Tuesday, February 23, 2010


CURRICULAM VITAE


Prof. Siddu. B. Yapalaparvi
Department of English,
Sangatya Prakashana,
Kalasapur Road,
GADAG – 582103
Cell No: 9448358040
siddu.yapalaparvi@rediffmail.com,
siddu.yapal@gmail.com


To be in the world of hegemony of cultural and social life I desire to have a paradigm shift from teacher to a master trainer with nobility of thought and knowledge of current context that would enable me to serve my institution and world with true sense of dedication and benevolence by imbibing the splendid soft skills adopting modern compu-tech facilities to poster and nourish the future generation. Building a bridge between rural and urban areas by narrowing the gap of cultural sensitivity and making them the excellent human beings is of prime importance being blessed by His Holiness Dr. Siddhalingaswamiji, the sober saint of Kannada and the great poet Dr. Siddhalinga Pattanashetti whose nourishment is often cherished with reverences and the lovely blessings of my father Shri. Basavarajappa and benign mother Smt. Parvatamma.

Born:
On 12-04-1965 at Karatagi, Koppal District, Karnataka State, India.
Education:
Ph. D. (Registered under Dr. M. M. Kalaburgi) 2006
M. B. A. (Human Resource Management) 2006
M. A. (English Literature) 1989
Profession:
Lecturer in English, K. V. S. R. P. U. College, Gadag- Teaching English with fun to the rural and Kannada Medium students in simple and fluent language
Guest Faculty, P. G. Department of English, K. S. S. College, Gadag
Literary Works:
Nelada Mareya Nidhana – a collection of poems in Kannada (2007) language which has created euphoria among the readers through out the state.
Naanonda Kanasa Kande – a collection of poems in Kannada (2009) language with the heart and soul of feminine perspective.
“Ettana Mamara Ettana Kogile”, Travelogue on England in Kannada (2009), Sangatya Publication, Gadag.

World on Tour:
Having firm belief in the maxim, “Trail the nation or read the Book” I have set my prints in religious, educational and social organizations by establishing rapport trough conferences and discussions in Andra Pradesh, Tamil Nadu, West Bengal, Delhi, Himachal Pradesh, Haryana, Maharashtra and Uttaranchal states of India.

Recently I visited England during summer 2008 and paid visit to the monuemental centres and houses of Shakespeare and Dove Cottage of William Wordsworth. I have the first hand knowledge of places and public affairs. I am happy to state that I have been writing a travelogue “Ettana Mamara Ettana Kogile” in Kannada which is published in the form of serial in Vikrant, a well known periodical in Kannada literature today edited genius thinker, orator and writer Prof. Ravindra Reshme.

Public Lectures:
Delivered thousands together public speeches on Vachana Literature in Kannada and English with great ideologies those have shaped many lives across the country.
Personality Development Programmes:
Conducted many PDPs for four to six hours at a stretch with light homour to students and officers of Government and NGOs to promote their potentialities to improve the work culture It has been extended to College Teachers, Counselling Centres and Corporate World.
To Ink to Think:
‘A poem a week, a story a month and a critical article a fort-night’ – this practice has kept me cheerful contributing to all forms of literature.
Articles on Politics:
Contributed many articles on present day political dogmas to the journals and papers and served as an Advisor to Editor of Vikrant Karnataka by reporting and supporting with interviews and recent burning issues.
Editor:
Edited felicitation Books viz.,
“Manohar”, the life and achievements of the great artist shri Manohar. Kadlikoppa
“Stri Sahitya Sourabha” – a souvenir of Lakkundi Festival
“Sadhaka”- the life and achievements of an educationist Shri. S. N. Kataraki
Stage Play:
Enacted various roles in plays with great vigour organized by Amateur Artists Groups

Educational Advisor:
Being on the Board of Advisors of various educational institutions like Jagdguru Shivanand P. U. College of Science, Gadag, Shantiniketan Shikshana Samsthe, Gadag and Sadhana Mahila Shikshana Seva Samsthe, Gadag, strived hard to bring in an excellent quality among all stakeholders.
Founder of Various Associations:
Samarasa Balaga – a cultural organistion
Creative school of Communication Management – Training Centre for PDPs.
Rangadarshana Kala Tanda- Centre for Stage Activities.
Kind Pariwar – NGO
Shantiniketan Shikshana Samsthe – Centre for Ideal Primary Education
Sadhana Mahila Shikshana Seva Samsthe – NGO for Women and Child Empowerment.
Sangatya Publication, Gadag
Governing Council Member:
Served as member of Governing Council of Kannada University, Hampi from 1999 to 2002
National Award:
Conferred National Award and Silver Medal for extending Excellent Training as an Additional Charge Officer at Division of Census Survey
Goal and Objective:
Life is not the stagnant water. Constant Study, Crystal Clear Behaviour, Positive Attitude and Dedicated Service are the keys to my successful life keeping abreast with Steadiness of Good Earth and sacrificing rewards to sacred souls and regretting follies to my own.

ಸಾವðಜನಿಕ ಸಭ್ಯತೆ------ ಯಾಕೆ ಹೀಗೆ?
ಸಾವðಜನಿಕ ಬದುಕಿನಲ್ಲಿ ಕೆಲಸ ಮಾಡುವುದು ಇತ್ತೀಚಿಗೆ ಯಾಕೋ ತುಂಬಾ ಕಿರಿಕಿರಿಯೆನಿಸುತ್ತಿದೆ. ವೈಯಕ್ತಿಕ ಪರಿಶ್ರಮದಿಂದ ಏನನ್ನಾದರೂ ಸಾಧಿಸುತ್ತೇವೆ. ಅದೇ ಕಾರಣದಿಂದಾಗಿ ಮಾನ್ಯತೆಯೂ ದೊರಕಿರುತ್ತದೆ.
ದೊರಕಿರುವ ಮಾನ್ಯತೆಯನ್ನು ಅನುಭವಿಸಲು ಕೆಲವರು ಅನಗತ್ಯ ಅಡೆತಡೆ ಒಡ್ಡಲು ಪ್ರಯತ್ನಿಸುತ್ತಾರೆ. ಇಂದು ಕ.ಸಾ.ಪ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಪರಿಷತ್ತಿನ ಸ್ವಾಗತ ಸಮಿತಿಯ ಸಂಯೋಜಕನಾಗಿ ಪಾಲ್ಗೊಂಡು ಕೆಲ ಸೂಚನೆಗಳನ್ನು ನಿವೇದಿಸಿಕೊಂಡೆ. ಸಮ್ಮೇಳನದ ಯಶಸ್ಸಿಗಾಗಿ ಅದು ಅನಿವಾರ್ಯವೂ ಆಗಿತ್ತು.
ಆದರೆ ನನ್ನ ವೃತ್ತಿ ಬಾಂಧವರೊಬ್ಬರಿಗೆ ನಾನು ವೇದಿಕೆಯ ಮೇಲೆ ಕುಳಿತು, ಅಧಿಕಾರಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದು ಇರಿಟೇಟ್ ಆಯಿತು. ಅವನು ನಮ್ಮ ಹಾಗೆ ಉಪನ್ಯಾಸಕ ಅವನನ್ನೇಕೆ ವೇದಿಕೆ ಮೇಲೆ ಕೂಡಿಸಿದ್ದೀರಿ ಎಂದು ರಾಗ ತೆಗೆದ. ನಮ್ಮವರ ಸಣ್ಣತನಕ್ಕೆ ಹಿರಿಯ ಅಧಿಕಾರಿಗಳಿಗೆ ಅಚ್ಚರಿ. ಅವರು ಯಾವುದೇ ಪ್ರತಿಕ್ರೀಯೆ ನೀಡಲಿಲ್ಲ. ಹಾಗೇ ನಾನು ಕೂಡಾ. ಯಾಕೆಂದರೆ ಅದರ ಅಗತ್ಯ ಕಂಡು ಬರಲಿಲ್ಲ.
ನಾನು ಬರಹಗಾರನಾಗಿರುವ ಕಾರಣಕ್ಕೆ, ಪರಿಷತ್ತಿನ ಪದಾಧಿಕಾರಿಯೂ ಅಲ್ಲಿದ್ದೇನೆ, ಆ ಕ್ಷಣ ನನ್ನನ್ನು ಕೇವಲ ವೃತ್ತಿ ಬಾಂಧವನನ್ನಾಗಿ ನೋಡಬಾರದು ಎನ್ನುವ ಪರಿಜ್ಞಾನ ಇಲ್ಲದವರೊಂದಿಗೆ ಏನು ಮಾತು ಎನ್ನಿಸಿ ನಕ್ಕು ಸುಮ್ಮನಾದೆ. ಆದರೆ ಒಳ ಒಳಗೆ ನನಗೆ ಕಿರಿಕಿರಿ ಎನಿಸಿತು.
ನನ್ನ ಈ ಬೆಸರವನ್ನು ಮನದ ಮಾತಿನೊಂದಿಗೆ ಹಂಚಿಕೊಂಡು ಹಗುರಾಗೋಣವೆನಿಸಿತು. ವೃತ್ತಿ ಮತ್ಸರದ ಬಗ್ಗೆ ಕೇಳಿದ್ದೆ. ಈಗೀಗ ಅನುಭವಿಸುತ್ತಿದ್ದೇನೆ.
ಹಾಗಂತ ನಾನು ಸುಮ್ಮನಿರಲು ಸಾಧ್ಯವೇ? ಯಾರೋ ಹೊಟ್ಟೆ ಉರಿದುಕೊಂಡು ಉರುಳಾಡುತ್ತಾರೆ ಅನ್ನೋ ಹೀನ ಕಾರಣಕ್ಕೆ ನಾನೇಕೆ ಅವಕಾಶ ಕಳೆದುಕೊಳ್ಳಲಿ? ಎಂಬ ಪ್ರಶ್ನೆಗಳು ಏಳಲಾರಂಭಿಸಿವೆ. ಅದಕ್ಕೆ ಅಲ್ಲವೆ ನಮ್ಮ ಹಿರಿಯರು ನಿಂದಕರಿರಬೇಕು------- ನಂತೆ ಅಂದದ್ದು. ಆನೆ ನಡೆದದ್ದೇ ದಾರಿ ಅಂದುಕೊಂಡು, ಬೊಗಳುವ ನಾಯಿಗಳಿಗೆ ಹಚಾ ಎನ್ನದೇ ಹೋಗುವ ಅನಿವಾರ್ಯತೆ ಈಗ ನನ್ನ ಪಾಲಿಗೆ ಒದಗಿದೆ. ಅಂದ ಹಾಗೆ ನನ್ನ ಈ ಅಭಿಪ್ರಾಯ ಹಾಗೂ ಆತಂಕಕ್ಕೆ ನಿಮ್ಮ ಸಲಹೆಯಿದ್ದರೆ ದಯವಿಟ್ಟು ರವಾನಿಸಿರಿ. ಮನಸ್ಸು ಹಗುರಾಗುತ್ತದೆ.

Wednesday, February 17, 2010

ಸಮ್ಮೇಳನಕ್ಕೆ ಕ್ಷಣಗಣನೆ..............
76ನೆಯ ಅಖಿಲಭಾರತ ಸಮ್ಮೇಳನ ಇನ್ನೇನು ಬಂದೇ ಬಿಟ್ಟಿತು. ಗಣ್ಯ ಮಹನೀಯರ ಹಾಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳ ವಸತಿ ವ್ಯವಸ್ಥೆಗಾಗಿ ಶ್ರಮಿಸುವಾಗ ಒಂದು ತರಹ ಖುಷಿ, ಆತಂಕ ಎರೆಡೂ ಆಯಿತು. ಇಪ್ಪತ್ತು ಸಾವಿರ ಜನ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಸ್ವಾಗತ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತದ ಅಧಿಕಾರಿಗಳ ನೆರವಿನಿಂದ ರೂಪಿಸಲಾಗಿದೆ.
ಗದುಗಿನಂತಹ ಸಣ್ಣ ಪಟ್ಟಣದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದು ಸುಲಭದ ಮಾತಲ್ಲ. ಆದರೂ ನಗರದ ಎಲ್ಲ ವಸತಿ ನಿಲಯಗಳಲ್ಲಿ, ಖಾಸಗಿ ಹಾಗೂ ಸರಕಾರಿ ಹಾಸ್ಟೆಲಗಳಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.
ಗಣ್ಯ ಮಹನೀಯರ ವಸತಿಗಾಗಿ ಗದಗ, ಹುಬ್ಬಳ್ಳಿ ಹಾಗೂ ಅಕ್ಕ ಪಕ್ಕದ ಊರುಗಳಲ್ಲಿನ ವಸತಿ ನಿಲಯಗಳನ್ನು ತಗೆದುಕೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಶಿಕ್ಷಕರು ಲೈಸನಿಂಗ್ ಅಧಿಕಾರಿಗಳಾಗಿ ಕತðವ್ಯ ನಿವðಹಿಸಲು, ಆತಿಥ್ಯ ನೀಡಲು ಮುಂದಾಗಿದ್ದಾರೆ.
ಸರಳ ಊಟದ ವ್ಯವಸ್ಥೆಯೂ ಆಗಿದೆ. ಮೂರು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಕನ್ನಡಿಗರ ಸೇವೆಗಾಗಿ ಸಜ್ಜಾಗಿದ್ದಾರೆ. ಶಾಂತಪ್ರಿಯ ಕನ್ನಡಿಗರು ಸಹನೆ ಪ್ರೀತಿಯಿಂದ ಆತಿಥ್ಯ ಸ್ವೀಕರಿಸಿ ನಮ್ಮನ್ನು ಖುಷಿಗೊಳಿಸಿರಿ ಎಂದು ವಿನಂತಿಸಿಕೊಳ್ಳುವೆ.
ಸಮ್ಮೇಳನ ನಿಜವಾದ ಅಥðದಲ್ಲಿ 'ಜಾತ್ರೆ'ಯೇ ಆಗಿದೆ. ತಾಂತ್ರಿಕ ಯುಗದಲ್ಲಿ ನಾವು ಪರಸ್ಪರ ಹೆಚ್ಚು ಹತ್ತಿರವಾದಂತೆ ಅನಿಸಿದರೂ ದೈಹಿಕವಾಗಿ ದೂರಾ.......ಗುತ್ತಲಿದ್ದೇವೆ. ಅಕ್ಷರ ಪ್ರೇಮಿಗಳನ್ನು ಒಂದುಗೂಡಿಸುವ ಸಮ್ಮೇಳನದಲ್ಲಿ ಆಗುವ ಸಣ್ಣ ಪುಟ್ಟ ಅನಾನುಕೂಲತೆಗಳನ್ನು ಲೆಕ್ಕಿಸದೆ, ನಮ್ಮ ಅಹಂ ಮರೆತು ಸಂತೋಷದಿಂದ ಕಾಲ ಕಳೆಯೋಣ.
ಪರಮಪೂಜ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶಿವðಚನ ನೀಡುವುದು ಈ ಬಾರಿ ಸಮ್ಮೇಳನದ ವಿಶೇಷ! ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಭಾಷಣದ 'ಖಡಕ್'ನ್ನು ಸವಿಯಲೆಂದೇ ಅನೇಕ ಕನ್ನಡಾಭಿಮಾನಿಗಳು ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಮ್ಮ ಭೇಟಿ ಕೇವಲ ಈ ಮೂಲಕವೇ ಆಗಬೆಕು. ನಾಳೆಯಿಂದ ಖಂಡಿತಾ ಸೆಲ್ ನೆಟವಕðಸಿಗಲು ಸಾಧ್ಯವೇ ಇಲ್ಲ.
ಸಮ್ಮೇಳನಕ್ಕೆ ಕ್ಷಣಗಣನೆ..............
76ನೆಯ ಅಖಿಲಭಾರತ ಸಮ್ಮೇಳನ ಇನ್ನೇನು ಬಂದೇ ಬಿಟ್ಟಿತು. ಗಣ್ಯ ಮಹನೀಯರ ಹಾಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳ ವಸತಿ ವ್ಯವಸ್ಥೆಗಾಗಿ ಶ್ರಮಿಸುವಾಗ ಒಂದು ತರಹ ಖುಷಿ, ಆತಂಕ ಎರೆಡೂ ಆಯಿತು. ಇಪ್ಪತ್ತು ಸಾವಿರ ಜನ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಸ್ವಾಗತ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತದ ಅಧಿಕಾರಿಗಳ ನೆರವಿನಿಂದ ರೂಪಿಸಲಾಗಿದೆ.
ಗದುಗಿನಂತಹ ಸಣ್ಣ ಪಟ್ಟಣದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವುದು ಸುಲಭದ ಮಾತಲ್ಲ. ಆದರೂ ನಗರದ ಎಲ್ಲ ವಸತಿ ನಿಲಯಗಳಲ್ಲಿ, ಖಾಸಗಿ ಹಾಗೂ ಸರಕಾರಿ ಹಾಸ್ಟೆಲಗಳಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.
ಗಣ್ಯ ಮಹನೀಯರ ವಸತಿಗಾಗಿ ಗದಗ, ಹುಬ್ಬಳ್ಳಿ ಹಾಗೂ ಅಕ್ಕ ಪಕ್ಕದ ಊರುಗಳಲ್ಲಿನ ವಸತಿ ನಿಲಯಗಳನ್ನು ತಗೆದುಕೊಳ್ಳಲಾಗಿದೆ. ಸಾವಿರಕ್ಕೂ ಹೆಚ್ಚು ಶಿಕ್ಷಕರು ಲೈಸನಿಂಗ್ ಅಧಿಕಾರಿಗಳಾಗಿ ಕತðವ್ಯ ನಿವðಹಿಸಲು, ಆತಿಥ್ಯ ನೀಡಲು ಮುಂದಾಗಿದ್ದಾರೆ.
ಸರಳ ಊಟದ ವ್ಯವಸ್ಥೆಯೂ ಆಗಿದೆ. ಮೂರು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಕನ್ನಡಿಗರ ಸೇವೆಗಾಗಿ ಸಜ್ಜಾಗಿದ್ದಾರೆ. ಶಾಂತಪ್ರಿಯ ಕನ್ನಡಿಗರು ಸಹನೆ ಪ್ರೀತಿಯಿಂದ ಆತಿಥ್ಯ ಸ್ವೀಕರಿಸಿ ನಮ್ಮನ್ನು ಖುಷಿಗೊಳಿಸಿರಿ ಎಂದು ವಿನಂತಿಸಿಕೊಳ್ಳುವೆ.
ಸಮ್ಮೇಳನ ನಿಜವಾದ ಅಥðದಲ್ಲಿ 'ಜಾತ್ರೆ'ಯೇ ಆಗಿದೆ. ತಾಂತ್ರಿಕ ಯುಗದಲ್ಲಿ ನಾವು ಪರಸ್ಪರ ಹೆಚ್ಚು ಹತ್ತಿರವಾದಂತೆ ಅನಿಸಿದರೂ ದೈಹಿಕವಾಗಿ ದೂರಾ.......ಗುತ್ತಲಿದ್ದೇವೆ. ಅಕ್ಷರ ಪ್ರೇಮಿಗಳನ್ನು ಒಂದುಗೂಡಿಸುವ ಸಮ್ಮೇಳನದಲ್ಲಿ ಆಗುವ ಸಣ್ಣ ಪುಟ್ಟ ಅನಾನುಕೂಲತೆಗಳನ್ನು ಲೆಕ್ಕಿಸದೆ, ನಮ್ಮ ಅಹಂ ಮರೆತು ಸಂತೋಷದಿಂದ ಕಾಲ ಕಳೆಯೋಣ.
ಪರಮಪೂಜ್ಯ ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶಿವðಚನ ನೀಡುವುದು ಈ ಬಾರಿ ಸಮ್ಮೇಳನದ ವಿಶೇಷ! ಕನ್ನಡದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಭಾಷಣದ 'ಖಡಕ್'ನ್ನು ಸವಿಯಲೆಂದೇ ಅನೇಕ ಕನ್ನಡಾಭಿಮಾನಿಗಳು ಆಗಮಿಸುತ್ತಿದ್ದಾರೆ. ಮೂರು ದಿನಗಳ ಕಾಲ ನಮ್ಮ ಭೇಟಿ ಕೇವಲ ಈ ಮೂಲಕವೇ ಆಗಬೆಕು. ನಾಳೆಯಿಂದ ಖಂಡಿತಾ ಸೆಲ್ ನೆಟವಕðಸಿಗಲು ಸಾಧ್ಯವೇ ಇಲ್ಲ.

Friday, February 12, 2010




ಜಗದ್ಗುರು ತೋಂಟದಾಯð ಮಠ - ಕನ್ನಡದ ಜಗದ್ಗುರುಗಳು
ಗದುಗಿನ ಜಗದ್ಗುರು ತೋಂಟದಾಯ ಮಠದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು 'ಕನ್ನಡದ ಜಗದ್ಗುರುಗಳು' ಎಂದೇ ಗೌರವಿಸಲ್ಪಟ್ಟಿದ್ದಾರೆ.
1974 ರಲ್ಲಿ ಗದುಗಿನ ತೋಂಟದಾಯðಮಠದ ಪೀಠಾಧ್ಯಕ್ಷರಾಗಿರುವ ಶ್ರೀಗಳದು ಸದಾ ಕನ್ನಡಪರ ನಿಲುವು. ಶ್ರೀಮಠದ ಪ್ರತಿ ಸೋಮವಾರದ ಶಿವಾನುಭವಗಳ ಮೂಲಕ ಕನ್ನಡದ ಕಂಪನ್ನು ಪಸರಿಸುತ್ತಾರೆ.
ಕನ್ನಡ ಸಾರಸ್ವತ ಲೋಕದ ದಿಗ್ಗಜರೆಲ್ಲ ತೋಂಟದಾಯð ಮಠದ ಶಿವಾನುಭವ ಕಾಯðಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ಅವರ ದಿವ್ಯ ಸಾನಿಧ್ಯದಲ್ಲಿ ಅಖಿಲಭಾರತ 76ನೇ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗುತ್ತಿರುವುದು ಅಭಿಮಾನದ ಸಂಗತಿ.
ಪರಮಪೂಜ್ಯ ತೋಂಡದಾಯð ಡಾ. ಸಿದ್ಧಲಿಂಗ ಸ್ವಾಮಿಗಳು. ತಮ್ಮ ಶ್ರೀಮಠದ ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಸಾವಿರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಗೋಕಾಕ ಚಳುವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಗೋಕಾಕ ಚಳುವಳಿಗೆ ಅಥðಪೂಣð ಚಾಲನೆ ನೀಡಿದರು.
ಇಡೀ ದೇಶದಾದ್ಯಂತ ಸಂಚರಿಸಿ ಪೂಜ್ಯರು ಹತ್ತು ಸಾವಿರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಶ್ರೀಗಳ ಅಸ್ಖಲಿತ ವಾಣಿ, ಪ್ರಖರ ವಿಚಾರಧಾರೆ, ಅದನ್ನು ಪ್ರತಿಪಾದಿಸುವ ಕ್ರಮ ಅನನ್ಯವಾದದು. ಶ್ರೀಗಳ ಭಾಷಣಕ್ಕೆ ಸಾವಿರಾರು ಜನರನ್ನು ಸೇರಿಸುವ ಚುಂಬಕ ಶಕ್ತಿ ಇದೆ.
ಅವರ ಎತ್ತರದ ನಿಲುವು, ಆಕಷðಕ ಕಂಚಿನ ಕಂಠ, ಪಾರದಷðಕ ಮನಸ್ಥಿತಿ, ಮಾತೃ ಹೃದಯ ಶ್ರೀಗಳನ್ನು ಸಾಮಾನ್ಯರ ಸ್ವಾಮಿಗಳೆಂದೇ ಗೌರವಿಸಿದೆ. ಶ್ರೀಗಳ ಪುಸ್ತಕ ಪ್ರೇಮ ಅನುರೂಪವಾದದು.
ಅಪ್ರಕಟಿತ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಾಮೀಣ ಗ್ರಂಥಮಾಲೆ, ನೂತನ ಸಾಹಿತ್ಯ ರತ್ನ, ಪುಣ್ಯಪುರುಷರ ಮಾಲಿಕೆ, ಅಭಿನಂದನಾ ಗ್ರಂಥ, ಹಾಗೂ ಮಹಾ ಪ್ರಬಂಧಗಳ ಮಾಲಿಕೆಯಲ್ಲಿ ಒಟ್ಟು 450 ಗ್ರಂಥಗಳನ್ನು ಪ್ರಕಟಿಸಿದ್ದಾರೆ.

Thursday, February 11, 2010

ಮನದ ಮಾತು

ಸಮ್ಮೆಳನಕ್ಕೆ ದಯವಿಟ್ಟು ಬನ್ನಿ
ಅಖಿಲಬಾರತ 76ನೆಯ ಸಾಹಿತ್ಯ ಸಮ್ಮೇಳನಕ್ಕೆ ಗದುಗು ತರಾತುರಿಯಲ್ಲಿಯೇ ಸಿದ್ಧವಾಗಿದೆ. ಸಮ್ಮೇಳನ ಗದುಗಿಗೆ ಬರುವುದರಲ್ಲಿ ನನ್ನ ಪಾತ್ರವು ಹಿರಿದು ಎಂಬ ಸಂಭ್ರಮ ನನ್ನದು.
ಅನೇಕ ಜಿಲ್ಲೆಯ ಅಧ್ಯಕ್ಷರು ರಾಜ್ಯಸಮಿತಿಯ ಮೇಲೆ ಒತ್ತಡ ತಂದಾಗ ಪ್ರೊ. ಚಂಪಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ಸ್ಥಳ ಪರಿಶೀಲನೆಗೆ ಬಂದಾಗ ಉತ್ಸಾಹದಿಂದ ಓಡಾಡಿ ಸಮಿತಿಯ ಸದಸ್ಯರ ಮನ ಒಲಿಸಲು ಶಾಸಕ ಶ್ರೀಶೈಲಪ್ಪ ಬಿದರೂರ, ಸ್ನೇಹಿತ ಡಾ. ಜಿ.ಬಿ. ಪಾಟೀಲ, ಜಿಲ್ಲಾ ಅಧ್ಯಕ್ಷ ಪ್ರೊ. ಎ.ಬಿ. ಹಿರೇಮಠ ಹಾಗೂ ಅನೇಕ ಸಂಗಾತಿಗಳನ್ನು ಪ್ರಯತ್ನಿಸಿ ನಂತರ ಯಶ ಸಿಕ್ಕಾಗ ಎಲ್ಲಿಲ್ಲದ ಖುಷಿ ಪಟ್ಟಿದ್ದೆ. ನಂತರ ಅನೇಕ ಕಾರಣಗಳಿಂದ ಸಮ್ಮೇಳನ ಮುಂದೆ ಹೊಯಿತು. ಅದರಲ್ಲಿ ನಮ್ಮ ಭಾಗಕ್ಕೆ ಶಾಪವಾಗಿ ಪರಿಣಮಿಸಿದ ನೆರೆಹಾವಳಿಯೂ ಕಾರಣ. ನಂತರದ ರಾಜಕೀಯ ನೆರೆ ಕೂಡಾ ಸಮ್ಮೇಳನವನ್ನು ಮಂಕಾಗಿಸಿತು.
ಅನೇಕಾನೇಕ ವೈಯಕ್ತಿಕ ಕಾರಣಗಳಿಂದ ನಾನು ಮಂಕಾಗಿ, ಸಮ್ಮೇಳನ ಆಚರಣೆಯ ಉತ್ಸಾಹ ಕಳೆದುಕೊಂಡೆ ಎಂಬುದು ಕಹಿಸತ್ಯವೆ.
ಮುಖ್ಯವಾಗಿ ರಾಜಕೀಯ ಕಾರಣದಿಂದಾಗಿಯೇ ಸಮ್ಮೇಳನ ರದ್ದಾಗುತ್ತೆ ಎಂಬ ಆತಂಕ ಈಗ ದೂರಾಗಿದೆ. ನಾನು ನನ್ನಲ್ಲಿ ಹುದುಗಿದ್ದ ನಿರಾಶೆಯ ಕಾರಣಗಳನ್ನು ತೊಡೆದುಹಾಕಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದೇನೆ. ಆರಂಭದಲ್ಲಿ ನಿರುತ್ಸಾಹ ತೊರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜನಾನುರಾಗಿ ಜನನಾಯಕ ಬಿ.ಶ್ರೀರಾಮುಲು ಈಗ ಉತ್ಸುಕರಾಗಿ ಸಮ್ಮೇಳನದ ಯಶಸ್ಸಿಗೆ ಸನ್ನದ್ಧರಾಗಿದ್ದಾರೆ. ಗದುಗಿನ ಶಾಸಕ ಶ್ರೀಶೈಲಪ್ಪ ಬಿದರೂರ ಸಾಂಸ್ಕ್ರತಿಕ ಲೋಕದ ಸಂಗಾತಿ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಹಗಲಿರುಳು ದುಡಿಯುತ್ತಿದ್ದಾರೆ. ಗದಗ ಜಿಲ್ಲಾಧಿಕಾರಿಗಳಾದ ಡಾ. ಪ್ರಸಾದ ಗೆಲುವಗಿದ್ದಾರೆ. ಬರಬೇಕಾದ ಹಣ ಬಂದಿದೆ. ಮುಂದೆಯೂ ಬರುತ್ತದೆ. ಅದೆಲ್ಲಾ ಅಂತರಂಗದ ಕಿರಿಕಿರಿ ಬಿಡಿ. ಎಲ್ಲ ವ್ಯವಸ್ಥೆಗಳು ಚುರುಕಾಗಿ ಸಾಗಿವೆ. ಸಣ್ಣ ಪುಟ್ಟ ತೊಂದರೆಗಳನ್ನು ಬಿಟ್ಟರೆ ಖಂಡಿತಾ ಸಮ್ಮೇಳನ ಯಶಸ್ವಿಯಾಗುತ್ತದೆ. ಯಶಸ್ಸಿನ ಬಗ್ಗೆ ಆಶಾವಾದಿಗಳಾಗಿರುವ ನಮ್ಮ ವಿಶ್ವಾಸ ಇಮ್ಮಡಿಗೊಳಿಸಲು ನೀವೆಲ್ಲಾ ಖಂಡಿತಾ ಬನ್ನಿರಿ. ನಮ್ಮ ಸಂಭ್ರಮದಲ್ಲಿ ಭಾಗವಹಿಸಿರಿ.

Friday, February 5, 2010

ಪ್ರೊ. ಸಿದ್ದು ಯಾಪಲಪರವಿ

ರಾಷ್ಟ್ರಪ್ರಶಸ್ತಿ ಪುರಸ್ಕೃತ ತರಬೇತುದಾರ

ಪ್ರೊ. ಸಿದ್ದು ಯಾಪಲಪರವಿ

ಕವಿ,ಬರಹಗಾರ,ವಿಮರ್ಶಕ,ವ್ಯಕ್ತಿತ್ವ ವಿಕಸನ ತರಬೇತುದಾರರು

ಕೊಪ್ಪಳ ಜಿಲ್ಲೆ ಕಾರಟಗಿ ಗ್ರಾಮದ ವ್ಯಾಪಾರಿ ಪರಿವಾರದಲ್ಲಿ ೧೨-೪-೧೯೬೫ ರಂದು ಜನನ. ಬಸವರಾಜಪ್ಪ ಹಾಗೂ ಪಾರಮ್ಮನವರ ಹಿರಿಯ ಪುತ್ರ. ಕಾರಟಗಿಯ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷಣ. ದಡ್ಡ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದರೂ ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳ ವಿಫಲತೆ ಹೆಚ್ಚಿನ ವ್ಯಾಸಂಗಕ್ಕೆ ಪ್ರೇರಣೆ. ಇಂಗ್ಲ್ಲಿಷ್ ಕಲಿಯಬೇಕೆಂಬ ಛಲ. ಪರಮಪೂಜ್ಯ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಹಾಗೂ ಖ್ಯಾತ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಂದ ಅಪರೂಪದ ಪ್ರೇರಣೆ-ಮಾರ್ಗದರ್ಶನ. ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಹಂತ ಹಂತವಾಗಿ ಯಶಸ್ಸು. ಕಳೆದ ಎರಡೂವರೆ ದಶಕಗಳ ಹೋರಾಟದ ಅನುಭವ ಅನನ್ಯ.

ಶಿಕ್ಷಣ : ಪಿಎಚ್.ಡಿ (ನೋಂದಣಿ ಡಾ. ಎಂ.ಎಂ. ಕಲಬುರ್ಗಿಯವರ ಮಾರ್ಗದರ್ಶನದಲ್ಲಿ) ೨೦೦೬

ಎಂ.ಬಿ. ಎ (ಮಾನವ ಸಂಪನ್ಮೂಲ ನಿರ್ವಹಣೆ) ೨೦೦೬

ಎಂ. ಎ. (ಇಂಗ್ಲಿಷ್ ಸಾಹಿತ್ಯ) ೧೯೮೯.

ವೃತ್ತಿ : ಇಂಗ್ಲಿಷ್ ಉಪನ್ಯಾಸಕ

ಸಧ್ಯ ಕೆ. ವಿ ಎಸ್. ಅರ್. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆಯಲ್ಲಿ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸುಲಭವಾಗಿ, ಸರಳ ಬೋಧನೆ, ನವಿರು ಹಾಸ್ಯದ ಮೂಲಕ ಇಂಗ್ಲಿಷ್ ಕಲಿಕೆಗೆ ಪ್ರೇರಣೆ.

ಪ್ರಕಟಿತ ಕೃತಿಗಳು : 'ನೆಲದ ಮರೆಯ ನಿಧಾನ', 'ನಾನೊಂದ ಕನಸ ಕಂಡೆ ' ಕವನ ಸಂಕಲನಗಳ , 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನ

ಜಾಗತಿಕ ಸಂಚಾರ : 'ದೇಶ ನೋಡು ಕೋಶ ಓದು' ಎಂಬ ವಾಣಿಯಂತೆ ೨೦೦೮ ರಲ್ಲಿ ಅನಿವಾಸಿ ಭಾರತೀಯರ ಆಹ್ವಾನದ ಮೇರೆಗೆ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳಿಗೆ ಭೇಟಿ. ದೇಶದ ತುಂಬೆಲ್ಲಾ ಸಂಚಾರ ಅಂದ್ರ, ಕೇರಳ, ಪಂಜಾಬ,ಪಶ್ಚಿಮ ಬಂಗಾಳ, ದೆಹಲಿ, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಹಾಗೂ ಉತ್ತರಾಂಚಲ ರಾಜ್ಯಗಳಿಗೆ ಭೇಟಿ. ಅಲ್ಲಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸಂಘಟನೆಗಳೊಂದಿಗೆ ಸಂವಾದ ಚರ್ಚೆ. ತನ್ಮೂಲಕ ರಚಿಸಿದ 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನಕ್ಕೆ ಸಾಹಿತ್ಯಾಸಕ್ತರ ಹಾಗೂ ವಿಮರ್ಶಕರ ಮೆಚ್ಚುಗೆ.

ಪ್ರಶಸ್ತಿ,ಪುರಸ್ಕಾರ ; ಆಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ

ಬೆಳಗಾವಿ ಜಿಲ್ಲೆಯ ಹಾರೋಗೇರಿಯ ಆಜೂರ ಪುಸ್ತಕ ಪ್ರತಿಷ್ಠಾನವು ರಾಜ್ಯಮಟ್ಟದ ಶ್ರೇಷ್ಠ ಕೃತಿಗಳಿಗೆ ಪುರಸ್ಕಾರವನ್ನು ನೀಡುತ್ತದೆ.ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು 'ಎತ್ತಣ ಮಾಮರ ಎತ್ತಣ ಕೋಗಿಲೆ' ಇಂಗ್ಲೆಂಡ್ ಪ್ರವಾಸ ಕಥನಕ್ಕೆ ೨೦೦೯ ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿ ನೀಡಿದೆ.

ಸಾವಿರಕ್ಕೂ ಹೆಚ್ಚು ಉಪನ್ಯಾಸಗಳು

ಭಾಷಣಗಳೆಂದರೆ ಅವರಿವರು ಹೇಳಿದ ಧ್ಯೇಯ ವಾಕ್ಯಗಳ ಪುನರುಚ್ಚಾರಣೆ ಅಲ್ಲ ಎಂಬ ನಂಬಿಕೆ. ವಚನ ಚಳುವಳಿ ಕುರಿತು ಸಾವಿರಕ್ಕೂ ಹೆಚ್ಚು ವಿಚಾರಪೂರ್ಣ ಉಪನ್ಯಾಸಗಳು, ಕನ್ನಡ ಹಾಗೂ ಇಂಗ್ಲ್ಲಿಷ್ ಭಾಷೆಗಳಲ್ಲಿ ಮನ ಮುಟ್ಟುವಂತೆ ವೈಚಾರಿಕವಾಗಿ ಪ್ರತಿಪಾದನೆ.

ವ್ಯಕ್ತಿತ್ವ ವಿಕಸನ ತರಬೇತಿ : ನಾಲ್ಕಾರು ತಾಸುಗಳವರಗೆ ನಿರರ್ಗಳವಾಗಿ ತರಬೇತಿ ನೀಡುವ ಸಾಮರ್ಥ್ಯ, ನವಿರು ಹಾಸ್ಯ, ಮನ ಮುಟ್ಟುವ ನಿರೂಪಣೆ ನೇರ ಸಂವಹನಕ್ಕಾಗಿ ಹೆಸರುವಾಸಿ. ವಿದ್ಯಾರ್ಥಿಗಳು,ಸರಕಾರಿ ಹಾಗೂ ಸರಕಾರೇತರ ಸಂಸ್ಥೆಗಳ ಅಧಿಕಾರಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಸಕರಾತ್ಮಕ ಧೋರಣೆ ಕುರಿತು ವಿಶೇಷ ಅಧ್ಯಯನ.

ಹರಿತ ಲೇಖನಿ, ಮೊನಚು ವಿಚಾರಗಳು : ನಿರಂತರ ಪದ್ಯ, ಕಥೆ ಹಾಗೂ ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ.ರಾಜಕೀಯ ಅಂಕಣಗಳು:ನಾಡಿನ ವಿವಿಧ ಪತ್ರಿಕೆಗಳಲ್ಲಿ ರಾಜಕೀಯ ಅಂಕಣಗಳು ವಿಕ್ರಾಂತ ಕರ್ನಾಟಕ' ವಾರಪತ್ರಿಕೆಯ ಸಂಪಾದಕ ಸಲಹೆಗಾರರಾಗಿ ಸಾಂದರ್ಭಿಕ ಲೇಖನ ಹಾಗೂ ಸಂದರ್ಶನಗಳು.

ಸಾಕ್ಷ್ಯಚಿತ್ರಗಳ ನಿರ್ಮಾಣ : ದೂರದರ್ಶನ ಕೇಂದ್ರಕ್ಕಾಗಿ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಅವಲೋಕನ, ಭಾವೈಕ್ಯತೆ ಹಾಗೂ ನಮ್ಮೂರ ಜಾತ್ರೆ ಸಾಕ್ಷ್ಯ ಚಿತ್ರಗಳ ನಿರ್ದೇಶನ.

ಗ್ರಂಥ ಸಂಪಾದನೆ :

ಕಲಾವಿದ ಮನೋಹರ ಕಡ್ಲಿಕೊಪ್ಪ ಅವರ 'ಮನೋಹರ' , ಲಕ್ಕುಂಡಿ ಉತ್ಸವದ 'ಸ್ರ್ತೀ ಸಾಹಿತ್ಯ ಸೌರಭ', ಶಿಕ್ಷಣ ತಜ್ಞ ಎಸ್. ಎನ್ ಕಾತರಕಿಯವರ 'ಸಾಧಕ', ಅಭಿನಂದನಾ ಗ್ರಂಥಗಳ ಸಂಪಾದನೆ.

ದೂರದರ್ಶನ ಸಂದರ್ಶನ:

ಚಂದನ ವಾಹಿನಿಯ ಬೆಳಗು ಪರಿಚಯ ಮಾಲಿಕೆಯಲ್ಲಿ ಸಂದರ್ಶನದ ನೇರ ಪ್ರಸಾರದ ಮೂಲಕ ವ್ಯಕ್ತಿತ್ವದ ಸಮಗ್ರ ಪರಿಚಯ.

ರಂಗಾಭಿನಯ : ರಾಜ್ಯದ ವಿವಿಧ ಕಲಾತಂಡಗಳಲ್ಲಿ ವೈವಿದ್ಯಮಯ ಪಾತ್ರಗಳ ನಿರ್ವಹಣೆ.

ಶೈಕ್ಷಣಿಕ ಸಲಹೆಗಾರ:ವಗದುಗಿನ ಜಗದ್ಗುರು ಶಿವಾನಂದ ವಿಜ್ಞಾನ ಕಾಲೇಜಿನ ಸಲಹೆಗಾರರಾಗಿ ಹೊಸ ವಿಚಾರಗಳ ಆವಿಷ್ಕಾರ ಹಾಗೂ ಅನುಷ್ಠಾನ. ನಾಡಿನ ವಿವಿಧ ಸಂಸ್ಥೆಗಳ ಮೂಲಕ ವಿನೂತನ ಶೈಕ್ಷಣಿಕ ಕಲಿಕಾ ನಿರ್ವಹಣೆ.

ವಿವಿಧ ಸಂಘಟನೆಗಳ ಸಂಸ್ಥಾಪಕ:

ಸಮರಸ ಬಳಗ (ಸಾಂಸ್ಕೃತಿಕ ಸಂಘಡನೆ) ಕ್ರಿಯೇಟಿವ್ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮ್ಯಾನೇಜ್‌ಮೆಂಟ್ ( ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ) ರಂಗದರ್ಶನ ಕಲಾತಂಡ (ರಂಗ ಚಟುವಟಿಕೆಗಳ ಕೇಂದ್ರ) ಕೈಂಡ್ ಪರಿವಾರ (ಸ್ವಯಂ ಸೇವಾ ಸಂಸ್ಥೆ).

ಆಡಳಿತ ಮಂಡಳಿಯ ಸದಸ್ಯರು : ಹಂಪಿ ಕನ್ನಡ ವಿಶ್ವವಿದ್ಯಾಲಯ

೧೯೯೯ ರಿಂದ ೨೦೦೨ ರವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯ ನಿರ್ವಹಣೆ. ವಿಶ್ವವಿದ್ಯಾಲಯದ ವಿವಿಧ ಸಮಿತಿಗಳ ಸದಸ್ಯರಾಗಿ ಮಾರ್ಗದರ್ಶನ.

ಜಿಲ್ಲಾ ಸಂಚಾಲಕರು ಬೆಳ್ಳಿಮಂಡಲ,೨೦೦೯ ರಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಜಿಲ್ಲಾ ಸಂಚಾಲಕರಾಗಿ ಬೆಳ್ಳಿಮಂಡಲ ಫಿಲ್ಮ ಸೊಸಾಟಿಯ ಸ್ಥಾಪನೆ. ಸಿನೆಮಾ ಹಾಗೂ ಸಾಹಿತ್ಯ, ಸಿನೆಮಾ ಹಾಗೂ ಶಿಕ್ಷಣ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.

ಪುರಸ್ಕಾರ : ಜನಗಣತಿ ವಿಭಾಗದಲ್ಲಿ ಎಡಿಶನಲ್ ಚಾರ್ಜ ಆಫೀಸರ್ ಎಂದು ಕರ್ತವ್ಯ ನಿರ್ವಹಿಸಿ ಉತ್ತಮ ತರಬೇತಿ ನೀಡಿದ್ದಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಹಾಗೂ ಬೆಳ್ಳಿ ಪದಕ.

ವ್ಯಕ್ತಿತ್ವ ವಿಕಸನ ತರಬೇತುದಾರ :

ಕ್ರಿಯೇಟಿವ್ ಸ್ಕೂಲ್ ಆಫ್ ಕಮ್ಯೂನಿಕೇಶನ್ ಮ್ಯಾನೇಜಮೆಂಟ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಧಿಕಾರಿಗಳಿಗೆ, ಸರಕಾರೇತರ ಸಂಸ್ಥೆಗಳ ಸಮಾಜ ಸೇವಕರಿಗೆ ವ್ಯಕ್ತಿತ್ವ ವಿಕಸನ ತರಬೇತಿ, ಒಂದು ದಿನ, ಎರಡು ದಿನ ಹಾಗೂ ಮೂರು ದಿನಗಳ ಅವಧಿಯ ವಿಕಸನ ತರಬೇತಿ ಪಠ್ಯಕ್ರಮ. ದಿನಕ್ಕೆ ಆರರಿಂದ ಎಂಟು ತಾಸುಗಳವರೆಗೆ ನಿರಂತರ ತರಬೇತಿ ನೀಡುವ ಸಾಮರ್ಥ್ಯ.

" ಯುರೋಪ್‌ನ ಇಂಗ್ಲೆಂಡ್ ದೇಶದ ವಿವಿಧ ಶೈಕ್ಷಣಿಕ ಸಂಸ್ಥೆಗಳ ಕೌನ್ಸೆಲಿಂಗ್ ಕೇಂದ್ರಗಳಿಗೆ ಭೇಟಿ, ವಿಶೇಷ ಅಧsಯನ.

" ಮಾನವ ಶಾಸ್ತ್ರ, ಮಾನಸ ಶಾಸ್ತ್ರಗಳ ವಿಷಯಗಳಲ್ಲಿ ಆಳವಾದ ಆಸಕ್ತಿ, ಸಕಾರಾತ್ಮಕ ಧೋರಣೆಯನ್ನು ಪ್ರತಿಪಾದಿಸಲು ವಚನ ಸಾಹಿತ್ಯವನ್ನು ಆಧರಿಸಿದ ವಿಶೇಷ ಉದಾಹರಣೆ.

" ಪದವಿ, ಸ್ನಾತಕೋತ್ತರ, ಮ್ಯಾನೇಜಮೆಂಟ್ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳ ಆಯೋಜನೆ ಸಾವಿರಾರು ವಿದ್ಯಾರ್ಥಿಗಳಿಗೆ, ಐದನೂರಕ್ಕೂ ಹೆಚ್ಚು ಶಿಕ್ಷಕರಿಗೆ ನೂರಾರು ಅಧಿಕಾರಿಗಳಿಗೆ .

" ಕೆ. ಎಲ್. ಇ. ಸಂಸ್ಥೆಯ ಶಿಕ್ಷಣ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಹಾಗೂ ಎನ್. ಸಿ. ಸಿ. ವಿದ್ಯಾರ್ಥಿಗಳಿಗೆ.

" ಜೆ. ಎಸ್. ಎಸ್. ವಿದ್ಯಾಪೀಠ ಸುತ್ತೂರಿನಲ್ಲಿ ಆಯೋಜಿಸಿದ್ದ ಶಿಕ್ಷಕರ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ವಿಶೇಷ ಉಪನ್ಯಾಸ. ದೇಶದ ವಿವಿಧ ರಾಜ್ಯಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತರಬೇತಿ ನೀಡಿದ ಹೆಗ್ಗಳಿಕೆ.

" ಕರ್ನಾಟಕ ಸರಕಾರದ ಗ್ರಾಮೀಣಾಭಿವೃಧ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ವಯಸ್ಕರ ಶಿಕ್ಷಣ ಇಲಾಖೆ, ಕೇಂದ್ರ ಸರಕಾರದ ಜನಗಣತಿ ಇಲಾಖೆಯ ವಿವಿಧ ಅಧಿಕಾರಿಗಳಿಗೆ.

" ಸಕಾರಾತ್ಮಕ ಧೋರಣೆ, ಮನೋನಿಗ್ರಹ, ಸಂವಹನ ಕೌಶಲ್ಯ, ಟೈಮ್ ಮ್ಯಾನೇಜಮೆಂಟ್ ಇಂಗ್ಲಿಷ್ ಭಾಷಾ ಕೌಶಲ್ಯಗಳ ಕುರಿತು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ. ಪಾರದರ್ಶಕ ನಿಲುವು ಮತ್ತು ವ್ಯಕ್ತಿತ್ವ ವಿಕಸನದ ಕುರಿತು ವಿಷಯ ಪರಿಣಿತಿ.

" ಜಗದ್ಗುರು ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಕೇಂದ್ರದ ಮೂಲಕ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ವಿಶೇಷ ಅಧ್ಯಯನ ಯೋಜನೆ ನಿರ್ವಹಣೆ.

" ಹಂಪಿ ಕನ್ನಡ ವಿಶ್ವವಿದ್ಯಾಲಯ ಪದವಿ ಕಾಲೇಜು ಉಪನ್ಯಾಸಕರಿಗಾಗಿ ಆಯೋಜಿಸಿದ್ದ ಪುನರ್ ಮನನ ಶಿಬಿರದಲ್ಲಿ ವಿಶೇಷ ಉಪನ್ಯಾಸಗಳು.

" ಕನಕದಾಸ ಶಿಕ್ಷಣ ಸಮಿತಿಯ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಕೇಂದ್ರ (ಕರ್ನಾಟಕ ವಿಶ್ವವಿದ್ಯಾಲಯ) ದಲ್ಲಿ ಅತಿಥಿ ಪ್ರೊಫೆಸರ್.

" ಧ್ಯಾನ, ಪ್ರಾಣಾಯಾಮಗಳೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಗೀತ, ವಿಡಿಯೋ ಸಾಧನಗಳ ಬಳಕೆಯ ಮೂಲಕ. ಕರ್ನಾಟಕ, ಆಂದ್ರ ಹಾಗೂ ತಮಿಳುನಾಡಿನ ವಿವಿಧ ಬಿ. ಎಡ್., ಡಿ. ಎಡ್. ವಿದ್ಯಾರ್ಥಿಗಳಿಗೆ 'ಕ್ಲಾಸ್‌ರೂಮ್ ಕಲ್ಚರ್' ಕುರಿತು ವಿಶೇಷ ಉಪನ್ಯಾಸ.

" ಗದಗ ಜಿಲ್ಲೆಯ ೨೦೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬೀದಿ ನಾಟಕಗಳ ಮೂಲಕ ಜನಜಾಗೃತಿ ಜಾತಾದ ನಾಯಕತ್ವ.

" ೨೦೦೧ ಹಾಗೂ ೨೦೦೨ರ ಸಾಲಿನ ಜನಗಣತಿಯಲ್ಲಿ ಸ್ಪೆಶಲ್ ಎಡಿಶನಲ್ ಚಾರ್ಜ್ ಆಫೀಸರ್ ಆಗಿ ಕರ್ತವ್ಯ ನಿರ್ವಹಣೆ ಎನ್ಯೂಮರೇಟರ್ಸ್ ಹಾಗೂ ಸುಪರ್‌ವೈಜರಗಳಿಗೆ ತರಬೇತಿ ನೀಡಿದ್ದಕ್ಕೆ ಭಾರತ ಸರಕಾರದ ಗೃಹ ಇಲಾಖೆಂದ ಬೆಸ್ಟ್ ಎಡಿಶನಲ್ ಚಾರ್ಜ್ ಅಫೀಸರ್ ಎಂದು ರ್‍ಟ್ರಾಯ ಪುರಸ್ಕಾರ ಹಾಗೂ ಬೆಳ್ಳಿ ಪದಕ.

ಯುರೋಪ್‌ನ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳ ಭೇಟಿ :

ಇಂಗ್ಲಿಷ್ ಕಲಿಕಾ ಬೋಧನೆ, ವ್ಯಕ್ತಿತ್ವ ವಿಕಸನ ತರಬೇತಿ, ವಚನ ಚಳುವಳಿ ಹಾಗೂ ಜಾಗತೀಕರಣದ ಹಿನ್ನಲೆಯಲ್ಲಿ ಅಸ್ಖಲಿತ ಉಪನ್ಯಾಸ ನೀಡುವ ಇವರಿಗೆ ಪ್ರಸ್ತುತ ಪ್ರವಾಸ ಹೆಚ್ಚು ನೆರವಾಗಿದೆ. ವೃತ್ತಿಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅನುದಾನಿತ ಕೆ. ವಿ. ಎಸ್. ಆರ್. ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಸಿದ್ದು ಯಾಪಲಪರವಿಯವರ ಶ್ರದ್ಧೆ, ಆಸಕ್ತಿ, ಅಂತರಾಷ್ಟ್ರೀಯ ಸಂಬಂಧಗಳ ಮೂಲಕ ಸ್ನೇಹಿತರ ಹಾಗೂ ಬಂಧುಗಳ ನೆರವಿನಿಂದ ವೈಯಕ್ತಿಕವಾಗಿ ಹತ್ತಾರು ಸಾವಿರ ಮೈಲುಗಳನ್ನು ಕೇವಲ ೨೪ ದಿನಗಳಲ್ಲಿ ಸಂಚರಿಸಿದ್ದು ಸ್ಮರಣೀಯ.

ಅನಿವಾಸಿ ಭಾರತೀಯರ ಆಹ್ವಾನದ ಮೇರೆಗೆ ೨೦೦೮ ಮೇ ತಿಂಗಳಿನಲ್ಲಿ ಯುರೋಪ್‌ನ ಯುನೈಟೆಡ್ ಕಿಂಗ್‌ಡಮ್ ಪ್ರಾಂತದ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ಐರ್‍ಲೆಂಡ್ ಹಾಗೂ ವೇಲ್ಸ್ ದೇಶಗಳಿಗೆ ಭೇಟಿ.

ವ್ಯಕ್ತಿತ್ವ ವಿಕಸನ ತರಬೇತುದಾರ, ಕವಿ ಹೃದಯದ ಸಿದ್ದು ಯಾಪಲಪರವಿ ಅವರಿಗೆ ಯುರೋಪ್ ಭೇಟಿ ವಿಶಿಷ್ಠ ಅನುಭವಗಳನ್ನು ಒದಗಿಸಿದೆ. ವೃತ್ತಿಂದ ಇಂಗ್ಲಿಷ ಉಪನ್ಯಾಸಕ; ಪ್ರವೃತ್ತಿಂದ ಕನ್ನಡದ ಬರಹಗಾರರಾಗಿರುವ ಕವಿಗೆ ಯುರೋಪ್ ಭೇಟಿ ಅನೇಕ ವಿನೂತನ ಆವಿಷ್ಕಾರಗಳನ್ನು ಒದಗಿಸಲು ಪೂರಕವಾತು.

ಅಲ್ಲಿನ ಜನ ಜೀವನ, ಶಿಕ್ಷಣ ಪದ್ಧತಿ ಸಂಸ್ಕೃತಿ ಕವಿ ಸಾಹಿತಿಗಳ ಐತಿಹಾಸಿಕ ಸ್ಥಳಗಳ ಭೇಟಿ, ಕೌನ್ಸೆಲಿಂಗ್ ಕೇಂದ್ರಗಳ ಕಾರ್ಯನಿರ್ವಹಣೆ ಹಾಗೂ ಪಾಶ್ಚಿಮಾತ್ಯ ಬದುಕಿನ ವಾಸ್ತವದ ಪರಿಣಾಮ ಅರಿಯಲು ಸಂಪೂರ್ಣ ಅಧ್ಯಯನದೊಂದಿಗೆ ಪ್ರಸ್ತುತ ಭೇಟಿಯನ್ನು ಬಳಸಿಕೊಳ್ಳಲಾತು. ಯುರೋಪ್ ಯಾತ್ರೆಯಲ್ಲಿನ ಪ್ರತಿ ಅನುಭವಗಳನ್ನು ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಮೂಲಕ ದಾಖಲಿಸಿಕೊಳ್ಳುವುದಲ್ಲದೆ, "ಎತ್ತಣ ಮಾಮರ ಎತ್ತಣ ಕೋಗಿಲೆ"ಯಲ್ಲಿ ತುಂಗೆಯಿಂದ ದ ಎವನ್‌ವರೆಗಿನ ಅನುಭವಗಳನ್ನು ಪ್ರವಾಸ ಕಥನವಾಗಿ ದಾಖಲೆ.

ಸಾಹಿತ್ಯ, ಮಾನವ ಶಾಸ್ತ್ರ, ಮನ:ಶಾಸ್ತ್ರ ಹಾಗೂ ವಚನ ಸಾಹಿತ್ಯದಲ್ಲಿ ಆಳ ಅಧ್ಯಯನ, ಪ್ರಚಲಿತ ವಿಷಯಗಳ ಮೇಲಿನ ವಿಚಾರಪೂರ್ಣ eನಾರ್ಜನೆಗೆ ಯುರೋಪ್ ಭೇಟಿ .

ಇಂದು ನಮ್ಮ ಯುವಕರು ವಿದೇಶ ಪ್ರವಾಸ ಕೈಗೊಳ್ಳುವ ಅನಿವಾರ್ರ್ಯತೆ ಇದ್ದು, ಅಲ್ಲಿ ಅವರು ಎದುರಿಸಬಹುದಾದ ಸಮಸ್ಯೆಗಳ ಸ್ಥಿತ್ಯಂತರದ ಅನುಭವಗಳನ್ನು ಸಮರ್ಥವಾಗಿ ನಿಭಾಸಲು ಸೂಕ್ತ ಮಾರ್ಗದರ್ಶನ ನೀಡುವ ನಿರ್ಧಾರ. ಒಬ್ಬ ಕ್ರಿಯಾಶೀಲ ವ್ಯಕ್ತಿ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಲು ಸಾಧ ಎಂಬುದಕ್ಕೆ ಪ್ರೊ. ಯಾಪಲಪರವಿ ನಿದರ್ಶನ. ಗ್ರಾಮೀಣ ಪ್ರದೇಶದ ಕನ್ನಡ ಸರಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ಸತತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸುತ್ತಿರುವುದು ನಮ್ಮ ಹೊಸ ತಲೆಮಾರಿನ ಯುವ ಜನಾಂಗಕ್ಕೆ ಇವರು ಮಾದರಿ.

ಕವಿ

ವಿದ್ಯಾರ್ಥಿದಸೆಂದಲೂ ಕಾವ್ಯ ರಚನೆಯಲ್ಲಿ ಆಸಕ್ತಿ. ವಿದ್ಯಾರ್ಥಿ ಕವಿ ಸಮ್ಮೇಳನಗಳಲ್ಲಿ,

ಧಾರವಾಡ ಆಕಾಶವಾಣಿ ಕೇಂದ್ರದಿಂದ ಸ್ವ ರಚಿತ ಕವನಗಳ ನಿವೇದನೆ.

ನಾಡಿನ ಹೆಸರಾಂತ ಉತ್ಸವಗಳಾದ ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕ"ಗ್ಠೋಗಳಲ್ಲಿ ಕವಿತೆಗಳ ನಿವೇದನೆ.

ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ಸಂಘಟನೆಗಳು ಪ್ರಕಟಿಸಿದ ಸಂಕಲಿತ ಸಂಕಲನಗಳಲ್ಲಿ ಕವನಗಳು ಪ್ರಕಟಿತ.

ನಾಡಿನ ದಿನಪತ್ರಿಕೆ, ವಾರ ಪತ್ರಿಕೆ, ಹಾಗೂ ಸಾವಿತ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕವಿತೆಗಳು ಕಾವ್ಯಾಸಕ್ತರ ಗಮನ ಸೆಳೆದಿವೆ. ಮೊದಲ ಸ್ವತಂತ್ರ ಸಂಕಲನ 'ನೆಲದ ಮರೆಯ ನಿಧಾನ' ೨೦೦೭ ಹಾಗೂ ೨೦೦೮ ರಲ್ಲಿ ಪ್ರಕಟಿತ.

ಸ್ತ್ರೀ ಸಂವೇದಿ ಪದ್ಯಗಳ ಸಂಕಲನ 'ನಾನೊಂದ ಕನಸ ಕಂಡೆ' ಕವಿಗಿರುವ ಭಾವಪರವಶತೆಯನ್ನು ದಾಖಲಿಸಿದೆ.

ಕತೆಗಾರ :

ಇಂಗ್ಲಿಷ್‌ನ ಅನೇಕ ಕತೆಗಳು ಕನ್ನಡಕ್ಕೆ ಹಾಗೂ ಕಾವ್ಯಾತ್ಮಕ ಭಾಷೆಯ ಮೂಲಕ ಕತೆ ಬರೆಯುವುದನ್ನು ಕರಗತ ಮಾಡಿಕೊಂಡು ಸ್ವತಂತ್ರ ಕತೆಗಳು ಸಾ"ತ್ಯ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ.

ವಿಮರ್ಶಕ :

ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೂಂಡ ವಿಮರ್ಶಾ ಲೇಖನಗಳು. ಗದ್ಯ, ಪದ್ಯ ಪ್ರಕಾರಗಳಲ್ಲಿ ಸಮಾನ ಹಿಡಿತ ಹೊಂದಿರುವುದರಿಂದ ಓದಿಸಿಕೊಂಡು ಹೋಗುವ ಇವರ ಬರಹ, ನವಿರು ಹಾಸ್ಯ, ನೇರ ನಿರೂಪಣೆಗಳ ಮೂಲಕ ಬಹುಜನರಿಗೆ ತಲುಪಿದೆ.

ಧ್ಯೇಯ ಹಾಗೂ ಗುರಿ

ಬದುಕೆಂಬುದು ನಿಂತ ನೀರಲ್ಲ, ನೆಲದ ಮರೆಯ ನಿಧಾನದಂತೆ ಸತತ ಅಧ್ಯಯನ, ಪಾರದರ್ಶಕ ವರ್ತನೆ ಹಾಗೂ ಸಕಾರಾತ್ಮಕ ಧೋರಣೆಯೊಂದಿಗೆ ಪರಿಶ್ರಮದಿಂದ ಬದುಕುವದು.

ವಿಳಾಸ :

(ಇಂಗ್ಲಿಷ್ ವಿಭಾಗ ಕೆ.ವಿ.ಎಸ್ ಆರ್ ಕಾಲೇಜು)

ಸಾಂಗತ್ಯ ಪ್ರಕಾಶನ, ಕಳಸಾಪೂರ ರಸ್ತೆ,

ಗದಗ - ೫೮೨೧೦೩

೯೪೪೮೩೫೮೦೪೦

siddu.yapal@gmail.com

Tuesday, February 2, 2010

ಇದು ಮೊದಲ ಪತ್ರ

'ಇ' ಜಗತ್ತಿನಲ್ಲಿ ನಿಮ್ಮೊಂದಿಗೆ ಸದಾ 'ನಾ' ಇಲ್ಲಿನ ಈ ಜಗತ್ತಿನಲ್ಲಿ ನನ್ನ ಬರಹ ತಿರಸ್ಕಾರಗೊಳ್ಳುವ ಪ್ರಶ್ನೆಯೇ ಇಲ್ಲ. ಸಂಪಾದಕರು ಪ್ರಕಟಿಸುತ್ತಾರೋ ಇಲ್ಲವೋ? ಓದುಗರಿಗೆ ತಲುಪಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ 'ಇ' ಬ್ಲಾಗ್ ಲೋಕದಲ್ಲಿದೆ. ಇಂತಹದೊಂದು ಜಾಗತಿಕ ಮಾಧ್ಯಮಕ್ಕೆ ಪ್ರವೇಶಿಸುವುದಕ್ಕೆ ಖುಷಿ ಆಗಿದೆ. ಯಾರಿಗೂ ಹೇಳಿಕೊಳ್ಳಲಾಗದ ಅನೇಕ ಖಾಸಗಿ ಸಂಗತಿಗಳನ್ನು ನಿಮ್ಮೊಂದಿಗೆ ಯಾವ ಮುಲಾಜಿಲ್ಲದೆ ಹಂಚಿಕೊಳ್ಳುತ್ತೇನೆ. ಮಾತು ಲೆಕ್ಕಾಚಾರದಿಂದ ಕೂಡಿರಬೇಕು. ಆದರೆ ಬರಹ ಮುಕ್ತವಾಗಿರಬೇಕು.ಇಲ್ಲಿ ಆತ್ಮವಂಚನೆ ಸಲ್ಲದು. ಹಾಗಂತ ನಾವು ಅನೇಕ ಸಾರಿ ಅಂದುಕೊಳ್ಳುತ್ತೇವೆ.ಆದರೆ ಅನೇಕ ಕಾರಣಗಳಿಂದ ಹೇಳಬೇಕಾದ ಅನೇಕ ಸಂಗತಿಗಳನ್ನು ಬೇರೆಯವರಿಗೆ ಹೇಳಲಾಗುವುದಿಲ್ಲ. ಒಳಗಿರುವುದನ್ನು ಬಚ್ಚಿಡದೆ, ಬೇರೆ,ಬೇರೆ ವಿಧಾನಗಳನ್ನು ಬಳಸಿ ಬಿಚ್ಚಿಡಲು ಖಂಡಿತಾ ಬ್ಲಾಗ್ ಲೋಕವನ್ನು ಪ್ರಾಮಾಣಿಕವಾಗಿ ಪ್ರವೇಶಿಸುತ್ತೇನೆ. ನಮ್ಮ ಈ ಸೋಗಲಾಡಿ ಬದುಕಿನಲ್ಲಿ ಎಷ್ಟೊಂದು ಅಪ್ರಾಮಾಣಿಕವಾಗಿ ಬದುಕುತ್ತೇವಲ್ಲ? ಈ ಹಿಪೋಕ್ರಸಿಗೆ ಅಂತ್ಯವಿಲ್ಲವೆ? ಒಳಗಿರುವುದನ್ನು ನಯವಾಗಿ ಅದುಮಿ, ಅನೇಕ ಬಣ್ಣ,ಬಣ್ಣದ ಸುಂದರ ಮುಖವಾಡಗಳನ್ನು ಧರಿಸಿ ನಯವಂಚಕರಾಗಿರುವ ನಮಗೆ ಎಂದೂ ನಮ್ಮ ಬಗ್ಗೆ ಅಸಹ್ಯವೆನಿಸುವುದಿಲ್ಲ. ಸುಂದರವಾಗಿ ಕಾಣಲು ಬಳಸುವ ಸೌಂದರ್ಯ ಸಾಧನಗಳು, ಘಮಘಮಿಸುವ ಪರ್ಫ್ಯೋಗಳು ನಮ್ಮನ್ನು ಸಭ್ಯರನ್ನಾಗಿಸಿವೆ. ನಾವು ಈಗ ಸ್ವಚ್ಛಗೊಳಿಸಬೇಕಾದದ್ದು ಕೇವಲ ದೇಹವನ್ನಲ್ಲ, ನಮ್ಮ ಮನದ ಕೊಳೆಯನ್ನು ಕೂಡಾ! ಅಳಿಸಲಾಗದ ಮನದ ಕೊಳೆಯನ್ನು ಅಳಿಸಲು ಹಂತಹಂತವಾಗಿ ಪ್ರಯತ್ನಿಸಬೇಕು. ಹೀಗೆ ನಿಮ್ಮೊಂದಿಗೆ ಪರಸ್ಪರ ಮುಖಾಮುಖಿಗೊಂಡು ಎಲ್ಲವನ್ನು ಹೇಳಿಕೊಂಡು ಹಗುರಾಗುವುದರಲ್ಲಿನ ಸುಖ ಎಲ್ಲಿದೆ ಹೇಳಿ? ಸಾರ್ವಜನಿಕವಾಗಿ ಮುಖವಾಡ ಕಳಚುವುದು ಸುಲಭವಾದ ಮಾತಲ್ಲ. ಏನೇನೋ 'ಇಸಂ'ಗಳು 'ಅಹಂ' ನಮ್ಮನ್ನು ಬೆಂಬತ್ತಿರುತ್ತವೆ. ಈ ಎಲ್ಲಾ ಮಿತಿಗಳನ್ನು ಕಳೆದು ತೊಳೆದುಕೊಳ್ಳಲು ಸ್ನೇಹ-ಪ್ರೀತಿ ನಮಗೆ ನೆರವಾಗುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಅಲ್ಲವೇ " ಸ್ನೇಹವೆಂದರೆ ಅದ್ಭುತ ರಸಾಯನ, ಅದು ದು:ಖವನ್ನು ಕರಗಿಸುತ್ತದೆ. ಚಿಂತೆಗಳನ್ನು ಆವಿಯಾಗಿಸುತ್ತದೆ. ದೋಷಗಳನ್ನು ಶುದ್ಧೀಕರಿಸುತ್ತದೆ. ಅದರೊಂದಿಗೆ ಸ್ನೇಹ, ಪ್ರೀತಿ, ಸಂಭ್ರಮವನ್ನು ಹೆಚ್ಚಿಸುತ್ತದೆ." ಎಂದು ಸಂದೇಶ ನೀಡಿದ್ದು ಅದಕ್ಕಾಗಿಯೇ ಸ್ನೇಹದಿಂದ ಪ್ರೀತಿಯನ್ನು ಗಳಿಸೋಣ, ಪ್ರೀತಿಯಿಂದ ದು:ಖವನ್ನು ಮರೆಯೋಣ. ಪರಸ್ಪರರ ದೋಷಗಳು ಗೋಚರವಾದಾಗ ಅಷ್ಟೇ ಸಂತೋಷದಿಂದ ಸ್ವೀಕರಿಸಿ ವಾಸ್ತವದಲ್ಲಿಯೂ ಖುಷಿಯಿಂದ ಬದುಕೋಣ. 'ಕಾಲ' ಯಾರಿಗಾಗಿ ಕಾಯುವುದಿಲ್ಲ ಅಲ್ಲವೆ? ಬ್ಲಾಗ್ ವಿನ್ಯಾಸಕ್ಕೆ ಕಾರಣವಾದ ಕೊಪ್ಪಳದ ಗೆಳೆಯ ಸಿರಾಜಗೆ ಕೃತಜ್ಞತೆಗಳು.