ್ತ ವಾತಾವರಣ ಈ ಬ್ಲಾಗ್ ದುನಿಯಾದಲ್ಲಿದೆ.
ಉಸಿರಾಟ ಕ್ರಿಯೆಯಂತೆ ಬರಹ ನಿಲ್ಲುವುದಿಲ್ಲ. ನಿಲ್ಲಬಾರದು ಕೂಡಾ!.