Wednesday, April 28, 2010

ಒತ್ತಡದ negative ಸಲಹೆಗಳನ್ನು ಆಲಿಸಬೇಡಿ
*
ಕೆಲವರು ಬೇಡವೆಂದರೂ ಉಚಿತ negative ಸಲಹೆ ನೀಡುವುದರಿಂದ ತಪ್ಪಿಸಿಕೊಳ್ಲುವುದು ಹೇಗೆ?
_______ ಬಾರದು ಬಪ್ಪದು, ಬಪ್ಪದು ತಪ್ಪದು ಎಂದು ಬಸವಣ್ಣ ಹೇಳಿದ್ದಾನೆ. ನಮ್ಮ ಸುತ್ತಲೂ ನಡೆಯುವ ಹಾಗೂ ನಮ್ಮ ಮೇಲೆ ಅಪ್ಪಳಿಸಬಹುದಾದ ಯಾವುದೇ ಸಂಗತಿಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಅವುಗಳನ್ನು ಸ್ವೀಕರಿಸಿಯೂ ಸಂತಸದಿಂದ ಬದುಕುವುದೇ ಜಾಣತನ.
Negative ಸಲಹೆಗಳ ಮಹಾಪೂರ ಸಹಜ! ನಾನೂ ಇದರಲ್ಲಿ ಸಾಕಷ್ಟು ಈಸಿದ್ದೇನೆ. ಎದುರಿಸುವಾಗ ಅನೇಕ ಕಿರಿಕಿರಿಗಳನ್ನು ಎದುರಿಸಿ ಈಗ ನಿಶ್ಚಲನಾಗಿದ್ದೇನೆ. ಯಾರು ಏನೇ ಹೇಳಿದರೂ ಕೇವಲ ಕೇಳಿಸಿಕೊಳ್ಳಬೇಕು.
ಇಂಗ್ಲಿಷ್ ನಲ್ಲಿ hearing and listening ಎಂಬ ಪದಗಳಿವೆ. ನೋಡಲು ಒಂದೇ ಅರ್ಥವನ್ನು ನೀಡಿದರೂ ಗ್ರಹಿಕೆ ಭಿನ್ನವಾಗಿವೆ. So you should always hear negative suggetion but not listen them.
ಜವಾರಿ ಭಾಷೆಯಲ್ಲಿ ಈ ಕಿವಿಯಿಂದ ಕೇಳಿ ಈ ಕಿವಿಯಿಂದ ಬಿಡುವುದು ಎಂದು ಸನ್ನೆ ಮಾಡುವಂತೆ.
ಕೆಲವರಿಗೆ ಕೇವಲ negative ಸಲಹೆಗಳನ್ನು ಕೊಡುವ ರೋಗವಿರುತ್ತದೆ. ಕೇಳಲಿ ಬಿಡಲಿ ತಾವೇ ನೀಡುತ್ತಾರೆ. ನಿನ್ನ ಮುಂದಿನ ಯೋಜನೆ ಏನು? ತಾವೇ ಪ್ರಶ್ನಿಸಿ ಆಕಸ್ಮಾತ್ ಹೇಳಿದರೆ ಧಾರಾಕಾರವಾಗಿ ಸಲಹೆಗಳ ಮಹಾಪೂರ ಹರಿಸಿ ಕಂಗೆಡಿಸುತ್ತಾರೆ.
ಸದಾ ಕಾಲ ಈ ರೀತಿಯ ಮನೋಧರ್ಮ ಹೊಂದಿದವರೊಂದಿಗೆ ನಿಮ್ಮ ಯೋಜನೆ, ಯೋಚನೆಗಳನ್ನು ಹಾಗೂ ಕನಸುಗಳನ್ನು ಹಂಚಿಕೊಳ್ಳಬೇಡಿ. ಅವರು ನಿಮ್ಮ ಆತ್ಮಬಲವನ್ನೇ ಕೊಂದುಹಾಕುತ್ತಾರೆ.
ನಿಮ್ಮ ಮೇಲೆ ಭರವಸೆ ಇಟ್ಟಿರುವ, ನಿಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ಅರಿತಿರುವ ಆತ್ಮೀಯರೊಂದಿಗೆ ಮಾತ್ರ ನೀವು ತೆರೆದುಕೊಳ್ಳಿರಿ.
ನಿಮಗೆ ಲಕ್ಷ, ಲಕ್ಷ ಜನ ಪರಿಚಿತರಿರುತ್ತಾರೆ. ಆದರೆ ಅವರೆಲ್ಲರೂ ಆತ್ಮೀಯರಲ್ಲ, ಹಿತೈಶಿಗಳಲ್ಲ. ಈ ಹಿತೈಶಿಗಳಲ್ಲೂ ಕೆಲವರು ಹಿತಶತ್ರುಗಳಿರುತ್ತಾರೆ.
ಈ ರೀತಿ ಸ್ನೇಹಿತರನ್ನು ವಿಂಗಡಿಸಲು ನಿಮ್ಮ ಅರ್ಧ ಆಯುಷ್ಯವನ್ನು waste ಮಾಡಬೇಡಿಬೇಡಿರಿ ನನ್ನ ಹಾಗೆ.
ಎದುರಿಗೆ ಸಲುಗೆಯಿಂದ ಮಾತನಾಡಿದವರನ್ನೆಲ್ಲ ನಂಬಿ ಕೆಟ್ಟವನು ನಾನು. ಈಗ ಎಲ್ಲ ಸೋಸಿ ಅರ್ಧ ಆಯುಷ್ಯ ಮುಗಿದ ಮೇಲೆ ಹಿತೈಷಿಗಳ top list ಇಟ್ಟುಕೊಂಡಿದ್ದೇನೆ. ಉಳಿದ ಮಹನೀಯರು ಏನನ್ನಾದರೂ ಕೇಳಿದರೆ ನಕ್ಕು ಸುಮ್ಮನಾಗುತ್ತೇನೆ.
"ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನು ತುಪ್ಪವ ಹೊಯ್ದಡೆ ಸಿಹಿಯಾಗಬಲ್ಲದೆ, ಕಹಿಯಾಗಬಲ್ಲದೆ? ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು ಕೂಡಲಸಂಗಮ ದೇವ" ಎಂದಿದ್ದಾನೆ ಬಸವಣ್ಣ.
Negative ಭಾವ ಹೊಂದಿದವರನ್ನು ಕಟ್ಟಿಕೊಡುವ ರೀತಿ ಎಷ್ಟೊಂದು ಪರಿಣಾಮಕಾರಿಯಾಗಿದೆ ನೋಡಿ. Negative ಎಂಬ ಭಾವ ಬೇವಿನ ಬೀಜವಿದ್ದಂತೆ ಅದನ್ನು ಎಷ್ಟೇ ವಿಧದಲ್ಲಿ ಅಂದರೆ ಬೆಲ್ಲವ ಕಟ್ಟಿ, ಆಕಳ ಹಾಲು, ಜೇನು ತುಪ್ಪ ಸುರಿಸಿ positive ಅಥವಾ sweet ಆಗಿಸಲು ಯತ್ನಿಸುವುದು ಅಸಾಧ್ಯ ಎಂಬುದಲ್ಲದೆ, ಶಿವಭಕ್ತರೊಂದಿಗೆ ಮಾತ್ರ ನುಡಿಯಬಹುದು ಎನ್ನುತ್ತಾನೆ. ಇಲ್ಲಿ ಶಿವಭಕ್ತರೆಂದರೆ positive welwisher ಎಂದೇ ಅರ್ಥ.
ಈ ರೀತಿಯ ಗುಣ ವಿಶೇಷಗಳನ್ನು ತಿಳಿಸುವ ಅನೇಕ ಸಂಗತಿಗಳನ್ನು ನಮ್ಮ epiz ಗಳಲ್ಲಿ, ವಚನಗಳಲ್ಲಿ ಧಾರಳಾವಾಗಿ ಸಿಗುತ್ತವೆಯಾದರೂ ನಾವವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
Negative ಗುಣಧರ್ಮದವರನ್ನು ಬದಲಿಸಲು ಸಾಧ್ಯವಿಲ್ಲವೆ? ಎಂಬ ಪ್ರಶ್ನೆ ಕೂಡಾ ಏಳುವುದು ಸಹಜ. ಅವರು ಬದಲಾಗಿ, ತಮ್ಮ ಮಾನಸಿಕ ಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಬಯಸಿದರೆ ಮಾತ್ರ ಇದು ಸಾಧ್ಯ.! ಅವರಿಗೆ ಆತ್ಮೀಯರೆನ್ನುವವರು ಯಾರಾದರೂ ಇದ್ದರೆ ಇದು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ಮನವ ಸಂತೈಸಿಕೊಳ್ಳಿ ಎಂಬಂತೆ ಕೇವಲ ಉಪೇಕ್ಷಿಸಿ, ನಾವು ನೆಮ್ಮದಿಯಿಂದ ಇರಬೇಕು.
ಎಲ್ಲವನ್ನು, ಎಲ್ಲದನ್ನು ಸರಿಮಾಡಲು ನಾವೇನು ಲೋಕೋದ್ಧಾರಕ ರಾಜಮಹರಾಜರಲ್ಲ. ನಮಗೆ ಸಾವಿರಾರು ವರುಷಗಳ ಆಯುಷ್ಯವೂ ಇಲ್ಲ. ಜ್ಞಾನ ಮಟ್ಟಕ್ಕೆ ನಿಲುಕಿದ ದಿನಗಳಿಂದ ಸಾಯುವ ತನಕ ನೆಮ್ಮದಿಯಿಂದ ವಾಸ್ತವವನ್ನು ಎದುರಿಸಿ, ಸ್ವೀಕರಿಸಿ positive ಆದರೆ ಎಷ್ಟೋ ಆತಂಕಗಳು ದೂರಾಗುತ್ತವೆ.
ಈ ಹಿನ್ನಲೆಯಲ್ಲಿ ಒಬ್ಬ trainer ಆಗಿ, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ಅನುಭವಿಸಿದ ತೊಂದರೆಗಳನ್ನು, ಅವುಗಳನ್ನು positive ಅಗಿ ಪರಿವರ್ತಿಸಿದ ಕ್ರಮವನ್ನು ಮುಂದಿನ ಲೇಖನಗಳಲ್ಲಿ ವಿವರಿಸುತ್ತೇನೆ.
So stop talking with negative people. at the same don't aviod them also.
ದೇಹದೊಳಗಿನ ಮಲ-ಮೂತ್ರದಿಂದ ಆಗಾಗ ಹೊರಹಾಕುತ್ತ, ಕೊಂಚ ಸಹಿಸಿಕೊಳ್ಳುತ್ತಾ ನಾವು ಬದುಕಬೇಕಲ್ಲ ಕನಿಷ್ಠ ನಮಗಾಗಿಯಾದರೂ!

1 comment:

  1. Heard about negetive thinking but its really good article which tells about avoiding negetive thinking people.

    ReplyDelete